ವಿಜ್ಞಾನವನ್ನು ಸ್ವಾರ್ಥಕ್ಕೆ ಬಳಸುತ್ತಿರುವ ಜ್ಯೋತಿಷಿಗಳು: ಅಗ್ರಹಾರ ಕೃ
ಜನ ವಿಜ್ಞಾನ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು, ಅ.11: ಜ್ಯೋತಿಷಿಗಳು ಹಾಗೂ ಸುದ್ದಿ ವಾಹಿನಿಗಳು ವಿಜ್ಞಾನವನ್ನು ದುರುಪಯೋಗಪಡಿಸಿಕೊಂಡು ಜನರಲ್ಲಿ ಕಂದಾಚಾ ರವನ್ನು ಬಿತ್ತುತ್ತಿವೆ ಎಂದು ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ.
ರವಿವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಸಮಾವೇಶ-2015 ಹಾಗೂ ಜನ ವಿಜ್ಞಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನಿಗಳ ಅವಿರತ ಪರಿಶ್ರಮದಿಂದ ಟಿವಿ, ಕ್ಯಾಮರಾ, ರೇಡಿಯೋ ಅವಿಷ್ಕಾರಗೊಂಡಿವೆ. ಆದರೆ, ಇದನ್ನು ಜ್ಯೋತಿಷಿಗಳು ಹಾಗೂ ಮಾಧ್ಯಮದ ಮಾಲಕರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಆಪಾದಿಸಿದರು.
ವಿಜ್ಞಾನದ ಮುಖ್ಯ ಆಶಯವೇ ಸತ್ಯವನ್ನು ಹೇಳುವುದು. ಹೀಗಾಗಿ ವಿಜ್ಞಾನಿಗಳು ತಮ್ಮ ಜೀವವನ್ನೇ ಮುಡುಪಾಗಿಟ್ಟು ಜನರ ಬದುಕಿಗೆ ಅನುಕೂಲವಾಗಲೆಂದು ಹಲವು ಪರಿಕರಗಳನ್ನು ಆವಿಷ್ಕರಿಸಿದ್ದಾರೆ. ಆದರೆ, ಈ ಪರಿಕರಗಳನ್ನು ಮೂಲಭೂತವಾದಿಗಳು ಹಾಗೂ ಬಂಡ ವಾಳಶಾಹಿಗಳು ಅಸತ್ಯವನ್ನು ಬಿತ್ತುವುದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಂದಾಚಾರಗಳು ಹೊಸ ಹೊಸ ರೂಪದಲ್ಲಿ ಕಾಣಿಸಿ ಕೊಳ್ಳುತ್ತಿವೆ. ಹಾಗೂ ಕಂದಾಚಾರವನ್ನು ವಿರೋಧಿಸುವವರ ಮೇಲೆ ಹಲ್ಲೆ ಹಾಗೂ ಹತ್ಯೆ ಪ್ರಯತ್ನಗಳು ನಡೆಯುತ್ತಿವೆ. ಇದರ ಭಾಗವಾಗಿಯೇ ವಿಚಾರವಾದಿ, ಸಂಶೋಧಕ ಎಂ.ಎಂ.ಕಲಬುರ್ಗಿಯವರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ವೈಜ್ಞಾನಿಕತೆಯೆ ವೈಚಾರಿಕತೆಯ ತಳಹದಿಯಾಗಿದೆ. ಈ ವೈಚಾರಿ ಕತೆಯನ್ನು ಪ್ರಕರವಾಗಿ ಮೈಗೂಡಿಸಿಕೊಳ್ಳಬೇಕಾದರೆ ವೈಜ್ಞಾನಿಕತೆಯನ್ನು ಅಧ್ಯಯನ ಮಾಡುವುದು ಅಗತ್ಯವಿದೆ. ಹೀಗಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆಯನ್ನು ಬೆಳೆಸುವಂತಹ ಕಾರ್ಯಾಗಾರಗಳ ನ್ನು ಹಮ್ಮಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡು ವಂತಹ ಮನಸ್ಥಿತಿಯನ್ನು ಹುಟ್ಟು ಹಾಕಬೇಕೆಂದು ಅವರು ತಿಳಿಸಿದರು.
ಬೆಂಗಳೂರು, ಅ.11: ಜ್ಯೋತಿಷಿಗಳು ಹಾಗೂ ಸುದ್ದಿ ವಾಹಿನಿಗಳು ವಿಜ್ಞಾನವನ್ನು ದುರುಪಯೋಗಪಡಿಸಿಕೊಂಡು ಜನರಲ್ಲಿ ಕಂದಾಚಾ ರವನ್ನು ಬಿತ್ತುತ್ತಿವೆ ಎಂದು ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ.
ರವಿವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಸಮಾವೇಶ-2015 ಹಾಗೂ ಜನ ವಿಜ್ಞಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನಿಗಳ ಅವಿರತ ಪರಿಶ್ರಮದಿಂದ ಟಿವಿ, ಕ್ಯಾಮರಾ, ರೇಡಿಯೋ ಅವಿಷ್ಕಾರಗೊಂಡಿವೆ. ಆದರೆ, ಇದನ್ನು ಜ್ಯೋತಿಷಿಗಳು ಹಾಗೂ ಮಾಧ್ಯಮದ ಮಾಲಕರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಆಪಾದಿಸಿದರು.
ವಿಜ್ಞಾನದ ಮುಖ್ಯ ಆಶಯವೇ ಸತ್ಯವನ್ನು ಹೇಳುವುದು. ಹೀಗಾಗಿ ವಿಜ್ಞಾನಿಗಳು ತಮ್ಮ ಜೀವವನ್ನೇ ಮುಡುಪಾಗಿಟ್ಟು ಜನರ ಬದುಕಿಗೆ ಅನುಕೂಲವಾಗಲೆಂದು ಹಲವು ಪರಿಕರಗಳನ್ನು ಆವಿಷ್ಕರಿಸಿದ್ದಾರೆ. ಆದರೆ, ಈ ಪರಿಕರಗಳನ್ನು ಮೂಲಭೂತವಾದಿಗಳು ಹಾಗೂ ಬಂಡ ವಾಳಶಾಹಿಗಳು ಅಸತ್ಯವನ್ನು ಬಿತ್ತುವುದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಂದಾಚಾರಗಳು ಹೊಸ ಹೊಸ ರೂಪದಲ್ಲಿ ಕಾಣಿಸಿ ಕೊಳ್ಳುತ್ತಿವೆ. ಹಾಗೂ ಕಂದಾಚಾರವನ್ನು ವಿರೋಧಿಸುವವರ ಮೇಲೆ ಹಲ್ಲೆ ಹಾಗೂ ಹತ್ಯೆ ಪ್ರಯತ್ನಗಳು ನಡೆಯುತ್ತಿವೆ. ಇದರ ಭಾಗವಾಗಿಯೇ ವಿಚಾರವಾದಿ, ಸಂಶೋಧಕ ಎಂ.ಎಂ.ಕಲಬುರ್ಗಿಯವರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ವೈಜ್ಞಾನಿಕತೆಯೆ ವೈಚಾರಿಕತೆಯ ತಳಹದಿಯಾಗಿದೆ. ಈ ವೈಚಾರಿ ಕತೆಯನ್ನು ಪ್ರಕರವಾಗಿ ಮೈಗೂಡಿಸಿಕೊಳ್ಳಬೇಕಾದರೆ ವೈಜ್ಞಾನಿಕತೆಯನ್ನು ಅಧ್ಯಯನ ಮಾಡುವುದು ಅಗತ್ಯವಿದೆ. ಹೀಗಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆಯನ್ನು ಬೆಳೆಸುವಂತಹ ಕಾರ್ಯಾಗಾರಗಳ ನ್ನು ಹಮ್ಮಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡು ವಂತಹ ಮನಸ್ಥಿತಿಯನ್ನು ಹುಟ್ಟು ಹಾಕಬೇಕೆಂದು ಅವರು ತಿಳಿಸಿದರು.
Next Story