ಭರತ್ ಚಿಪ್ಲಿ ಅರ್ಧಶತಕ: ಬಿಜಾಪುರಕ್ಕೆ ಜಯ

Update: 2019-08-21 17:54 GMT

 ಬೆಂಗಳೂರು, ಆ.21: ನಾಯಕ ಭರತ್ ಚಿಪ್ಲಿ ಅರ್ಧಶತಕ ಕೊಡುಗೆ ನೆರವಿನಿಂದ ಬಿಜಾಪುರ ಬುಲ್ಸ್ ತಂಡ ಬುಧವಾರ ನಡೆದ ಕೆಪಿಎಲ್ ಟ್ವೆಂಟಿ-20 ಟೂರ್ನಿಯ 10ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಮೈಸೂರು ತಂಡ ಆರಂಭಿಕ ಆಟಗಾರ ಸಿದ್ದಾರ್ಥ್(ಔಟಾಗದೆ 73, 55 ಎಸೆತ)ಅವರ ಸಾಹಸದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ಗೆಲ್ಲಲು 141 ರನ್ ಗುರಿ ಪಡೆದ ಬಿಜಾಪುರ ತಂಡ 14.4 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 114 ರನ್ ಸೇರಿಸಿದ ನವೀನ್(45, 31 ಎಸೆತ) ಹಾಗೂ ಭರತ್(77, 40 ಎಸೆತ, 7 ಬೌಂಡರಿ, 6 ಸಿಕ್ಸರ್)ಭರ್ಜರಿ ಆರಂಭ ಒದಗಿಸಿದರು. ತಂಡ 133 ರನ್ ಗಳಿಸಿದಾಗ ನವೀನ್ ಹಾಗೂ ಭರತ್ ಪೆವಿಲಿಯನ್‌ಗೆ ಸೇರಿದರು. ರಾಜು ಭಟ್ಕಳ್(ಔಟಾಗದೆ 10) ಹಾಗೂ ಚಿರಂಜೀವಿ(5)ಗೆಲುವಿನ ವಿಧಿವಿಧಾನ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News