×
Ad

ಉಪ್ಪಳ: ಜೀಪ್-ಸ್ಕೂಟರ್ ಢಿಕ್ಕಿ; ಬಾಲಕ ಮೃತ್ಯು

Update: 2023-11-05 11:57 IST

ಕಾಸರಗೋಡು: ಜೀಪು ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ 10ನೇ ತರಗತಿಯ ಬಾಲನೊಬ್ಬ ಮೃತಪಟ್ಟ ಘಟನೆ ಪೈವಳಿಕೆ ಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೃತ ಬಾಲಕನನ್ನು ಪೈವಳಿಕೆ ಲಾಲ್ ಬಾಗ್ ನಿವಾಸಿ ಇಬ್ರಾಹಿಂ ಮೊಯ್ದಿನ್ ರವರ ಪುತ್ರ ಇಫ್ರಾಝ್ ಎಂದು ಗುರುತಿಸಲಾಗಿದೆ. ಈತ ಉಪ್ಪಳ ತಹಾನಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ.

ಗೆಳೆಯನ ಜೊತೆ ಮಸೀದಿಯಿಂದ ತೆರಳುತ್ತಿದ್ದಾಗ ರಾತ್ರಿ 11 ಗಂಟೆ ಸುಮಾರಿಗೆ ಮನೆ ಸಮೀಪ ಈ ಅಪಘಾತ ನಡೆದಿದೆ. 

ಸ್ಕೂಟರ್ ನ ಮುಂದಿನಿಂದ ತೆರಳುತ್ತಿದ್ದ ಜೀಪು ತಿರುವು ರಸ್ತೆ ಯಲ್ಲಿ ಒಮ್ಮೆಲೆ ಬ್ರೇಕ್ ಹಾಕಿದಾಗ ಈ ಅಪಘಾತ ನಡೆದಿದ್ದು, ಹಿಂಬದಿ ಕುಳಿತಿದ್ದ ಇಫ್ರಾಝ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.

ಮೃತ ದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಗುತ್ತದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News