ಮಳ್ಹರ್ ಮೀಲಾದ್ ಜಲ್ಸ ಸಮಾರೋಪ
ಮಂಜೇಶ್ವರ, ಜ.2: ಮಳ್ಹರು ನೂರಿಲ್ ಇಸ್ಲಾಮಿ ತ್ತಅ್ಲೀಮಿಯ ವತಿಯಿಂದ ನಡೆದ ‘ಮೀಲಾದ್ ಜಲ್ಸ’ ಕಾರ್ಯಕ್ರಮದ ಸಮಾರೋಪವು ಮಳ್ಹರ್ ಅಲ್ ಬುಖಾರಿ ಕಾಂಪೌಂಡಿನಲ್ಲಿ ಜರಗಿತು
ಸಮಸ್ತ ಉಪಾದ್ಯಕ್ಷ ಶ್ಯೆಖುನಾ ಎಂ.ಆಲಿಕುಂಞಿ ಉಸ್ತಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಮುಫ್ತಿ ಅಹ್ಮದ್ ಅಖ್ತರ್ ಹುಸೈನಿ ಅಲ್ ಖಾದಿರಿ ಬರೇಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ.ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಮುಖ್ಯ ಭಾಷಣ ಮಾಡಿದರು. ಸ್ವಲಾತ್ ಮಜ್ಲಿಸ್ಗೆ ಸೈಯದ್ ಅಬುರ್ರಹ್ಮಾನ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ, ಸೈಯದ್ ಅಬ್ದುರಹ್ಮಾನ್ ಶಹೀರ್ ಅಲ್ ಬುಖಾರಿ ಕಡಲುಂಡಿ ನೇತೃತ್ವ ವಹಿಸಿದ್ದರು. ಸೈಯದ್ ಸುಹ್ಯೆಲ್ ಅಸ್ಸಖಾಫ್ ತಂಙಳ್ ಮಡಕ್ಕರೆ, ಸೈಯದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ, ಸೈಯದ್ ಜಲಾಲುದ್ದೀನ್ ಅಲ್ಹಾದಿ ಉಜಿರೆ, ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬ, ಕೆ.ಪಿ.ಹುಸೈನ್ ಸಅದಿ ಕೆ.ಸಿ. ರೋಡ್, ಸಿ.ಅಬ್ದುಲ್ಲ ಮುಸ್ಲಿಯಾರ್ ಉಪ್ಪಳ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಮುಹಮ್ಮದ್ ಸಖಾಫಿ ಪಾತೂರು, ಅಬ್ದುಲ್ ಖಾದಿರ್ ಸಖಾಫಿ ಅಲ್ ಮದೀನಾ, ಹಸನ್ ಸಅದಿ ಅಲ್ ಅಫ್ಳಲಿ, ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ, ಅನಸ್ ಸಿದ್ದೀಕಿ ಶಿರಿಯ, ಉಸ್ಮಾನ್ ಹಾಜಿ ಮಳ್ಹರ್, ಕೆ.ಬಿ .ಅಬ್ದುಲ್ಲ ಹಾಜಿ, ಏಶ್ಯನ್ ಬಾವ ಹಾಜಿ ಮತ್ತಿತರರು ಉಪಸ್ಥಿತರಿದ್ದರು.