ಪಶ್ಚಿಮಬಂಗಾಳ: ರಿಕ್ಷಾ-ಬಸ್ ಢಿಕ್ಕಿ; 9 ಮಂದಿ ಸಾವು

Update: 2022-08-09 18:13 GMT
Photo: NDTV 

ಕೋಲ್ಕತ್ತಾ, ಆ. 9: ಪಶ್ಚಿಮಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ-60ರಲ್ಲಿ ಮಂಗಳವಾರ ಅಪರಾಹ್ನ  ಆಟೋ ರಿಕ್ಷಾ ಹಾಗೂ ರಾಜ್ಯ ರಸ್ತೆ ಸಾರಿಗೆಯ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 8 ಮಹಿಳಾ ರೈತ ಕಾರ್ಮಿಕರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ. 

ರಾಮ್‌ಪುರ್ಹಾತ್ ಸಮೀಪದ ಮಲ್ಲಾರ್‌ಪುರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಜನರಿಂದ ತುಂಬಿದ್ದ ಆಟೋ ರಿಕ್ಷಾ ಹಾಗೂ ದಕ್ಷಿಣ ಬಂಗಾಳ ರಾಜ್ಯ ರಸ್ತೆ ಸಾರಿಗೆ ನಿಗಮ (ಎಸ್‌ಬಿಎಸ್‌ಟಿಸಿ) ಬಸ್ ಢಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  
ರಿಕ್ಷಾದಲ್ಲಿದ 8 ಮಂದಿ ಪ್ರಯಾಣಿಕರು ಹಾಗೂ  ಚಾಲಕ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಬಿರ್ಭೂಮ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ನಾಗೇಂದ್ರ ನಾಥ್ ತ್ರಿಪಾಠಿ ತಿಳಿಸಿದ್ದಾರೆ. 
ಮಹಿಳೆಯರು ಹೊಲದಿಂದ ರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದರು.    ಬಸ್ಸು ದುರ್ಗಾಪುರದಿಂದ ಆರಾಮ್‌ಬಾಗ್‌ಗೆ ತೆರಳುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News