×
Ad

ಆಶಾ ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸಿ: ಗಂಟಿಹೊಳೆ ಮನವಿ

Update: 2025-01-08 22:14 IST

ಉಡುಪಿ: ಆಶಾ ಕಾರ್ಯಕರ್ತರ ಸೇವೆ ಆರೋಗ್ಯ ಕ್ಷೇತ್ರದಲ್ಲಿ ಗುರುತರವಾದ ಪಾತ್ರ ವಹಿಸಿದೆ. ಇವರುಗಳು ಸಾರ್ವಜನಿ ಕರು ಹಾಗೂ ಆರೋಗ್ಯ ಸಂಸ್ಥೆಗಳ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಹಾಗಾಗಿ ಆಶಾ ಕಾರ್ಯ ಕರ್ತರು ಸಮಾಜದಲ್ಲಿ ಗೌರವಯುತ ವಾಗಿ ಬದುಕಲು ಪೂರಕ ವಾತಾವರಣ ಕಲ್ಪಿಸಬೇಕು. ಅವರ ಬೇಡಿಕೆಯಂತೆ ಅಗತ್ಯ ವಸ್ತುಗಳ ನಿಯಮಿತ ಬೆಲೆ ಏರಿಕೆಯಿಂದಾಗಿ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಗೌರವಯುತವಾದ ಗೌರವ ಧನ ಪಾವತಿಗೆ ಸರಕಾರ ಅಗತ್ಯ ಕ್ರಮ ವಹಿಸಬೇಕೆಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಸಾವಿರಾರು ಆಶಾ ಕಾರ್ಯಕರ್ತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿರುತ್ತಾರೆ. ಇದರಿಂದ ಆರೋಗ್ಯ ಸಂಬಂಧಿತ ಸೇವೆಗೆ ತೊಡಕಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಆಶಾ ಕಾರ್ಯಕರ್ತರ ಸಂಕಷ್ಟ ಆಲಿಸಬೇಕು ಎಂದರು.

ಮೊಬೈಲ್ ತಂತ್ರಾಂಶ ಆಧಾರಿತ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಹೇರದೇ ನೌಕರರಿಗೆ ಕನಿಷ್ಠ ಜೀವನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ನಿವೃತ್ತಿ ಸೌಲಭ್ಯ, ಗ್ರಾಚುವಿಟಿ, ಭವಿಷ್ಯ ನಿಧಿ, ವಿಮೆ ಸೇರಿದಂತೆ ಇನ್ನಿತರ ಕನಿಷ್ಠ ಸೇವಾ ಸೌಲಭ್ಯಗಳನ್ನು ಒದಗಿಸಬೇಕೆಂದು ಶಾಸಕರು ಸರಕಾರವನ್ನು ಹೇಳಿಕೆಯಲ್ಲಿ ಅಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News