ಕೇರಳ: ಕೋವಿಡ್ ಪ್ರೇರಿತ ಆರ್ಥಿಕ ಸಂಕಷ್ಟದಿಂದ 'ಸರಕಾರವನ್ನು ಹೊಣೆಯಾಗಿಸಿ' ರೆಸ್ಟೋರೆಂಟ್ ಮಾಲಕ ಆತ್ಮಹತ್ಯೆ

Update: 2021-10-19 18:12 GMT
photo: The new indian express

 ಕೊಟ್ಟಾಯಂ: ಕೋವಿಡ್-ಪ್ರೇರಿತ ಆರ್ಥಿಕ ಬಿಕ್ಕಟ್ಟಿನ ಮತ್ತೊಂದು ಪ್ರಕರಣದಲ್ಲಿ ಕುರಿಚಿಯ ರೆಸ್ಟೋರೆಂಟ್ ಮಾಲಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮೊದಲು ತಮ್ಮ ಫೇಸ್‌ಬುಕ್  ಪೇಜ್ ನಲ್ಲಿ ಆತ್ಮಹತ್ಯೆ ನೋಟ್ ಬರೆದಿದ್ದಾರೆ.

ಕೊಟ್ಟಾಯಂಗೆ ಸಮೀಪದ ಕನಕಕ್ಕುನ್ನು ಗುರುದೇವ ಭವನದ ನಿವಾಸಿ ಸರಿನ್ ಮೋಹನ್ (42 ವರ್ಷ) ಮೃತಪಟ್ಟವರು.

ಪೊಲೀಸರ ಪ್ರಕಾರ, ಸರಿನ್ ಮಂಗಳವಾರ ಮುಂಜಾನೆ ಕುರಿಚಿ ಲೆವೆಲ್-ಕ್ರಾಸ್ ಬಳಿ ವೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಜಿಗಿಯುವ ಮೂಲಕ ತನ್ನ ಜೀವನವನ್ನು ಕೊನೆಗೊಳಿಸಿದ್ದಾರೆ. ಕುರಿಚಿಯಲ್ಲಿ 'ವಿನಾಯಕ ಹೋಟೆಲ್' ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದ ಸರಿನ್ ರಾಜ್ಯ ಸರಕಾರವು "ಅವೈಜ್ಞಾನಿಕ" ಕೋವಿಡ್ -19 ಲಾಕ್‌ಡೌನ್ ಕ್ರಮಗಳನ್ನು ಹೇರಿದ್ದಕ್ಕಾಗಿ ತನ್ನಂತಹ ಉದ್ಯಮಿಗಳ ಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಟೀಕಿಸಿದ್ದಾರೆ.

ವಿದೇಶದಲ್ಲಿದ್ದ ಸರಿನ್ ಕೇರಳಕ್ಕೆ ವಾಪಸ್ ಬಂದು ಆರು ತಿಂಗಳ ಹಿಂದೆ ಕುರಿಚಿಯಲ್ಲಿ ರೆಸ್ಟೋರೆಂಟ್ ಆರಂಭಿಸಿದರು. ವ್ಯಾಪಾರವು ಚೆನ್ನಾಗಿ ಸಾಗುವ ಲಕ್ಷಣಗಳು ಗೋಚರಿಸಿದಾಗ ಅದೇ ಕಟ್ಟಡದಲ್ಲಿ ಜವಳಿ ಅಂಗಡಿ ಮತ್ತು ಬಿಡಿಭಾಗಗಳ ಘಟಕವನ್ನು ಆರಂಭಿಸಲು ವ್ಯವಸ್ಥೆ ಮಾಡಿದರು. ಆದಾಗ್ಯೂ, ಕೋವಿಡ್ -19 ರ ಎರಡನೇ ಅಲೆಯ  ಸಮಯದಲ್ಲಿ ವಿಧಿಸಲಾದ ಲಾಕ್‌ಡೌನ್  ಅವರ ಆದಾಯದ ಮೇಲೆ ಪರಿಣಾಮ ಬೀರಿತು. ಅವರು  ಕಟ್ಟಡಕ್ಕೆ ತಿಂಗಳಿಗೆ 35,000 ರೂ. ಬಾಡಿಗೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News