ಉತ್ತರಾಖಂಡ ಯುವತಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿಯಾಗಿರುವ ತನ್ನ ಪುತ್ರನನ್ನು ಸಮರ್ಥಿಸಿಕೊಂಡ ಬಿಜೆಪಿಯ ಉಚ್ಚಾಟಿತ ನಾಯಕ

Update: 2022-09-25 10:39 GMT
ವಿನೋದ್ ಆರ್ಯ, Photo: Screengrab

ಹೊಸದಿಲ್ಲಿ: 19 ರ  ಹರೆಯದ ದ ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ತನ್ನ ಮಗನನ್ನು ಬಿಜೆಪಿಯ ಉಚ್ಚಾಟಿತ ನಾಯಕ ವಿನೋದ್ ಆರ್ಯ(Expelled BJP leader Vinod Ary), ಆತ  ಸೀದಾ ಸಾದಾ ಬಾಲಕ (ಸರಳ ಹುಡುಗ) ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪುತ್ರ ಪುಲ್ಕಿತ್ ಬಹಳ ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ., ನ್ಯಾಯಯುತ ತನಿಖೆಯಾಗಲಿ ಎಂದು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ, ನನ್ನ ಇನ್ನೊಬ್ಬ ಮಗ ಅಂಕಿತ್ ಕೂಡ ರಾಜೀನಾಮೆ ನೀಡಿದ್ದಾನೆ ಎಂದರು.

ಉತ್ತರಾಖಂಡ್‌ನ ಪೌರಿ ರೆಸಾರ್ಟ್‌ನಲ್ಲಿ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಆರ್ಯ ಅವರ  ಇನ್ನೊಬ್ಬ ಪುತ್ರನನ್ನು ಬಂಧಿಸಿದ ಒಂದು ದಿನದ ನಂತರ ಬಿಜೆಪಿ ಶನಿವಾರ ವಿನೋದ್ ಆರ್ಯ ಹಾಗೂ  ಅವರ ಮಗನನ್ನು ಪಕ್ಷದಿಂದ ಹೊರಹಾಕಿದೆ. ಆರೋಪಿಯ ಸಹೋದರನನ್ನು ರಾಜ್ಯ ಒಬಿಸಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಸರಕಾರ ತೆಗೆದುಹಾಕಿದೆ.

ತನ್ನ ಮಗ ನಿರಪರಾಧಿ ಎಂದು ಹೇಳಿರುವ ಬಿಜೆಪಿಯ ಮಾಜಿ ನಾಯಕ ವಿನೋದ್ ಆರ್ಯ, "ನನ್ನ ಮಗ ಸರಳ ವ್ಯಕ್ತಿತ್ವದ ಹುಡುಗ ಹಾಗೂ ಆತ ತನ್ನ ಕೆಲಸದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾನೆ, ನನ್ನ ಮಗ ಪುಲ್ಕಿತ್ ಮತ್ತು ಕೊಲೆಯಾದ ಹುಡುಗಿ ಇಬ್ಬರಿಗೂ ನ್ಯಾಯ ಬೇಕು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News