ಪಠಾಣ್ ಚಿತ್ರಕ್ಕೆ ವೀಕ್ಷಕರಿಲ್ಲ ಎಂದು ಹೇಳಿ ನಗೆಪಾಟಲಿಗೀಡಾದ ಸುದರ್ಶನ್‌ ಟಿವಿ ವರದಿಗಾರ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

Update: 2023-01-25 18:27 GMT

ಹೊಸದಿಲ್ಲಿ: ಶಾರುಖ್‌ ಖಾನ್‌(Shah Rukh Khan) ಅಭಿನಯದ ಪಠಾಣ್‌(Pathan) ಚಿತ್ರದ ಬಗ್ಗೆ ಅಪಪ್ರಚಾರ ಮಾಡಲು ಬಂದ ಬಲಪಂಥೀಯ ಟಿವಿ ಮಾಧ್ಯಮ ಸುದರ್ಶನ್‌ ಪತ್ರಕರ್ತನನ್ನು ಶಾರುಖ್‌ ಅಭಿಮಾನಿಗಳು ತೀವ್ರ ಮುಜುಗರಕ್ಕೆ ಈಡಾಗಿಸಿದ ಘಟನೆ ನಡೆದಿದೆ.

ದಿಲ್ಲಿಯ ಪಿವಿಆರ್‌(PVR) ಮಂದಿರದ ಮುಂದೆ ವರದಿಗಾರಿಕೆಗೆ ಬಂದ ಸುದರ್ಶನ್‌ ಟಿವಿಯ ಪತ್ರಕರ್ತ ಸಾಗರ್‌ ಕುಮಾರ್‌(Sagar Kumar) “ಪಠಾಣ್‌ ಚಿತ್ರ ಪ್ರದರ್ಶನ ನಡೆಯುತ್ತಿರುವ ಚಿತ್ರ ಮಂದಿರ ಖಾಲಿ ಹೊಡೆಯುತ್ತಿದೆ” ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಸುದರ್ಶನ್‌ ಟಿವಿ ಸಂಪಾದಕ ಸುರೇಶ್‌ ಚವ್ಹಾಂಕೆ(Suresh Chavhanke) ಕೂಡಾ ಹಂಚಿಕೊಂಡಿದ್ದರು.

ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಅದರಲ್ಲಿ ಅದೇ ಥಿಯೇಟರ್‌ಗೆ ಚಿತ್ರ ವೀಕ್ಷಿಸಲು ಬಂದ ಶಾರುಖ್‌ ಅಭಿಮಾನಿಗಳಿಗೆ ಟಿಕೆಟ್‌ ದೊರೆಯದಷ್ಟು ಬೇಡಿಕೆ ಇರುವುದಾಗಿ ಹೇಳಲಾಗಿದೆ. ವರದಿಗಾರಿಕೆಗೆ ಬಂದ ಸುದರ್ಶನ್‌ ಪತ್ರಕರ್ತನ ಬಳಿಯೇ ಶಾರುಖ್‌ ಅಭಿಮಾನಿಗಳು, ಚಿತ್ರ ವೀಕ್ಷಣೆಗೆ ಟಿಕೆಟ್ ದೊರೆಯುತ್ತಿಲ್ಲ, ಅಂತಹದ್ದರಲ್ಲಿ ಥಿಯೇಟರ್‌ ಖಾಲಿ ಹೊಡೆಯುತ್ತಿದೆ ಎಂದು ಯಾಕೆ ಸುಳ್ಳು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್‌ ಆಗಿದೆ.

ಇದನ್ನು ಓದಿ : ಬಹಿಷ್ಕಾರದ ಕರೆಯ ನಡುವೆಯೂ ವ್ಯಾಪಕ ಮೆಚ್ಚುಗೆ ಪಡೆದ 'ಪಠಾಣ್'

Similar News