ಮೊರ್ಬಿ ಸೇತುವೆ ಕುಸಿತ ಕುರಿತ ಟ್ವೀಟ್ : ಟಿಎಂಸಿ ವಕ್ತಾರ ಸಾಕೇತ್ ಗೋಖಲೆಗೆ ಜಾಮೀನು

Update: 2022-12-08 14:01 GMT

ಅಹ್ಮದಾಬಾದ್,ಡಿ.8: ಮೊರ್ಬಿ ತೂಗುಸೇತುವೆ ಕುಸಿತ ಕುರಿತು ಟ್ವೀಟ್‌ಗಾಗಿ ಗುಜರಾತ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಟಿಎಂಸಿಯ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ(Saket Gokhale)ಯವರಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಟಿಎಂಸಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಡೆರೆಕ್ ಒ’ಬ್ರಿಯಾನ್(Derek O'Brien) ಅವರು ಗುರುವಾರ ಈ ಕುರಿತು ಟ್ವೀಟಿಸಿದ್ದಾರೆ. ಗೋಖಲೆ ಬಂಧನವು ಟಿಎಂಸಿ ಮತ್ತು ಬಿಜೆಪಿ ನಡುವೆ ಹೊಸ ಸಂಘರ್ಷವನ್ನು ಹುಟ್ಟುಹಾಕಿತ್ತು.

ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲ ಮಜೀದ್ ಮೆಮನ್ ನೇತೃತ್ವದ ತಂಡವು ಗೋಖಲೆ ಪರವಾಗಿ ವಾದಿಸಿತ್ತು ಎಂದು ಒ’ಬ್ರಿಯಾನ್ ತಿಳಿಸಿದ್ದಾರೆ.

Similar News