​ಕುಂದಾಪುರ: ಹಿಂಜಾವೇಯಿಂದ ಮಾನವ ಸರಪಳಿ ರಚನೆ

Update: 2022-08-18 14:06 GMT

ಕುಂದಾಪುರ, ಆ.18: ಸಾವರ್ಕರ್, ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದಾರೆ. ದೇಶಕ್ಕೋಸ್ಕರ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ ಅವರನ್ನು ಕೆಲವರು ಅಪಮಾನ ಮಾಡುತ್ತಿರುವುದು ಖಂಡನೀಯ ಎಂದು ಹಿಂದೂ ಯುವವಾಹಿನಿಯ ಪ್ರಮುಖ್ ಅಭಿಜಿತ್ ಕರ್ಕುಂಜೆ ಹೇಳಿದ್ದಾರೆ.

ಸಾವರ್ಕರ್ ಅವರಿಗೆ ಮಾಡಲಾಗುತ್ತಿರುವ ಅವಮಾನವನ್ನು ಖಂಡಿಸಿ, ಹಿಂದೂ ಜಾಗರಣ ವೇದಿಕೆ ಯುವ ವಿಭಾಗ, ಹಿಂದೂ ಯುವ ವಾಹಿನಿ ಕುಂದಾಪುರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಇಲ್ಲಿನ ಶಾಸ್ತ್ರೀವೃತ್ತದಲ್ಲಿ ನಡೆಸಿದ ನಾನೂ ಸಾವರ್ಕರ್, ನಾವೂ ಸಾವರ್ಕರ್ ಮಾನವ ಸರಪಳಿ ಅಭಿಯಾನದಲ್ಲಿ ಅವರು ಮಾತನಾಡುತಿದ್ದರು.

ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಪ್ರವೀಣ್ ಯಕ್ಷಿಮಠ, ಶಂಕರ್ ಕೋಟ, ಉಮೇಶ್ ನಾಯ್ಕ್ ಸೂಡ, ಹಿಂದೂ ಯುವ ವಾಹಿನಿ ಜಿಲ್ಲಾ ಸಂಯೋಜಕ ರಿತೇಶ್, ಕಿರಣ್ ಕೋಟೇಶ್ವರ, ಆದರ್ಶ್ ಕೋಟೇಶ್ವರ, ರಾಕೇಶ್ ಕೋಟೇಶ್ವರ, ಪುನೀತ್ ಕೋಟೇಶ್ವರ, ಸುಶಾನ್ ದೇವ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News