"ಬಾಲ್ಯದಲ್ಲಿ ನಾನು ಕೈಗೊಂಬೆ ಪ್ರದರ್ಶನ ನೋಡಿರಲಿಲ್ಲ, ಈಗ ನೋಡುತ್ತಿದ್ದೇನೆ": ಕ್ರಿಕೆಟಿಗ ಮನೋಜ್ ತಿವಾರಿ ಟ್ವೀಟ್

Update: 2021-02-04 12:26 GMT

ಹೊಸದಿಲ್ಲಿ: ದಿಲ್ಲಿಯ ಗಡಿ ಭಾಗಗಳಲ್ಲಿ ರೈತರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಹಲವಾರು ಅಂತಾರಾಷ್ಟ್ರೀಯ ಗಣ್ಯರು ಬೆಂಬಲ ನೀಡಿದ್ದರು. ಅಂತಾರಾಷ್ಟ್ರೀಯ ಖ್ಯಾತನಾಮರ ಟ್ವೀಟ್ ಗಳು ಬರುತ್ತಿದ್ದಂತೆಯೇ ಭಾರತದ ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಬಾಲಿವುಡ್ ನಟ ನಟಿಯರು ಕೇಂದ್ರ ಸರಕಾರವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದರಲ್ಲಿ ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಸೇರಿದ್ದರು.

ಭಾರತೀಯ ಕ್ರಿಕೆಟ್ ತಂಡದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಮಾಜಿ ಆಟಗಾರ ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್ ಮುಂತಾದವರು ಟ್ವೀಟ್ ಮಾಡಿದ್ದರು. ಈ ಕುರಿತು ವ್ಯಂಗ್ಯವಾಡಿರುವ ಖ್ಯಾತ ಕ್ರಿಕೆಟಿಗ ಮನೋಜ್ ತಿವಾರಿ, "ನಾನು ಸಣ್ಣವನಿದ್ದಾಗ ಕೈಗೊಂಬೆಗಳ ಪ್ರದರ್ಶನವನ್ನು ನಾನು ನೋಡಿರಲಿಲ್ಲ. ಆದರೆ ಈಗ 35 ವರ್ಷಗಳ ಬಳಿಕ ನೋಡುವ ಅವಕಾಶ ದೊರಕಿದೆ" ಎಂದು ಮಾರ್ಮಿಕವಾಗಿ ವ್ಯಂಗ್ಯವಾಡಿದ್ದಾರೆ.

"ಈ ಟ್ವೀಟ್ ಅನ್ನು ಡಿಲೀಟ್ ಮಾಡು ಎಂದು ಕೆಲ ಹೊತ್ತಿನಲ್ಲೇ ಮೋಟಾ ಭಾಯ್ (ಅಮಿತ್ ಶಾ) ಕರೆ ಮಾಡಿ ಹೇಳಬಹುದು" ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದರೆ, "ಬೆಳಗ್ಗಿನ ವಾಕ್ ಹೋಗುವಾಗ ಎಚ್ಚರಿಕೆ ವಹಿಸಿ, ನಿಮಗೆ ಒಳ್ಳೆಯದಾಗಲಿ ಎಂದು ಅಭಿಮಾನಿಯೋರ್ವರು ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News