ಶಾಲಾ ಮಕ್ಕಳಿಗೆ ಪುಸ್ತಕ, ಶೂ ವಿತರಿಸಿ ಉಡುಪಿ ಶಾಸಕರಿಂದ ತಾಯಿಯ ಜನ್ಮದಿನಾಚರಣೆ
Update: 2022-08-29 18:42 IST
ಉಡುಪಿ, ಆ.29: ಉಡುಪಿ ಶಾಸಕ ಕೆ.ರಘುಪತಿ ಭಟ್ ತನ್ನ ತಾಯಿ ಸರಸ್ವತಿ ಬಾರಿತ್ತಾಯ ಅವರ 83ನೇ ಜನ್ಮದಿನವನ್ನು ಇಂದು ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಶೂ ವಿತರಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಶಾಸಕರ ತಾಯಿ ಸರಸ್ವತಿ ಬಾರಿತ್ತಾಯ, ಕುಟುಂಬದವ ರಾದ ದಾಮೋದರ ಬಾರಿತ್ತಾಯ, ರಮೇಶ್ ಬಾರಿತ್ತಾಯ, ಶಾಂತ, ಜಯಶ್ರೀ, ಗಾಯತ್ರಿ ಬಾರಿತ್ತಾಯ, ಶಾಂತಾರಾಮ್ ಭಟ್, ಮಂದಾಕಿಣಿ ಭಟ್, ಪ್ರೇಮಾ ಭಟ್, ಸತೀಶ್ ಭಟ್, ಶಿಲ್ಪಾಆರ್.ಭಟ್, ರಾಹುಲ್, ರಾಕೇಶ್, ರೆಯ್ಯಾನ್ಶ್, ಶಾಲೆಯ ಸಂಚಾಲಕ ಬ್ರಿಜಿತ್ ಕರ್ನೇಲಿಯೊ, ಶಾಲೆಯ ಹಳೆ ವಿದ್ಯಾರ್ಥಿಗಳಾದ ಸದಾನಂದ, ಶಾಲಾ ಮುಖ್ಯೋಪಾಧ್ಯಾಯ ಸಂತೋಷ್ ಕರ್ನೇಲಿಯೊ ಉಪಸ್ಥಿತರಿದ್ದರು.