ಕಳ್ಳತನ ಆರೋಪ ಹೊರಿಸಿ ಯುವಕನ ತಲೆ ಬೋಳಿಸಿ ಹಲ್ಲೆಗೈದ ಗುಂಪು; ಆತ್ಮಹತ್ಯೆಗೈದ ಸಂತ್ರಸ್ತ

Update: 2021-09-21 12:52 GMT

ಜೈಪುರ್:  ಕಳ್ಳತನ ಆರೋಪ ಹೊರಿಸಿ ಕೆಲ ಜನರು  ಯುವಕನೊಬ್ಬನ ತಲೆ ಬೋಳಿಸಿ ಆತನಿಗೆ ಥಳಿಸಿದ ನಂತರ ಅವಮಾನದಿಂದ ಆತ ಆತ್ಮಹತ್ಯೆಗೈದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ದಾವ ಗ್ರಾಮದಿಂಧ ವರದಿಯಾಗಿದೆ.

ಓಮರಂ ಜಾಟ್ ಎಂಬ 25 ವರ್ಷದ ಯುವಕ ದಾವ ಗ್ರಾಮಕ್ಕೆ ತನ್ನ ಕೆಲ ಸಂಬಂಧಿಕರನ್ನು ಭೇಟಿಯಾಗಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಆತ ಮೂಲತಃ ಬಿಕಾನೇರ್ ನ ನೋಖಾ ಪಟ್ಟಣದವನಾಗಿದ್ದಾನೆ. ಆತ ಊರಿಗೆ ವಾಪಸಾದ ನಂತರ ಬಾವಿಗೆ ಹಾರಿ ಆತ್ಮಹತ್ಯೆಗೈದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಮಾನವ ಹಕ್ಕುಗಳ ಆಯೋಗ ಈ ಘಟನೆ ಕುರಿತು ಪೊಲೀಸರು ಹಾಗೂ ಬಿಕಾನೇರ್ ಆಡಳಿತದಿಂದ ವರದಿ ಕೇಳಿದೆ.

ಓಮರಂನ ತಲೆಗೂದಲು ಕತ್ತರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ನಂತರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ. ವೀಡಿಯೋ ಚಿತ್ರೀಕರಿಸುವ ಮುನ್ನವೇ ಆತನಿಗೆ ಥಳಿಸಲಾಗಿತ್ತೆಂದು ತಿಳಿದು ಬಂದಿದೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 202 ಹಾಗೂ 306 ಅನ್ವಯ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News