ರಾಷ್ಟ್ರಲಾಂಛನ ವಿವಾದ: 'ಹಿಂದೆ', 'ಈಗ' ಚಿತ್ರಗಳನ್ನು ಪೋಸ್ಟ್ ಮಾಡಿದ ನಟ ಪ್ರಕಾಶ್ ರಾಜ್

Update: 2022-07-14 12:48 GMT

ಚೆನ್ನೈ: ನೂತನ ಸಂಸತ್ ಭವನ ಕಟ್ಟಡದ ಮೇಲೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ರಾಷ್ಟ್ರಲಾಂಛನ ಮೂಲ ಲಾಂಛನದಂತಿಲ್ಲ ಹಾಗೂ ಸಿಂಹಗಳನ್ನು ಕೆರಳಿದ ರೂಪದಲ್ಲಿ ಬಿಂಬಿಸಲಾಗಿದೆ ಎಂಬ ಆರೋಪಗಳ ಕುರಿತಂತೆ ಹಿರಿಯ ನಟ ಪ್ರಕಾಶ್ ರಾಜ್ ಕೂಡ ತಮ್ಮ #ಜಸ್ಟ್ ಆಸ್ಕಿಂಗ್ ಹ್ಯಾಶ್ ಟ್ಯಾಗ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಅವರು 'ಹಿಂದೆ,' 'ಈಗ' ಶೀರ್ಷಿಕೆಗಳನ್ನು ನೀಡಿ ಶ್ರೀ ರಾಮ ಮತ್ತು ಹನುಮಾನ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದು ಈಗ ಶೀರ್ಷಿಕೆಯ ಅಡಿಯಲ್ಲಿ ಇಬ್ಬರ ಮೊಗದಲ್ಲೂ ಆಕ್ರೋಶವಿರುವುದು ಕಾಣಿಸುತ್ತದೆ. ಜೊತೆಗೆ ಮೂಲ ರಾಷ್ಟ್ರ ಲಾಂಛನ ಹಾಗೂ ಇತ್ತೀಚೆಗೆ ಅನಾವರಣಗೊಳಿಸಿರುವ ರಾಷ್ಟ್ರಲಾಂಛನದ ತುಲನಾತ್ಮಕ ಚಿತ್ರವನ್ನೂ ಪ್ರಕಾಶ್ ರಾಜ್ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News