ಬೆರಳಚ್ಚು ಎಂಬುದು ಪ್ರಜಾಪ್ರಭುತ್ವದ ಅಸ್ತ್ರವೋ ಅಥವಾ ಅಡೆತಡೆಯೋ?

-ಡಾ.ವಿಜಯಕುಮಾರ ಎಚ್.ಕೆ.
ಮಾನ್ಯರೇ, ಪಡಿತರ ಮತ್ತು ಪಿಂಚಣಿಗೆ ಬಯೋಮೆಟ್ರಿಕ್ ಕಡ್ಡಾಯವಿರುವಾಗ ಚುನಾವಣೆಯಲ್ಲಿ ಇದಕ್ಕೇಕೆ ವಿನಾಯಿತಿ? ಭಾರತದಂತಹ ವಿಶಾಲ ದೇಶದಲ್ಲಿ. ಶೇ. 20 ರಿಂದ 22 ರಷ್ಟು ನಕಲಿ ಮತದಾನ ತಡೆಯಲು ತಂತ್ರಜ್ಞಾನ ಅನಿವಾರ್ಯ. ಆದರೆ ಕೇವಲ ಯಂತ್ರಗಳ ಮೇಲೆ ಅವಲಂಬಿತವಾಗುವುದು ಅಪಾಯಕಾರಿ. ತಾಂತ್ರಿಕ ದೋಷದಿಂದ ಒಬ್ಬನೇ ಒಬ್ಬ ಅರ್ಹ ಮತದಾರನಿಗೆ ಹಕ್ಕು ನಿರಾಕರಣೆಯಾದರೂ ಅದು ಸಂವಿಧಾನಕ್ಕೆ ಮಾಡುವ ದ್ರೋಹ. ಗೌಪ್ಯತೆ ಮತ್ತು ಭದ್ರತೆಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹಸಿವು
ನೀಗಿಸಲು ಬಳಸುವ ಬೆರಳಚ್ಚು ಪ್ರಜೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಧನವಾಗಬಾರದು. ಡಿಜಿಟಲ್ ಇಂಡಿಯಾದಲ್ಲಿ ಪಾರದರ್ಶಕತೆ ಬೇಕು ಆದರೆ ಅದು ಬಡವರ ಮತ್ತು ತಾಂತ್ರಿಕ ಜ್ಞಾನವಿಲ್ಲದವರ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು. ವ್ಯವಸ್ಥೆಯ ಸುಧಾರಣೆ ಹೆಸರಿನಲ್ಲಿ ಪಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಹೀಗಾಗಿ ಬೆರಳಚ್ಚು ಮತದಾನ ಸಮಯದಲ್ಲಿ ಕಡ್ಡಾಯಗೊಳ್ಳಲಿ.




