7 ವರ್ಷದ ಪುತ್ರನೆದುರೇ ತಂದೆ-ತಾಯಿಯನ್ನು ಇರಿದು ಕೊಂದ…
ಗುರ್ಗಾಂವ್, ಸೆ.13: ಗುರ್ಗಾಂವ್ ನ ದುಂಡೆಹೇರದ ದಂಪತಿಯೊಂದನ್ನು ಅವರ ಏಳು ವರ್ಷದ ಪುತ್ರನ ಕಣ್ಣೆದುರಿಗೇ ವ್ಯಕ್ತಿಯೊಬ್ಬ ಹತ್ಯೆಗೈದ ಘಟನೆ ನಡೆದಿದೆ, ದಂಪತಿಯ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ಆರೋಪಿ ಅಭಿನವ್ ಕೊಲೆಗೀಡಾದ ವಿಕ್ರಮ್ ಸಿಂಗ್ ಸ್ನೇಹಿತನೆಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಕ್ಕೆ ಹೋಗಿ ಅಲ್ಲಿ ಉದ್ಯೋಗ ಪಡೆಯುವ ಉದ್ದೇಶದಿಂದ ಅಭಿನವ್ ನಿಂದ ವಿಕ್ರಮ್ 1.5 ಲಕ್ಷ ರೂ. ಸಾಲ ಪಡೆದಿದ್ದ. ಆದರೆ ಇದೇ ವಿಷಯಕ್ಕೆ ಗುರುವಾರ ಅವರಿಬ್ಬರ ನಡುವೆ ಜಗಳ ತಾರಕಕ್ಕೇರಿ ಕೊನೆಗೆ ಅಭಿನವ್ ಅಚಾನಕ್ಕಾಗಿ ವಿಕ್ರಮ್ಗೆ ಚಾಕುವಿನಿಂದ ಇರಿದಿದ್ದ. ತಡೆಯಲು ಬಂದ ವಿಕ್ರಮ್ ಪತ್ನಿ ಜ್ಯೋತಿಗೂ ಅಭಿನವ್ ಇರಿದ ಪರಿಣಾಮ ಇಬ್ಬರೂ ಪುತ್ರನ ಕಣ್ಣೆದುರಿಗೇ ಮೃತ ಪಟ್ಟಿದ್ದರು.
ಬೊಬ್ಬೆ ಕೇಳಿ ನೆರೆಹೊರೆಯವರು ಓಡಿ ಬಂದಿದ್ದು ಆಗ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಭಯಭೀತನಾಗಿದ್ದ ಪುತ್ರ ಅಲ್ಲಿಯೇ ನಿಂತಿದ್ದ. ಅಲ್ಲಿದ್ದ ಆರೋಪಿಯನ್ನು ಹಿಡಿದು ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದಾರೆ.
ಜಗಳ ನಡೆಯುವ ಮುನ್ನ ವಿಕ್ರಮ್ ಹಾಗೂ ಅಭಿನವ್ ಮದ್ಯ ಸೇವಿಸಿದ್ದರೆಂದು ಪೊಲಿಸರು ಹೇಳಿದ್ದಾರೆ.