Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಸಹಗಮನ-ಪಾದವೂರದೆ ಇಟ್ಟ ಹೆಜ್ಜೆಯ ಕನಸು...

ಸಹಗಮನ-ಪಾದವೂರದೆ ಇಟ್ಟ ಹೆಜ್ಜೆಯ ಕನಸು...

ಕಾರುಣ್ಯಕಾರುಣ್ಯ24 Dec 2015 5:04 PM IST
share
ಸಹಗಮನ-ಪಾದವೂರದೆ ಇಟ್ಟ ಹೆಜ್ಜೆಯ ಕನಸು...

ಸಾಹಿತ್ಯ, ವೈಚಾರಿಕ ಕ್ಷೇತ್ರಗಳಲ್ಲ್ಲಿ ಡಾ. ಎಚ್. ಎಸ್. ಅನುಪಮಾ ಅವರ ಹೆಸರು ಆಗಾಗ ಪ್ರಸ್ತಾಪವಾಗುತ್ತಿರುತ್ತದೆ. ವೃತ್ತಿಯಲ್ಲಿ ವೈದ್ಯರಾಗಿ ತಳಸ್ತರದ ಜನರೊಂದಿಗೆ ಆಪ್ತ ಸಂಬಂಧವನ್ನು ಹೊಂದಿರುವ ಅನುಪಮಾ ಅವರು, ಪ್ರಕಾಶಕರಾಗಿ, ಸಂಘಟಕರಾಗಿ, ವಿಮರ್ಶಕಿಯಾಗಿ, ಲೇಖಕಿಯಾಗಿ ಗುರುತಿಸಲ್ಪಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರೊಬ್ಬ್ಬ ಉತ್ತಮ ಕವಯಿತ್ರಿ ಕೂಡ ಹೌದು ಎನ್ನುವುದನ್ನು ಅವರ ‘ಸಹಗಮನ’ ಕೃತಿ ಹೇಳುತ್ತಿದೆ. ಬೆನ್ನುಡಿಯಲ್ಲಿ ವಿಷ್ಣು ನಾಯ್ಕ ಅವರು ಹೇಳುವಂತೆ, ಉಮ್ಮಳವಿಲ್ಲದ ಶಾಂತ ಕವಿಯಾಗಿದ್ದಾರೆ ಅನುಪಮಾ. ಕವಿತೆಯೆನ್ನುವುದು ಅವರಿಗೆ ಕೇವಲ ಭಾವುಕ ಕ್ಷಣಗಳಲ್ಲ, ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳಲು ಇರುವ ಮಾರ್ಗ.

‘‘ನಾವು ಹೀಗೇ...

ದಿನ ರಾತ್ರಿಗಳಲ್ಲಿ

ಉಕ್ಕುತ್ತಾ ಬರಿದಾಗುತ್ತ

ಬಿಸಿಯೇರುತ್ತ ತಂಪಾಗುತ್ತ

ಕೊನರುತ್ತ ಕಮರುತ್ತ

ದಿನ-ಋತು-ವರ್ಷಗಳ

ಬದುಕೆಂಬ ಹೊಸ ಕಾವ್ಯ

ನಿತ್ಯ ಕಟ್ಟುತ್ತಲೇ ಇದ್ದೇವೆ...’’

ಎನ್ನುವ ಸಾಲುಗಳೇ ಕವಯಿತ್ರಿಯ ಕವಿತೆಯ ಉದ್ದೇಶಗಳನ್ನು ಹೇಳುತ್ತದೆ. ಕವಿತೆ ಕಟ್ಟುವುದೆಂದರೆ ಅವರಿಗೆ ಬದುಕು ಕಟ್ಟುವುದೂ ಹೌದು. ‘‘ಕುದಿಗೆ ಕುಶಲದ ಮಾತು ಗೊತ್ತೇ ಅನು?’’ ಎಂದು ತನ್ನ ಎದೆಯನ್ನೇ ಮುಟ್ಟಿ ಕೇಳುವ ಕವಯಿತ್ರಿ, ‘‘ನಟಿಸುತ್ತಾ ಕಣ್ಣು ನೀರಾಡಿದರೂ ಕ್ಷಣದ ದುಃಖ ಸುಳ್ಳಾಗಿರುವುದಿಲ್ಲ...’’ ಎಂದು ಕೆನ್ನೆ ಮುಟ್ಟಿಕೊಳ್ಳುತ್ತಾರೆ. ‘‘ಚರಿತ್ರೆ ನಿನ್ನ ನ್ಯಾಯ ಸೂಕ್ಷ್ಮದ ಮನಸಿನಲ್ಲಿದೆ/ ನಿನ್ನೆಯ ಕಲ್ಪಿಸುವ ಇಂದಿನ ಕಣ್ಣಿನಲ್ಲಿದೆ/ ಅಕ್ಷರಗಳಲ್ಲ, ಆಡದೇ ಉಳಿದವರ ಧಮನಿಗಳಲ್ಲಿದೆ/ ನೊಂದವಗೆ ಮಿಡಿವ ಎದೆ ಬಡಿತದಲಿ ಅಡಗಿದೆ...’’ ಎಂಬ ಜಾಗೃತ ರಾಜಕೀಯ ಪ್ರಜ್ಞೆಯೂ ಅವರ ಕವಿತೆಗಳಲ್ಲಿವೆ. ‘‘ನಿಶ್ಶಬ್ದ ಕೋಶದಲಿ/ ಮಾತು ಬಂದಿಯಾಗುಳಿದು/ ಎಂದೋ ಹಾರಲಿ ಒಮ್ಮೆ ಭಾವಚಿಟ್ಟೆ/ ಫಕ್ಕನೊಮ್ಮೆ ನಕ್ಕು ಬಿಡು/ ಅದುವೆ ಸಾವಿರ ಮಾತು/ ಹರಳುಗಟ್ಟಲಿ ಒಳಗೆ ಸ್ನೇಹ ಬೆಸುಗೆ...’’ ಎಂಬ ನಿರೀಕ್ಷೆಗಳು ಈ ಸಂಕಲನದ ಪುಟ ಪುಟಗಳಲ್ಲೂ ಇವೆ.

48 ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಭಾವ ಬೆಚ್ಚಗಿನ ಅನುಭವವನ್ನು ಕೊಡುವ ಶಕ್ತಿ ಇಲ್ಲಿನ ಎಲ್ಲ ಕವಿತೆಗಳಿಗೂ ಇವೆ. ಶ್ರೀ ರಾಘವೇಂದ್ರ ಪ್ರಕಾಶನ ಅಂಕೋಲಾ ಹೊರತಂದಿರುವ ಈ ಕೃತಿಯ ಮುಖಬೆಲೆ 100 ರೂ. ಆಸಕ್ತರು 94481 45370 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯ
ಕಾರುಣ್ಯ
Next Story
X