ಕಲಬುರಗಿ: ಮೂಕನಾಯಕ ಪ್ರಶಸ್ತಿಗೆ ಕೆ. ನೀಲಾ ಆಯ್ಕೆ
Update: 2025-01-03 10:53 IST
ಕಲಬುರಗಿ: ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ 2023ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ಪ್ರಗತಿಪರ ಚಿಂತಕಿ ಹಾಗೂ ಹೋರಾಟಗಾರ್ತಿ ಕೆ.ನೀಲಾ ಅವರು ಆಯ್ಕೆಯಾಗಿದ್ದಾರೆ.
ಕೆ. ನೀಲಾ ಅವರು ಸಾಮಾಜಿಕ ಕಳಕಳಿಯ ಜನಪರ ಹೋರಾಟಗಳಲ್ಲಿ ಮತ್ತು ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳ ಪ್ರಚಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.