Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ‘ಹೋರಾಟದ ಹಾದಿಗೆ ಹಣತೆ ಹಿಡಿದವರು(ನಾನು...

‘ಹೋರಾಟದ ಹಾದಿಗೆ ಹಣತೆ ಹಿಡಿದವರು(ನಾನು ಮತ್ತು ನನ್ನ ಹೋರಾಟ)’

ಕಾರುಣ್ಯಕಾರುಣ್ಯ2 Jan 2016 12:08 AM IST
share
‘ಹೋರಾಟದ ಹಾದಿಗೆ ಹಣತೆ ಹಿಡಿದವರು(ನಾನು ಮತ್ತು ನನ್ನ ಹೋರಾಟ)’

‘ಹೋರಾಟದ ಹಾದಿಗೆ ಹಣತೆ ಹಿಡಿದವರು(ನಾನು ಮತ್ತು ನನ್ನ ಹೋರಾಟ)’ ಭಾಗ 1 ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆಯ ವಿಭಿನ್ನ ಯೋಜನೆಯ ಫಲ. ಇದೊಂದು ಸರಣಿ ಸಂಪುಟಗಳಾಗಿವೆ. ಡಾ. ಸಬಿಹಾ ಭೂಮಿಗೌಡ ಇದರ ಪ್ರಧಾನ ಸಂಪಾದಕರಾಗಿದ್ದಾರೆ. ಸಂದರ್ಶನಗಳ ಮೂಲಕ ಸಂಪಾದಿಸಿರುವ ಈ ಕೃತಿಯಲ್ಲಿ ಎರಡು ಪ್ರಧಾನ ನೆಲೆಗಳನ್ನು ಪ್ರೊ. ರಾಜಪ್ಪ ದಳವಾಯಿ ಅವರು ಗುರುತಿಸುತ್ತಾರೆ. 1.ಒಬ್ಬ ವ್ಯಕ್ತಿಯ ಹೋರಾಟದ ವಿವರಗಳಿಂದ ಕಟ್ಟಿಕೊಡುವ ಹೋರಾಟದ ಸ್ವರೂಪ ಮತ್ತು ಅದರ ಸಾಧಕ ಬಾಧಕಗಳು.
2. ಸಂದರ್ಶನ ಭಾಗದಲ್ಲಿ ಹೋರಾಟಗಾರರು ಸಮಾಜ, ಸಂಸ್ಕೃತಿಗಳನ್ನು ನೋಡುವ ದೃಷ್ಟಿಕೋನ. ಹೋರಾಟ ಎಂಬ ಪದ ಅರ್ಥಕಳೆದುಕೊಳ್ಳುತ್ತಿರುವ ಅಥವಾ ತಿರುಚಲ್ಪಡುತ್ತಿರುವ ಈ ದಿನಗಳಲ್ಲಿ ಹೋರಾಟಗಾರರ ಕಣ್ಣಲ್ಲಿ, ಕರಾವಳಿ ಭಾಗದ ಸಾಮಾಜಿಕ ಮತ್ತು ಅದನ್ನು ಸುತ್ತಿಕೊಂಡ ರಾಜಕೀಯ ಮಗ್ಗುಲುಗಳನ್ನು ಈ ಕೃತಿ ಶೋಧಿಸುತ್ತದೆ. ಇಲ್ಲಿ ಕೊರಗರ ಬದುಕು, ಸಂಘಟನೆ ಹೋರಾಟಗಳ ಬಗ್ಗೆ ದೇವದಾಸ್ ಶೆಟ್ಟಿ, ಗೋಕುಲದಾಸ್ ಮತ್ತು ಬಾಲರಾಜ್ ತೆರೆದಿಡುತ್ತಾರೆ. ಸಮುದ್ರದಿಂದ ಆವೃತವಾಗಿರುವ ಕರಾವಳಿಯ ಸೂಕ್ಷ್ಮ ಪರಿಸರವನ್ನು ಸುತ್ತಿಕೊಂಡಿರುವ ರಾಜಕೀಯ ಮತ್ತು ಅಭಿವೃದ್ಧಿಯ ಜೊತೆಗಿನ ಅದರ ಬಿಕ್ಕಟ್ಟುಗಳನ್ನು ವಿಠಲರಾವ್ ಮತ್ತು ಸೆಲಿನ್ ಅರಾನ್ಹಾ ಅವರು ತೆರೆದಿಡುತ್ತಾರೆ. ಕುಡುಬಿಯರ ಬದುಕು, ಹೋರಾಟಗಳನ್ನು ಜನಾರ್ದನಗೌಡ ಮತ್ತು ನಾರಾಯಣ ಗೌಡ ಹಂಚಿಕೊಂಡರೆ, ಮೀನುಗಾರರ ಹೋರಾಟ, ಹೆಂಚು ಮತ್ತು ಬೀಡಿಕಾರ್ಮಿಕರ ಹೋರಾಟಗಳನ್ನು ಬಿ. ಮಾಧವ, ಶಿವಪ್ರಸಾದ್ ಪಚ್ಚನಾಡಿ, ಕೆ. ಆರ್. ಶ್ರೀಯಾನ್ ವಿವರಿಸುತ್ತಾರೆ. ಎಚ್.ಐವಿ. ಪೀಡಿತರ ಸಂಕಟಗಳು ಮತ್ತು ಅವರ ಬದುಕುವ ಹಕ್ಕಿನ ಕುರಿತ ಹೋರಾಟಗಳನ್ನು, ಸಮಸ್ಯೆಗಳನ್ನು ಶಾಂತಿನೊರೋನ್ಹಾ, ವೀಣಾ ಶೆಟ್ಟಿ ವಿಶ್ಲೇಷಿಸುತ್ತಾರೆ. ಹಾಗೆಯೇ ತರೆಹೊರೆ ಕಾರ್ಮಿಕರ ಬದುಕು, ಸಂಘರ್ಷಗಳನ್ನು ರೀಟಾ ನೊರೋನ್ಹಾ ಅವರು ತೆರೆದಿಡುತ್ತಾರೆ.
 ಹೇಗೆ ಹಂತಹಂತವಾಗಿ ತಳಸ್ಥರದ ಜನರ ಹೋರಾಟಗಳು ನೆಲೆಕಳೆದುಕೊಳ್ಳುತ್ತಿವೆ, ಕಾರ್ಮಿಕರ ಹಕ್ಕುಗಳೇ ದಮನಗೊಳ್ಳುತ್ತಿರುವ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸುವಲ್ಲಿ ರಾಜಕೀಯ ಶಕ್ತಿಗಳು ಯಶಸ್ವಿಯಾಗುತ್ತಿರುವುದರ ದುರಂತಗಳನ್ನು ಈ ಕೃತಿ ತೆರೆದಿಡುತ್ತವೆ. ಕರಾವಳಿಯಲ್ಲಿ ಬಲಗೊಳ್ಳುತ್ತಿರುವ ಕೋಮುವಾದಿ ಶಕ್ತಿಗಳ ಹಿಂದಿನ ಕಾರಣಗಳನ್ನೂ ಈ ಕೃತಿಯಲ್ಲಿ ನಾವು ಹುಡುಕಾಡಬಹುದಾಗಿದೆ. ಕರಾವಳಿಯಲ್ಲಿ ತಲೆಯೆತ್ತುತ್ತಿರುವ ಎಸ್‌ಇಝಡ್, ಕೈಗಾರಿಕೆಗಳಿಂದ ಹೆಚ್ಚಾಗು ತ್ತಿರುವ ಪರಿಸರ ಮಾಲಿನ್ಯ, ಸಮುದ್ರವನ್ನು ಅವಲಂಬಿಸಿರುವ ಜನರ ಆತಂಕ, ಬೀದಿ ಪಾಲಾಗುತ್ತಿರುವ ಅಥವಾ ಅನಾಥರಾ ಗುತ್ತಿರುವ ಕಾರ್ಮಿಕರು ಸೇರಿದಂತೆ ಹತ್ತು ಹಲವು ವಿಷಯ ಗಳನ್ನು ಈ ಕೃತಿ ಚರ್ಚಿಸುತ್ತದೆ. ಕರಾವಳಿಯ ವರ್ತಮಾನದ ದುರಂತಗಳನ್ನು ತಿಳಿದುಕೊಳ್ಳುವುದಕ್ಕೆ ಇದೊಂದು ಮಹತ್ವಪೂರ್ಣ ವಾದ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಷಯಗಳಿಗೆ ಪೂರಕವಾಗಿ ವರ್ಣಮಯ ಚಿತ್ರಗಳನ್ನೂ ನೀಡಲಾಗಿದೆ. ಕೃತಿಯ ಮುಖಬೆಲೆ 175 ರೂ. ಆಸಕ್ತರು 0824- 2287360 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯ
ಕಾರುಣ್ಯ
Next Story
X