×
Ad

ರಾಯಚೂರು | ಗಾಲಿಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾಫರ್ ಮೊಹಿಯುದ್ದೀನ್‌ಗೆ ಸನ್ಮಾನ

Update: 2025-11-25 14:08 IST

ರಾಯಚೂರು: ನಗರದ ಗಾಲಿಬ್ ಮೆಮೋರಿಯಲ್‌ ಟ್ರಸ್ಟ್ ವತಿಯಿಂದ 2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ರಾಯಚೂರು ಜಿಲ್ಲೆಯವರಾದ ಜಾಫರ್ ಮೋಹಿಯುದ್ದೀನ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅನಾರೋಗ್ಯದ‌ ಕಾರಣ ಮತ್ತೊರ್ವ ಪ್ರಶಸ್ತಿ ಪುರಸ್ಕೃತರಾದ ರತ್ನಮ್ಮ‌ ದೇಸಾಯಿಯವರು ಗೈರಾಗಿದ್ದರು.

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶರಾದ ಮಾರುತಿ‌ ಬಾಗಡೆ ಯವರು‌ ಮಾತನಾಡಿ, ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಸರಕಾರ ಪ್ರಶಸ್ತಿ ನೀಡುತ್ತಾ ಬಂದಿದೆ. ನಮ್ಮ ರಾಯಚೂರು ಜಿಲ್ಲೆಯ ಒಬ್ಬರು ಮಹನಿಯರಿಗೆ ಈ ಪ್ರಶಸ್ತಿ ದೊರೆತಿರುವದು ಅತ್ಯಂತ ಖುಷಿಯ ಸಂದರ್ಭ‌ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾಫರ್ ಮೋಹಿಯುದ್ದೀನ್‌ ಅವರು, ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದಕ್ಕಿಂತ ಹುಟ್ಟೂರಲ್ಲಿ ಸನ್ಮಾನ ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಹೇಳಿದರು.

ನಾನು ವಿದ್ಯಾರ್ಥಿ ದೆಸೆಯಿಂದಲೇ ನಾಟಕಗಳಲ್ಲಿ, ಸಿನೆಮಾಗಳಲ್ಲಿ ಪಾತ್ರ ಮಾಡುತ್ತಾ ಬಂದಿದ್ದೇನೆ, ಹಲವು ಕಲಾತ್ಮಕ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ, ಇಂದಿನ ಯುವಕರು ಸಹ ಇಂತಹ ಅಭಿರುಚಿ ಬೆಳೆಸಿಕೊಳ್ಳಬೇಕಿದೆ. ಇತ್ತೀಚಿಗೆ ರಾಯಚೂರು ಜಿಲ್ಲೆಯ ಹಲವಾರು ಯುವಕರು ಸಿನೆಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ, ಇನ್ನೂ ಹೆಚ್ಚಿನ ಪ್ರೋತ್ಸಾಹ ಅಂತಹ ಯುವಕರಿಗೆ ಅವಶ್ಯಕತೆಯಿದೆ ಎಂದು ಹೇಳಿದರು.

ಗಾಲಿಬ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾದ ಸೈಯದ್‌ ತಾರೀಖ್ ಹಸನ್ ರಜ್ವಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಟ್ರಸ್ಟ ಸದಸ್ಯ ಡಾ.ರಝಾಕ್‌ ಉಸ್ತಾದ್‌ ನಿರೂಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಾಗೂ ಟ್ರಸ್ಟ್ ಸದಸ್ಯ ಮಲ್ಲಿಕಾರ್ಜುನ , ವಕೀಲರ‌ ಸಂಘದ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಟ್ರಸ್ಟ್ ಸದಸ್ಯ ನೂರ‌ ಮುಹಮ್ಮದ , ಅನ್ವರ್‌ ವಾಹೀದ್‌ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News