×
Ad

ರಾಯಚೂರು | ಸಾರಿಗೆ ಬಸ್‌ ಹರಿದು ಬೈಕ್‌ ಸವಾರ ಮೃತ್ಯು

Update: 2024-11-15 22:36 IST

ಸಾಂದರ್ಭಿಕ ಚಿತ್ರ PC:ANI

ರಾಯಚೂರು : ಇಲ್ಲಿನ ನೆಲಹಾಳ‌ ಕ್ಯಾಂಪ್ ಗ್ರಾಮದಲ್ಲಿ ಬೈಕ್ ಸವಾರನ ಮೇಲೆ ಸರಕಾರಿ ಬಸ್ ಹರಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತ ಬೈಕ್‌ ಸವಾರನ್ನು ಭೀಮೇಶ (39) ಎಂದು ಗುರುತಿಸಲಾಗಿದೆ. ದಿನ್ನಿಯಿಂದ ನೆಲಹಾಳ ಕ್ಯಾಂಪ್‌ಗೆ ಹೋಗುತ್ತಿದ್ದ‌ ಬಸ್ ವೇಗವಾಗಿ ಚಲಿಸುತ್ತಿತ್ತು, ಇದೇ‌ ವೇಳೆ ‌ನೆಲಹಾಳನಿಂದ ತನ್ನ ಮನೆಗೆ ಭೀಮೇಶ ಬೈಕ್‌ನಲ್ಲಿ‌ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸವಾರನ ತಲೆಯ ಮೇಲೆ ಬಸ್ ಹರಿದಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಯರಗೇರಾ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News