ತಬ್ಲೀಗಿ ಜಮಾಅತ್‌ನ ವಿದೇಶಿ ಸದಸ್ಯರಿಗೆ ಕರ್ನಾಟಕ ಹೈಕೋರ್ಟ್ ವಿಧಿಸಿದ ಪ್ರಯಾಣ ನಿರ್ಬಂಧ ಆದೇಶ ಅಸಿಂಧುಗೊಳಿಸಿದ ಸುಪ್ರೀಂ

Update: 2020-11-20 18:05 GMT

 ಹೊಸದಿಲ್ಲಿ: ಕೊರೋನ ಸೋಂಕು ವ್ಯಾಪಕ ಹರಡುತ್ತಿರುವ ಸಂದರ್ಭದಲ್ಲಿ ದಿಲ್ಲಿಯಲ್ಲಿ ನಡೆದ ನಿಝಾಮುದ್ದೀನ್ ಮರ್ಕಝ್ ಕಾರ್ಯಕ್ರಮದಲ್ಲಿ ಭಾಗಿಯಾದ ಒಂಭತ್ತು ವಿದೇಶಿ ತಬ್ಲೀಗಿ ಜಮಾಅತ್ ಸದಸ್ಯರು ಭಾರತಕ್ಕೆ ಭೇಟಿ ನೀಡದಂತೆ 10 ವರ್ಷ ನಿರ್ಬಂಧ ವಿಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ಅಸಿಂಧುಗೊಳಿಸಿತು.

 ಕರ್ನಾಟಕ ಹೈಕೋರ್ಟ್‌ನ ನಿರ್ಧಾರವನ್ನು ಪ್ರಶ್ನಿಸಿ ಓರ್ವ ವಿದೇಶಿ ಜಮಾಅತ್‌ನ ಓರ್ವ ತಬ್ಲೀಗಿ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಬ್ದುಲ್ ನಝೀರ್ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ಭವಿಷ್ಯದಲ್ಲಿ ಅವರು ಭಾರತಕ್ಕೆ ಭೇಟಿ ನೀಡಲು ವೀಸಾಕ್ಕೆ ಅರ್ಜಿ ಸಲ್ಲ್ಲಿಸಿದರೆ, ಹೈಕೋರ್ಟ್‌ನ ಆದೇಶದ ಪ್ರೇರಣೆಗೆ ಒಳಗಾಗದೆೆ ಅವರ ಅರ್ಜಿಯನ್ನು ಅರ್ಹತೆಯ ಮೇಲೆ ಪರಿಗಣಿಸುವಂತೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News