ಮೊದಲ ಟೆಸ್ಟ್: ವೃದ್ಧಿಮಾನ್ ಸಹಾಗೆ ಗಾಯದ ಸಮಸ್ಯೆ, ವಿಕೆಟ್ ಕೀಪಿಂಗ್ ಮುಂದುವರಿಸಿದ ಭರತ್
Update: 2021-11-27 05:32 GMT
ಕಾನ್ಪುರ: ಭಾರತದ ಅನುಭವಿ ವಿಕೆಟ್ ಕೀಪರ್ ಹಾಗೂ ತಂಡದ ಹಿರಿಯ ಆಟಗಾರ ವೃದ್ಧಿಮಾನ್ ಸಹಾ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಮೂರನೇ ದಿನದ ಆರಂಭದಲ್ಲಿ ಕುತ್ತಿಗೆ ನೋವಿನ ಕಾರಣ ಮೈದಾನಕ್ಕೆ ಇಳಿಯಲಿಲ್ಲ.
"ವೃದ್ಧಿಮಾನ್ ಸಹಾ ಅವರ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿದೆ. ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದೆ ಹಾಗೂ ಅವರ ಚೇತರಿಕೆಯನ್ನು ಗಮನಿಸುತ್ತಿದೆ. ಸಹಾ ಅನುಪಸ್ಥಿತಿಯಲ್ಲಿ ಕೆ.ಎಸ್. ಭರತ್ ವಿಕೆಟ್ ಕೀಪಿಂಗ್ ಮಾಡುತ್ತಾರೆ" ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
37ರ ಹರೆಯದ ಸಹಾ ವಿಶ್ರಾಂತಿ ಪಡೆದಿರುವ ರಿಷಭ್ ಪಂತ್ ಬದಲಿಗೆ ಆಡುತ್ತಿದ್ದು ಭಾರತದ ಇನ್ನಿಂಗ್ಸ್ನಲ್ಲಿ ಕೇವಲ 1 ರನ್ ಗಳಿಸಿದರು ಹಾಗೂ ಅವರು ಸ್ವಲ್ಪ ಸಮಯದಿಂದ ಉತ್ತಮ ಫಾರ್ಮ್ನಲ್ಲಿರಲಿಲ್ಲ.