Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಇರಾನ್‌ನ 1,200 ಕಿ.ಮೀ. ದಾಳಿಕೋರ...

ಇರಾನ್‌ನ 1,200 ಕಿ.ಮೀ. ದಾಳಿಕೋರ ‘ಖಾಸಿಮ್ ಬಾಸಿರ್’

ಗಿರೀಶ್ ಲಿಂಗಣ್ಣಗಿರೀಶ್ ಲಿಂಗಣ್ಣ13 Sept 2026 10:02 AM IST
share
ಇರಾನ್‌ನ 1,200 ಕಿ.ಮೀ. ದಾಳಿಕೋರ ‘ಖಾಸಿಮ್ ಬಾಸಿರ್’



ಖಾಸಿಮ್ ಬಾಸಿರ್. ಇದೊಂದು ಹಡಗು ನಿರೋಧಕ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, 1,200 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇದು ಬಹುತೇಕ 500 ಕೆಜಿಯಷ್ಟು ಸಿಡಿತಲೆಗಳನ್ನು ಒಯ್ಯಬಲ್ಲದು. ಈ ಸಿಡಿತಲೆ ಚಲಿಸಬಲ್ಲದಾಗಿದೆ. ಅಂದರೆ, ಅದು ಗಾಳಿಯಲ್ಲಿ ಎಸೆದ ಕಲ್ಲಿನಂತೆ ಒಂದು ನಿರ್ದಿಷ್ಟ ಪಥದಲ್ಲಿ ಬೀಳುವುದಿಲ್ಲ. ಬದಲಿಗೆ, ಇದು ನೆಲಕ್ಕೆ ಇಳಿಯುವ ಸಂದರ್ಭದಲ್ಲಿ ತನ್ನ ಪಥವನ್ನು ಸರಿಪಡಿಸಿಕೊಳ್ಳುತ್ತದೆ. ಇದರಿಂದ ಶತ್ರುವಿನ ರಕ್ಷಣಾ ವ್ಯವಸ್ಥೆಯ ಕೆಲಸ ಕಷ್ಟಕರವಾಗುತ್ತದೆ.

ಆರು ವರ್ಷಗಳ ಹಿಂದೆ, ಓರ್ವ ಪ್ರಮುಖ ಇರಾನಿಯನ್ ಕಮಾಂಡರ್ ತನ್ನ ಮನೆಯಿಂದ ಹೊರಗೆ ಅಮೆರಿಕನ್ ಡ್ರೋನ್ ದಾಳಿಗೆ ಸಿಲುಕಿ ಹತ್ಯೆಯಾದರು. ಡೊನಾಲ್ಡ್ ಟ್ರಂಪ್ ತನ್ನ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಈ ಹತ್ಯೆಗೆ ಆದೇಶಿಸಿದ್ದರು. ಅಂದು ಹತ್ಯೆಯಾದ ಖಾಸಿಂ ಸುಲೈಮಾನಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಭಾಗವಾದ, ಇರಾನ್‌ನ ಗಡಿಗಳಾಚೆಗಿನ ಕಾರ್ಯಾಚರಣೆಗಳನ್ನು ನಿರ್ವಹಿಸುವ, ಕುದ್ಸ್ ಫೋರ್ಸ್ ನೇತೃತ್ವ ವಹಿಸಿದ್ದರು. 2020ರಲ್ಲಿ ಆತನ ಹತ್ಯೆ ಅಮೆರಿಕ ಮತ್ತು ಇರಾನ್‌ಗಳನ್ನು ಯುದ್ಧದ ಅಂಚಿಗೆ ತಂದು ನಿಲ್ಲಿಸಿತ್ತು. ಇರಾನ್ ಖಾಸಿಮ್ ಸುಲೈಮಾನಿಯನ್ನು ನೆನಪಿಟ್ಟುಕೊಳ್ಳಲು ತನ್ನ ಒಂದು ಆಯುಧಕ್ಕೆ ಆತನ ಹೆಸರಿಟ್ಟಿದೆ. ಕಳೆದ ವಾರಾಂತ್ಯದಲ್ಲಿ, ಇದೇ ಮೊದಲ ಬಾರಿಗೆ, ಆ ಆಯುಧ ತನ್ನ ಲಾಂಚರ್‌ನಿಂದ ಚಿಮ್ಮಿ, ಸಮುದ್ರದತ್ತ ಹಾರಿತು.

ಇರಾನ್ ಯುದ್ಧ ಆರಂಭಗೊಂಡು ಈಗಾಗಲೇ ಆರು ತಿಂಗಳು ಕಳೆದಿದೆ. ಇಷ್ಟು ದಿನ ತಾನು ಹಿಡಿದಿಟ್ಟುಕೊಂಡಿದ್ದನ್ನು ಈಗ ಇರಾನ್ ಪ್ರದರ್ಶಿಸಲು ಆರಂಭಿಸಿದೆ. ಸೆಪ್ಟಂಬರ್ 5ರಂದು, ಐಆರ್‌ಜಿಸಿ ಒಂದು ಹೊಸ ಕ್ಷಿಪಣಿ ಗುಂಪನ್ನು ಪ್ರಯೋಗಿಸಿ, ತಾನು ಅಮೆರಿಕನ್ ಯುದ್ಧ ನೌಕೆಗಳ ಮೇಲೆ ದಾಳಿ ನಡೆಸಿರುವುದಾಗಿ ಘೋಷಿಸಿತು. ಆದರೆ, ಇರಾನ್ ಹೇಳಿಕೆಯನ್ನು ಅಮೆರಿಕ ಸಾರಾಸಗಟಾಗಿ ತಳ್ಳಿಹಾಕಿ, ಇರಾನ್ ತನ್ನ ನೌಕೆಗಳ ಮೇಲೆ ದಾಳಿ ನಡೆಸಿಲ್ಲ ಎಂದಿತು. ಮರುದಿನ, ಇರಾನ್ ಮತ್ತೊಂದು ಸುತ್ತಿನ ದಾಳಿ ನಡೆಸಿತು. ಈ ಬಾರಿ ಅದು ಒಂದು ಅಮೆರಿಕನ್ ವಿಮಾನ ವಾಹಕ ನೌಕೆ ಮತ್ತು ಡೆಸ್ಟ್ರಾಯರ್‌ಗಳನ್ನು ತನ್ನ ಗುರಿ ಎಂದು ಘೋಷಿಸಿತು. ಕ್ಷಿಪಣಿಗಳು ತಮ್ಮ ಗುರಿಯನ್ನು ಅತ್ಯಂತ ನಿಖರವಾಗಿ ತಲುಪಿವೆ ಎಂದು ಐಆರ್‌ಜಿಸಿ ಹೇಳಿತು. ಆದರೆ, ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಒಳಬರುತ್ತಿದ್ದ ಪ್ರತಿಯೊಂದು ಕ್ಷಿಪಣಿಯನ್ನೂ ಹೊಡೆದುರುಳಿಸಲಾಗಿದೆ ಎಂದಿತು. ಇಂತಹ ಹೇಳಿಕೆ, ಪ್ರತಿ ಹೇಳಿಕೆಗಳನ್ನು ಮೊದಲಿಗೆ ಫಸ್ಟ್ ಪೋಸ್ಟ್ ವರದಿ ಮಾಡಿತ್ತು.

ಈ ವಾದ ಪ್ರತಿವಾದಗಳ ಆಳದಲ್ಲಿರುವುದು ನಾವು ಗಮನಿಸುತ್ತಿರುವ ಆಯುಧವಾದ ಖಾಸಿಮ್ ಬಾಸಿರ್. ಇದೊಂದು ಹಡಗು ನಿರೋಧಕ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, 1,200 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇದು ಬಹುತೇಕ 500 ಕೆಜಿಯಷ್ಟು ಸಿಡಿತಲೆಗಳನ್ನು ಒಯ್ಯಬಲ್ಲದು. ಈ ಸಿಡಿತಲೆ ಚಲಿಸಬಲ್ಲದಾಗಿದೆ. ಅಂದರೆ, ಅದು ಗಾಳಿಯಲ್ಲಿ ಎಸೆದ ಕಲ್ಲಿನಂತೆ ಒಂದು ನಿರ್ದಿಷ್ಟ ಪಥದಲ್ಲಿ ಬೀಳುವುದಿಲ್ಲ. ಬದಲಿಗೆ, ಇದು ನೆಲಕ್ಕೆ ಇಳಿಯುವ ಸಂದರ್ಭದಲ್ಲಿ ತನ್ನ ಪಥವನ್ನು ಸರಿಪಡಿಸಿಕೊಳ್ಳುತ್ತದೆ. ಇದರಿಂದ ಶತ್ರುವಿನ ರಕ್ಷಣಾ ವ್ಯವಸ್ಥೆಯ ಕೆಲಸ ಕಷ್ಟಕರವಾಗುತ್ತದೆ.

ಈ ಕ್ಷಿಪಣಿಯನ್ನು ಹಳೆಯ ಇರಾನಿಯನ್ ಕ್ಷಿಪಣಿಗಳಿಂದ ಪ್ರತ್ಯೇಕವಾಗಿಸುವುದು ಇದು ಗುರಿಯನ್ನು ಹುಡುಕುವ ರೀತಿ. ಸಾಂಪ್ರದಾಯಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸುವ ಮುನ್ನವೇ ಅವುಗಳಿಗೆ ಗುರಿಯ ಸ್ಥಳವನ್ನು ನೀಡಲಾಗುತ್ತದೆ. ಅವು ಬಳಿಕ ಕುರುಡಾಗಿ ನಕ್ಷೆಯಲ್ಲಿ ಗುರುತಿಸಿರುವ ಬಿಂದುವಿನತ್ತ ಹಾರುತ್ತವೆ. ಆದರೆ, ಯುದ್ಧನೌಕೆಯಂತಹ ಚಲನಶೀಲ ಗುರಿಯ ಎದುರು ಇಂತಹ ಆಯುಧಗಳು ಅಷ್ಟು ಪರಿಣಾಮಕಾರಿ ಆಗಿರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಖಾಸಿಮ್ ಬಾಸಿರ್ ಒಂದು ಇಲೆಕ್ಟ್ರೋ ಆಪ್ಟಿಕಲ್ ಮತ್ತು ಇನ್‌ಫ್ರಾರೆಡ್ ಸೀಕರ್ ಒಯ್ಯುತ್ತದೆ. ಸರಳವಾಗಿ ಹೇಳುವುದಾದರೆ, ಈ ಕ್ಷಿಪಣಿಗೆ ಒಂದು ಜೊತೆ ಕಣ್ಣು ಮತ್ತು ತಾಪವನ್ನು ಗುರುತಿಸುವ ಸಾಮರ್ಥ್ಯವನ್ನು ನೀಡಿದಂತಾಗಿದೆ. ಆದರೆ, ಈ ಕಣ್ಣುಗಳು ಕೇವಲ ಕೊನೆಯ ಹಂತದಲ್ಲಿ ಮಾತ್ರ ತೆರೆದು, ಕೆಳಗೆ ಕಾಣಿಸುತ್ತಿರುವ ವಸ್ತು ತನಗೆ ನೀಡಲಾದ ಗುರಿಯನ್ನು ಹೋಲುತ್ತದೆಯೇ ಎಂದು ಪರಿಶೀಲಿಸುತ್ತದೆ. ಇದರೊಡನೆ, ಹಡಗಿನ ಇಂಜಿನ್‌ಗಳಿಂದ ಬರುವ ಉಷ್ಣವನ್ನೂ ಗುರುತಿಸುತ್ತದೆ. ಕ್ಷಿಪಣಿ ಉಪಗ್ರಹ ಸಂಕೇತಗಳ ಬದಲು ದೃಶ್ಯ ಮತ್ತು ತಾಪದ ಮೇಲೆ ಅವಲಂಬಿತವಾಗಿರುವುದರಿಂದ, ಇದನ್ನು ಇಲೆಕ್ಟ್ರಾನಿಕ್ ಜಾಮಿಂಗ್ ಮೂಲಕ ಕುರುಡಾಗಿಸುವುದಾಗಲಿ ಅಥವಾ ನಕಲಿ ಜಿಪಿಎಸ್ ಸಂಕೇತದ ಮೂಲಕ ಹಾದಿ ತಪ್ಪಿಸುವುದಾಗಲಿ ಸುಲಭವಲ್ಲ. ಒಂದು ಬಾರಿ ಕ್ಷಿಪಣಿ ತನ್ನ ಗುರಿಯನ್ನು ಲಾಕ್ ಮಾಡಿದರೆ, ಅದಕ್ಕೆ ಬಳಿಕ ಯಾರಿಂದಲೂ ಯಾವುದೇ ಸೂಚನೆಯ ಅಗತ್ಯವಿಲ್ಲ.

ಇರಾನ್ ನೂತನ ಕ್ಷಿಪಣಿಯನ್ನು ತನ್ನ ಬಳಿ ಇರುವ ಅತ್ಯುತ್ತಮ ಆಯುಧಗಳಲ್ಲಿ ಒಂದು ಎಂದು ಪರಿಗಣಿಸುತ್ತದೆ. ತನ್ನ ಕ್ಷಿಪಣಿ ಅಮೆರಿಕನ್ ವಾಯು ರಕ್ಷಣೆಯ ಬೆನ್ನೆಲುಬಾಗಿರುವ ಪ್ಯಾಟ್ರಿಯಟ್ ಮತ್ತು ಥಾಡ್ ವ್ಯವಸ್ಥೆಗಳನ್ನೂ ಮಣಿಸಬಲ್ಲದು ಎಂದಿದೆ. ಈ ಕ್ಷಿಪಣಿಯನ್ನು ಮೊದಲಿಗೆ ಮೇ 2025ರಲ್ಲಿ ಬಹಿರಂಗಪಡಿಸಲಾಯಿತಾದರೂ, ಕಳೆದ ವಾರಾಂತ್ಯದ ತನಕ ಅದನ್ನು ಎಂದಿಗೂ ಇರಾನ್ ಪ್ರಯೋಗಿಸಿರಲಿಲ್ಲ.

ಇರಾನ್ ಮತ್ತು ಅಮೆರಿಕಗಳು ನೀಡುತ್ತಿರುವ ಹೇಳಿಕೆಗಳ ಹಿಂದಿನ ಸತ್ಯ ಏನೇ ಇದ್ದರೂ, ಅಮೆರಿಕನ್ ನೌಕಾಪಡೆಯ ವರ್ತನೆ ಬೇರೆಯದೇ ಕಥೆ ಹೇಳುತ್ತಿದೆ. ಅಮೆರಿಕನ್ ನೌಕಾಪಡೆ ಈಗ ಇರಾನಿಯನ್ ತೀರಗಳಿಂದ ಸಾಕಷ್ಟು ದೂರದಲ್ಲಿ ಕಾರ್ಯಾಚರಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಇರಾನ್‌ನ ಆ್ಯಂಟಿ ಶಿಪ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕ್ರೂಸ್ ಕ್ಷಿಪಣಿಗಳ ಕುರಿತು ಆತಂಕ ಹೊಂದಿದೆ ಎಂದಿದ್ದಾರೆ. ಇನ್ನು ಗಲ್ಫ್ ಪ್ರದೇಶದೊಳಗೆ ಬೆಂಗಾವಲು ಕಾರ್ಯಗಳನ್ನು ಬಹುಮಟ್ಟಿಗೆ ಯುದ್ಧ ನೌಕೆಗಳ ಬದಲು ಹೆಲಿಕಾಪ್ಟರ್‌ಗಳು ನಡೆಸುತ್ತಿವೆ. ಅಮೆರಿಕನ್ ನೌಕೆಗಳು ಉದ್ದೇಶಪೂರ್ವಕವಾಗಿಯೇ ಹಾರ್ಮುಝ್ ಜಲಸಂಧಿಯಿಂದ ದೂರ ಉಳಿದಿವೆ. ಇರಾನ್ ಈಗಿನ್ನೂ ತನ್ನ ಪೂರ್ಣ ಸಾಮರ್ಥ್ಯವನ್ನು ಬಳಸದೆ, ಮುಖ್ಯವಾಗಿ ಡ್ರೋನ್‌ಗಳನ್ನು ಬಳಸುತ್ತಿದೆ. ಆದರೆ, ತಾನು ದೂರಕ್ಕೆ ತಲುಪಬಲ್ಲ ಸಾಮರ್ಥ್ಯ ಹೊಂದಿದ್ದು, ತಾನು ನಿರ್ಧರಿಸಿದಾಗ ಅಮೆರಿಕನ್ ಯುದ್ಧ ನೌಕೆಗಳ ಮೇಲೆ ದಾಳಿ ನಡೆಸಬಲ್ಲೆ ಎಂದು ತೋರಿಸಿದೆ. ಹೈಪರ್‌ಸಾನಿಕ್ ಕ್ಷಿಪಣಿಗಳು ಮತ್ತು ವಿಮಾನ ವಾಹಕ ನಾಶಕ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇರಾನ್‌ನ ಬತ್ತಳಿಕೆಯಲ್ಲಿವೆ.

ಇದು ಟೆಹರಾನ್ ಮೌನವಾಗಿಯೇ ಕೈಗೊಳ್ಳುತ್ತಿರುವ ಸಾಧನೆಯಾಗಿದೆ. ಯುದ್ಧ ನೌಕೆಗಳಿಗೆ ಹಾನಿ ಉಂಟುಮಾಡುವುದರಿಂದ ಆಚೆಗೆ, ಇದು ಒಂದಷ್ಟು ಅನುಮಾನಗಳನ್ನೂ ಸೃಷ್ಟಿಸುತ್ತಿದೆ. ಇರಾನ್‌ನ ಕ್ಷಿಪಣಿಗಳು ನಿಜಕ್ಕೂ ಗುರಿ ತಲುಪಿದವೇ? ಅಮೆರಿಕನ್ ವಿಮಾನ ವಾಹಕ ನೌಕೆಗೆ ಹಾನಿಯಾಗಿದೆಯೇ? ಇರಾನ್ ಎಷ್ಟು ಕ್ಷಿಪಣಿಗಳನ್ನು ಪ್ರಯೋಗಿಸಿತು ಮತ್ತು ಅವುಗಳ ಪೈಕಿ ಎಷ್ಟನ್ನು ತಡೆಯಲಾಯಿತು? ಎರಡು ದೇಶಗಳ ಮಿಲಿಟರಿಗಳ ಆಚೆಗಿನ ವ್ಯಕ್ತಿಗಳಿಂದ ಇದಕ್ಕೆ ಖಚಿತವಾಗಿ ಉತ್ತರಿಸಲು ಸಾಧ್ಯವಿಲ್ಲ. ಈ ಅನಿಶ್ಚಿತತೆ ಯಾವುದೇ ಸಿಡಿತಲೆಗಿಂತ ಹೆಚ್ಚು ವೇಗವಾಗಿ ಸಾಗುತ್ತಿದೆ.

ಇವೆಲ್ಲ ಹಾರ್ಡ್‌ವೇರ್‌ಗಳ ಆಚೆಗೆ ಇರುವುದು ಏನು ಎನ್ನುವುದನ್ನೂ ನಾವು ನೆನಪಿಟ್ಟುಕೊಳ್ಳಬೇಕು. ಈ ಯುದ್ಧ ನೌಕೆಗಳಲ್ಲಿ ಸಾಕಷ್ಟು ಯುವಕ ಯುವತಿಯರಿದ್ದು, ಅವರು ಹಗಲು ರಾತ್ರಿಗಳೆನ್ನದೆ ಕರ್ತವ್ಯ ನಿರ್ವಹಿಸುತ್ತಾ, ಕ್ಷಿಪಣಿಯ ಬೆಳಕು ಕಾಣಿಸುತ್ತದೋ ಎಂದು ತಮ್ಮ ಪರದೆಗಳ ಮೂಲಕ ಗಮನಿಸುತ್ತಿದ್ದಾರೆ. ಅವರ ಕುಟುಂಬಗಳು ಅದೆಷ್ಟೋ ದೂರದಲ್ಲಿ ತಮ್ಮವರ ಸುರಕ್ಷತೆಯ ಸಂದೇಶಕ್ಕಾಗಿ ಕಾದು ಕುಳಿತಿದ್ದಾರೆ. ಇನ್ನೊಂದೆಡೆ, ಇರಾನ್‌ನಲ್ಲಿ ಹಲವಾರು ವರ್ಷಗಳ ನಿರ್ಬಂಧಗಳು ಮತ್ತು ಕೊರತೆಗಳ ನಡುವೆ ಸಿಲುಕಿದ್ದ ಇಂಜಿನಿಯರ್‌ಗಳು ಉಕ್ಕಿನಂತಹ ಹಠಮಾರಿತನದಿಂದಲೇ ಆಯುಧಗಳನ್ನು ನಿರ್ಮಿಸುತ್ತಿದ್ದಾರೆ. ತಮ್ಮ ದೇಶದ ಗೌರವ ತಾವು ನಿರ್ಮಿಸುವ ಆಯುಧಗಳ ಮೇಲೆ ಅವಲಂಬಿತವಾಗಿದೆ ಎಂದು ಅವರು ಭಾವಿಸಿದ್ದಾರೆ. ಇರಾನ್ ಪಾಲಿಗಂತೂ ಈ ಕ್ಷಿಪಣಿಗಳು ಹೆಮ್ಮೆ ಮತ್ತು ಶೋಕ ಎರಡನ್ನೂ ಜೋಡಿಸಿವೆ. ಇನ್ನು ಕ್ಷಿಪಣಿಯ ವ್ಯಾಪ್ತಿಯೊಳಗಿರುವ ಶತ್ರು ನಾವಿಕರಿಗೆ ಈ ರಾತ್ರಿ ನಿಜಕ್ಕೂ ಮೌನವಾಗಿ ಕಳೆದು ಹೋಗಬಹುದೇ ಎನ್ನುವುದು ಪ್ರತಿದಿನದ ಅತ್ಯಂತ ವೈಯಕ್ತಿಕ ಹಂತದ ಕಾಡುವ ಪ್ರಶ್ನೆಯಾಗಿದೆ.

ಟೆಹರಾನ್ ಅಂತೂ ಇದು ಕೇವಲ ಆರಂಭವಷ್ಟೇ ಎಂದಿದ್ದು, ತನ್ನ ಬಳಿ ಇನ್ನೂ ಸಾಕಷ್ಟು ಬಚ್ಚಿಟ್ಟ ಆಯುಧಗಳಿವೆ ಎಂದಿದೆ. ಐಆರ್‌ಜಿಸಿ ನೀಡಬಯಸುತ್ತಿರುವ ಸಂದೇಶ ಬಹಳ ಸ್ಪಷ್ಟ. ಜನರಲ್ ಖಾಸಿಮ್ ಸುಲೈಮಾನಿ ಕಾಲವಾಗಿ ಬಹಳ ವರ್ಷ ಗಳಾಗಿರಬಹುದು. ಆದರೆ, ಆತ ಬಿಟ್ಟು ಹೋಗಿರುವ ಹೆಸರು ಇಂದಿಗೂ ಆಗಸದಲ್ಲಿ ಹಾರುತ್ತಿದೆ, ದಾಳಿ ನಡೆಸುತ್ತಿದೆ.

Tags

Iranstrike weaponQasim Basir
share
ಗಿರೀಶ್ ಲಿಂಗಣ್ಣ
ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Next Story
X