ಸುದ್ದಿ ಓದುತ್ತಿದ್ದಾಗ ತನಗೆ ಕೇರಳ ರಾಜ್ಯ ಪ್ರಶಸ್ತಿ ಸಿಕ್ಕ ವಿಚಾರ ತಿಳಿದು ನಿರೂಪಕಿ ಮಾಡಿದ್ದೇನು?

Update: 2020-02-13 10:06 GMT

ತಿರುವನಂತಪುರಂ: 2018ನೇ ಸಾಲಿನ 'ಅತ್ಯುತ್ತಮ ಸುದ್ದಿ ನಿರೂಪಕಿ' ಕೇರಳ ರಾಜ್ಯ ಪ್ರಶಸ್ತಿಯನ್ನು ತಾನು ಪಡೆದ ವಿಚಾರ ನಿರೂಪಕಿಗೆ ಸುದ್ದಿ ಓದುತ್ತಿರುವಾಗಲೇ ತಿಳಿದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆ ನಿರೂಪಕಿ ಮೌನವಾಗಿದ್ದು, ನಂತರ ಸಾವರಿಸಿಕೊಂಡು ನಗುತ್ತಲೇ ಕಾರ್ಯಕ್ರಮ ಮುಂದುವರಿಸಿದ್ದಾರೆ. 'ಮಾತೃಭೂಮಿ' ಸುದ್ದಿ ವಾಹಿನಿಯ ಮುಖ್ಯ ಉಪಸಂಪಾದಕಿ ಶ್ರೀಜಾ ಶ್ಯಾಮ್ ಎಂಬವರೇ  ಸುದ್ದಿ ಓದುತ್ತಿರುವಾಗಲೇ ತನಗೆ ಪ್ರಶಸ್ತಿ ದೊರೆತ ವಿಚಾರ ತಿಳಿದ ಪತ್ರಕರ್ತೆಯಾಗಿದ್ದಾರೆ.

ಆಕೆಗೆ ಪ್ರಶಸ್ತಿ ದಕ್ಕಿದ ಕುರಿತು ಅಲ್ಲಿನ ಇತರ ಸಿಬ್ಬಂದಿಗೆ ತಿಳಿದಿದ್ದರೂ ಅದನ್ನು ತಿಳಿಸದೆ ಅಚ್ಚರಿ ನೀಡುವುದು ಅವರ  ಉದ್ದೇಶವಾಗಿತ್ತು. ಪ್ರಶಸ್ತಿ ದೊರೆತ ವಿಚಾರ ತಿಳಿಯುತ್ತಲೇ ಅರೆ ಕ್ಷಣ ಸಂತಸದಿಂದ ಮೌನಕ್ಕೆ ಶರಣಾದ ಶ್ರೀಜಾ ಅವರ ವೀಡಿಯೋ ಇದೀಗ ವೈರಲ್ ಆಗಿದೆ.  ನಂತರ ಆಕೆ ನಗುತ್ತಾ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗುವುದು ಕಾಣಿಸುತ್ತದೆ.

ನೇರ ಪ್ರಸಾರ ಕಾರ್ಯಕ್ರಮದ ವೇಳೆ ಸುದ್ದಿ ತಿಳಿದು ತಾನು ಅಚ್ಚರಿ ಹಾಗೂ ಸಂತೋಷ ಪಡುತ್ತಿದ್ದಂತೆಯೇ ಇತರ ಸಿಬ್ಬಂದಿ  ನಗುತ್ತಿರುವುದು ಕಂಡು ಬಂತು. ಪ್ರಶಸ್ತಿ ಲಭಿಸಿರುವುದಕ್ಕೆ ಖುಷಿಯಾಗಿದೆ ಎಂದು ಶ್ರೀಜಾ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News