ರಮಾನಾಥ ಶೆಟ್ಟಿ
Update: 2025-11-20 23:33 IST
ಶಿರ್ವ: ಕಳೆದ 40 ವರ್ಷಗಳಿಂದ ಬಂಟಕಲ್ಲಿನಲ್ಲಿ ಮಲ್ಲಿಗೆ ಕಟ್ಟೆಯನ್ನು ನಡೆಸುತ್ತಿದ್ದ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು ನಿವಾಸಿ ರಮಾನಾಥ ಶೆಟ್ಟಿ ಎಚ್.(78) ಮಂಗಳವಾರ ಹೃದಯಾಘಾತದಿಂದ ನಿಧನರಾದರು.
ಬಂಟಕಲ್ಲು ಅಂಚೆ ಕಛೆರಿಯ ನಿವೃತ್ತ ಅಂಚೆಪಾಲಕರು, ಹೇರೂರು ಶ್ರೀಮಹಾಲಿಂಗೇಶ್ವರ ದೇವಳದ ಮುಖ್ಯಸ್ಥ, ಬಂಟಕಲ್ಲು ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.