ಸಾಮೂಹಿಕ ಸಮಾವೇಶಗಳು ಬೇಡ: ಜನರಿಗೆ ಕೇಂದ್ರದ ಸೂಚನೆ

Update: 2020-03-06 13:58 GMT

ಹೊಸದಿಲ್ಲಿ,ಮಾ.6: ಕೊರೋನವೈರಸ್ ಹರಡುವಿಕೆಯನ್ನು ತಡೆಯುವವರೆಗೆ ಸಾಮೂಹಿಕ ಸಮಾವೇಶಗಳನ್ನು ನಿವಾರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಯಾವುದೇ ಸಾಮೂಹಿಕ ಸಮಾವೇಶ ಆಯೋಜನೆಗೊಳ್ಳುತ್ತಿದ್ದರೆ, ಅದರ ಸಂಘಟಕರಿಗೆ ಅಗತ್ಯ ಮುನ್ನೆಚ್ಚರಿಕೆಗಳ ಬಗ್ಗೆ ಮಾರ್ಗದರ್ಶನ ನೀಡುವಂತೆ ಸಚಿವಾಲಯವು ಎಲ್ಲ ರಾಜ್ಯ ಸರಕಾರಗಳಿಗೂ ಸೂಚಿಸಿದೆ. ದೇಶದಲ್ಲಿ 31 ಕೊರೋನವೈರಸ್ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರದ ಈ ಸೂಚನೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News