×
Ad

ಸೊರಬ | ಬಾಲಕನ ಗಲ್ಲಕ್ಕೆ ಬರೆ ಹಾಕಿದ ಅಂಗನವಾಡಿ ಸಹಾಯಕಿ : ಪೋಷಕರ ಆರೋಪ

Update: 2025-10-31 23:12 IST

ಸಾಂದರ್ಭಿಕ ಚಿತ್ರ | PC : freepik

ಶಿವಮೊಗ್ಗ : ಅಂಗನವಾಡಿಯಲ್ಲಿ ಸಹಪಾಠಿ ಜೊತೆ ಜಗಳವಾಡಿ ಕಚ್ಚಿದ ಬಾಲಕನಿಗೆ ಅಂಗನವಾಡಿ ಸಹಾಯಕಿ ಬರೆ ಹಾಕಿರುವ ಘಟನೆ ಸೊರಬ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರೂವರೆ ವರ್ಷದ ಮಗನಿಗೆ ಬರೆ ಹಾಕಲಾಗಿದೆ ಎಂಬ ಆರೋಪ ಮಾಡಲಾಗಿದೆ.

ಬಾಲಕ ಎಂದಿನಂತೆ ಗುರುವಾರ ಅಂಗನವಾಡಿಗೆ ಬಂದಿದ್ದಾನೆ. ಈ ವೇಳೆ ಬಾಲಕ ತನ್ನ ಸಹಪಾಠಿಯೊಂದಿಗೆ ಜಗಳಮಾಡಿಕೊಂಡು ಆತನಿಗೆ ಕಚ್ಚಿದ್ದಾನೆ. ಇದರಿಂದ ಕೋಪಗೊಂಡ ಅಂಗನವಾಡಿ ಸಹಾಯಕಿ ಬೆಂಕಿಯಲ್ಲಿ ಚಾಕು ಕಾಯಿಸಿ, ಬಾಲಕನ ಎರಡು ಗಲ್ಲಕ್ಕೆ ಬರೆ ಹಾಕಿದ್ದಾರೆ ಎಂದು ದೂರಲಾಗಿದೆ. ಇದರಿಂದ ಬಾಲಕನ ಎರಡು ಗಲ್ಲ ಸುಟ್ಟು ಗಾಯಗೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಬಾಲಕ ಮನೆಗೆ ಬಂದಾಗ ಪೋಷಕರಿಗೆ ವಿಷಯ ತಿಳಿದು ಬಂದಿದ್ದು, ಪೋಷಕರು ಅಂಗನವಾಡಿಗೆ ಹೋದಾಗ ಅಂಗನವಾಡಿ ಸಹಾಯಕಿ ಅಲ್ಲಿಂದ ಪರಾರಿಯಾಗಿದ್ದಾರೆ. ಇದರಿಂದ ಪೋಷಕರು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News