ಅಯೋಧ್ಯೆ: ರಾಮಮಂದಿರ ನಿರ್ಮಾಣದ 2 ನೇ ಹಂತಕ್ಕೆ ಅಡಿಪಾಯ ಹಾಕಿದ ಆದಿತ್ಯನಾಥ್

Update: 2022-06-01 07:17 GMT
Photo:PTI

ಅಯೋಧ್ಯೆ(ಯುಪಿ): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ರಾಮ ಮಂದಿರದ ಗರ್ಭಗುಡಿಯ 'ಶಿಲಾ ಪೂಜೆ' (ಪ್ರಾರ್ಥನಾ ವಿಧಿ) ನೆರವೇರಿಸಿದರು.  

ರಾಮಮಂದಿರ ಟ್ರಸ್ಟ್, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಇತರರ ಸಮ್ಮುಖದಲ್ಲಿ ಆದಿತ್ಯನಾಥ್ ಅವರು ಮಂತ್ರಗಳ ಪಠಣದ ನಡುವೆ ರಾಮಮಂದಿರದ ಗರ್ಭಗುಡಿಯ ಅಡಿಪಾಯವನ್ನು ಹಾಕಿದರು.

"ಈ ದೇವಾಲಯವು ಜನರ ನಂಬಿಕೆಯ ಸಂಕೇತವಾಗಿದೆ. ಇದು 'ರಾಷ್ಟ್ರ ಮಂದಿರ' ಆಗಿರುತ್ತದೆ. ಅದರ ಕೆಲಸವು ಪೂರ್ಣ ವೇಗದಲ್ಲಿ ಮುಂದುವರಿಯುತ್ತದೆ" ಎಂದು ಆದಿತ್ಯನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News