ಲಿಂಗಸುಗೂರು | ಸಿಡುಲು ಬಡಿದು ವ್ಯಕ್ತಿಗೆ ಗಂಭೀರ ಗಾಯ
Update: 2025-04-22 22:26 IST
ಸಾಂದರ್ಭಿಕ ಚಿತ್ರ
ರಾಯಚೂರು : ಸಿಡಿಲು ಬಡಿದು ವ್ಯಕ್ತಿಯೊರ್ವರು ಗಂಭೀರ ಗಾಯಗೊಂಡ ಘಟನೆ ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಟ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬುದ್ದಿನ್ನಿ ಗ್ರಾಮದಲ್ಲಿ ಜರುಗಿದೆ.
ಗುಂಡಪ್ಪ ಬಸಣ್ಣ ಬಡಗಿ (25) ಗಂಭೀರ ಗಾಯಗೊಂಡ ಯುವಕ ಎನ್ನಲಾಗಿದೆ. ಕುರಿ ಕಾಯಲು ಹೋದಾಗ ಸಂಜೆ ಏಕಾಏಕಿ ಗುಡುಗು ಸಹಿತ ಮಳೆ ಪ್ರಾರಂಭವಾಗಿದೆ. ಕುರಿಗಳನ್ನು ಹಿಂತಿರುಗಿ ಮನೆ ಕಡೆಗೆ ಬರುವಾಗ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದೆ.
ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡ ಯುವಕನನ್ನು ಲಿಂಗಸುಗೂರಿನ ಬಸವಪ್ರಭು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.
ಯುವಕನಿಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ.