ಕೊರೋನದಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆಯಲ್ಲಿ ಕುಟುಂಬದ ಸದಸ್ಯರೇ ಇಲ್ಲ !
Update: 2020-03-30 09:07 GMT
ಹೈದರಾಬಾದ್: ತೆಲಂಗಾಣದಲ್ಲಿ ಕೊರೋನ ವೈರಸ್ ಗೆ ಮೊದಲ ಬಲಿಯಾದ 74 ವರ್ಷದ ಹೈದರಾಬಾದ್ ನಗರದ ವೃದ್ಧನ ಅಂತ್ಯಕ್ರಿಯೆ ಶನಿವಾರ ನಡೆದಾಗ ಕೇವಲ ಆರೋಗ್ಯ ಕಾರ್ಯಕರ್ತರು ಮಾತ್ರ ಹಾಜರಿದ್ದರು.
ವೃದ್ಧನ ಕುಟುಂಬ ಸದಸ್ಯರೂ ಗೃಹ ಕ್ವಾರಂಟೈನ್ನಲ್ಲಿದ್ದುದರಿಂದ ಅವರ್ಯಾರೂ ಆತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗಿಲ್ಲ.
ವೃದ್ಧನಿಗೆ ಕೊರೋನ ವೈರಸ್ ಇರುವುದು ಅವರು ಮೃತಪಟ್ಟ ನಂತರ ಆಸ್ಪತ್ರೆಗೆ ಕರೆ ತಂದಾಗ ತಿಳಿದು ಬಂದಿತ್ತು, ಅವರಿಗೆ ಇತರ ಆರೋಗ್ಯ ಸಮಸ್ಯೆಗಳೂ ಇದ್ದವು ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.