ಅಮಿತ್ ಶಾ-ಮೋದಿಯವರ ಜೋಡಿ ಕೃಷ್ಣ-ಅರ್ಜುನರಂತೆ: ರಜಿನಿಕಾಂತ್

Update: 2019-08-11 10:13 GMT

ಚೆನ್ನೈ, ಆ.11: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೆ ವಿಧಿಯನ್ನು ರದ್ದುಗೊಳಿಸಿದ್ದಕ್ಕಾಗಿ ನಟ, ರಾಜಕಾರಣಿ ರಜಿನಿಕಾಂತ್ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಅಭಿನಂದಿಸಿದ್ದಾರೆ.

“ಮಿಶನ್ ಕಾಶ್ಮೀರಕ್ಕಾಗಿ ನಿಮಗೆ ಅಭಿನಂದನೆಗಳು. ಪಾರ್ಲಿಮೆಂಟ್ ನಲ್ಲಿ ನಿಮ್ಮ ಭಾಷಣ ಅದ್ಭುತವಾಗಿತ್ತು. ಅಮಿತ್ ಶಾ ಮತ್ತು ಮೋದಿ ಜೋಡಿ ಕೃಷ್ಣ-ಅರ್ಜುನರಂತೆ” ಎಂದವರು ಹೇಳಿದರು.

ಇದೇ ಸಂದರ್ಭ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಅಭಿನಂದಿಸಿದ ರಜಿನಿಕಾಂತ್, “ವೆಂಕಯ್ಯ ನಾಯ್ಡು ಅವರು ಯಾವತ್ತೂ ಜನರ ಹಿತದ ಬಗ್ಗೆ ಆಲೋಚಿಸುತ್ತಾರೆ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News