Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆರ್‌ಟಿಐ ವ್ಯಾಪ್ತಿಗೆ ಕ್ರಿಕೆಟ್ ಮಂಡಳಿ;...

ಆರ್‌ಟಿಐ ವ್ಯಾಪ್ತಿಗೆ ಕ್ರಿಕೆಟ್ ಮಂಡಳಿ; ಬಿಸಿಸಿಐ, ಐಪಿಎಲ್ ವಿಭಜನೆ

ವಾರ್ತಾಭಾರತಿವಾರ್ತಾಭಾರತಿ4 Jan 2016 11:46 PM IST
share
ಆರ್‌ಟಿಐ ವ್ಯಾಪ್ತಿಗೆ ಕ್ರಿಕೆಟ್ ಮಂಡಳಿ; ಬಿಸಿಸಿಐ, ಐಪಿಎಲ್ ವಿಭಜನೆ

ಬಿಸಿಸಿಐಯಲ್ಲಿ ಬದಲಾವಣೆಯ ಗಾಳಿ
ಆಮೂಲಾಗ್ರ ಪರಿವರ್ತನೆಗೆ ನ್ಯಾ. ಲೋಧಾ ಸಮಿತಿ ಶಿಫಾರಸು

ಮುಂಬೈ, ಜ. 4: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಡಳಿತದಲ್ಲಿ ಮೂಲಭೂತ ಬದಲಾವಣೆಯಾಗಲು ಸುಪ್ರೀಂ ಕೋರ್ಟ್ ನೇಮಿತ ನ್ಯಾಯಮೂರ್ತಿ ಆರ್.ಎಂ.ಲೋಧಾ ಸಮಿತಿ ಶಿಫಾರಸು ಮಾಡಿದೆ. ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರುವುದು, ಬೆಟ್ಟಿಂಗನ್ನು ಕಾನೂನುಬದ್ಧಗೊಳಿಸುವುದು, ಆಟಗಾರರ ಸಂಘವನ್ನು ಸ್ಥಾಪಿಸುವುದು ಮತ್ತು ಇಂಡಿಯನ್ ಪ್ರೀಮಿಯರ್ ಲೀಗನ್ನು ಬಿಸಿಸಿಐಯಿಂದ ಬೇರ್ಪಡಿಸುವುದು- ಈ ನಿಟ್ಟಿನಲ್ಲಿ ಲೋಧಾ ಸಮಿತಿ ಮಾಡಿದ ಮಹತ್ವದ ಶಿಫಾರಸುಗಳಾಗಿವೆ.
ಈ ಮಹತ್ವದ ಬದಲಾವಣೆಗಳು ನಿರೀಕ್ಷಿತ ರೀತಿಯಲ್ಲೇ ಬಂದಿವೆಯಾದರೂ, ಬಿಸಿಸಿಐಯಲ್ಲಿ ನೆಲೆಯೂರಿರುವರು ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಖಚಿತ. ಆರ್‌ಟಿಐ ಮತ್ತು ಮಾನ್ಯತೆ ಪಡೆದ ಆಟಗಾರರ ಸಂಘಕ್ಕೆ ಬಿಸಿಸಿಐ ಈಗಾಗಲೇ ಪ್ರಬಲ ವಿರೋಧ ವ್ಯಕ್ತಪಡಿಸಿದೆ.
‘‘ಸುಧಾರಣೆಗಳ ವಿಷಯದಲ್ಲಿ ಸಮಿತಿ ಮೊದಲು ಮಾಡಿದ್ದು, ಆಡಳಿತದ ವಿವಿಧ ಆಯಾಮಗಳಿಗೆ ಸಂಬಂಧಿಸಿದ 8 ವಿಭಾಗಗಳು ಹಾಗೂ 135 ಪ್ರಶ್ನೆಗಳನ್ನೊಳಗೊಂಡ ಪ್ರಶ್ನಾವಳಿಯೊಂದನ್ನು ತಯಾರಿಸಿದ್ದು. ಪ್ರಶ್ನಾವಳಿಯ ಪ್ರತಿಗಳನ್ನು ಬಿಸಿಸಿಐ ಪದಾಧಿಕಾರಿಗಳು ಹಾಗೂ ಸಂಬಂಧಿತ ಇತರರು, ಪತ್ರಕರ್ತರು, ಲೇಖಕರು, ವಕೀಲರು, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಾಧೀಶರು, ಮಾಜಿ ರಾಷ್ಟ್ರೀಯ ಆಟಗಾರರು, ಕೋಚ್‌ಗಳು ಮತ್ತು ವಿವಿಧ ರಾಜ್ಯ ಅಸೋಸಿಯೇಶನ್‌ಗಳ ಮುಖ್ಯಸ್ಥರಿಗೆ ಕಳುಹಿಸಲಾಯಿತು’’ ಎಂದು ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾ. ಲೋಧಾ ಹೇಳಿದರು.
ನ್ಯಾ. ಲೋಧಾ ಶಿಫಾರಸು ಮಾಡಿದ ಕೆಲವು ಪ್ರಮುಖ ಅಂಶಗಳು ಇಂತಿವೆ:
ಬಿಸಿಸಿಐಯನ್ನು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ತರುವುದು
ಬೆಟ್ಟಿಂಗನ್ನು ಕಾನೂನುಬದ್ಧಗೊಳಿಸುವಂತೆ ಶಾಸಕಾಂಗಕ್ಕೆ ಸಲಹೆ ಮಾಡುವುದು
ಆಟಗಾರರ ಸಂಘವನ್ನು ರಚಿಸುವ ಪ್ರಸ್ತಾಪ. ಅನಿಲ್ ಕುಂಬ್ಳೆ, ಮೊಹಿಂದರ್ ಅಮರ್‌ನಾಥ್ ಮತ್ತು ಡಯಾನಾ ಎಡುಲ್ಜಿ ಅವರನ್ನೊಳಗೊಂಡ ಚಾಲನಾ ಸಮಿತಿಯು ಸಂಘವನ್ನು ರಚಿಸುವುದು
ಬಿಸಿಸಿಐ ಮತ್ತು ಐಪಿಎಲ್‌ನ್ನು ಪ್ರತ್ಯೇಕಿಸುವುದು ಹಾಗೂ ಎರಡಕ್ಕೂ ಪ್ರತ್ಯೇಕ ಆಡಳಿತ ಮಂಡಳಿಗಳನ್ನು ರಚಿಸುವುದು
 ಐಪಿಎಲ್‌ನ ಪ್ರಧಾನ ಆಡಳಿತ ಮಂಡಳಿಯನ್ನು ಗವರ್ನಿಂಗ್ ಕೌನ್ಸಿಲ್ ಎಂಬುದಾಗಿ ಕರೆಯಲಾಗುವುದು. ಅದರಲ್ಲಿ ಫ್ರಾಂಚೈಸಿಗಳ 2 ಪ್ರತಿನಿಧಿಗಳು, ಆಟಗಾರರ ಸಂಘದ ಓರ್ವ ಪ್ರತಿನಿಧಿ, ಮಹಾಲೇಖಪಾಲರ ಕಚೇರಿಯ ಓರ್ವ ಪ್ರತಿನಿಧಿ ಸೇರಿದಂತೆ 9 ಸದಸ್ಯರಿರುವರು. ಸೀಮಿತ ಸ್ವಾಯತ್ತೆ ಹೊಂದಿರುವ ಐಪಿಎಲ್ ಆಡಳಿತ ಮಂಡಳಿಯು ಬಿಸಿಸಿಐಗೆ ಉತ್ತರದಾಯಿಯಾಗಿದೆ
ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ಸಾಕಷ್ಟು ಪುರಾವೆ ಲಭ್ಯವಾಗದ ಹಿನ್ನೆಲೆಯಲ್ಲಿ ಐಪಿಎಲ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ರಾಮನ್‌ಗೆ ಕ್ಲೀನ್ ಚಿಟ್
ಸಚಿವರು ಅಥವಾ ಸರಕಾರಿ ಅಧಿಕಾರಿಗಳು ಬಿಸಿಸಿಐಯ ಪದಾಧಿಕಾರಿಗಳಾಗುವಂತಿಲ್ಲ. ಪದಾಧಿಕಾರಿಗಳು ಎರಡಕ್ಕಿಂತ ಹೆಚ್ಚಿನ ಅವಧಿಯನ್ನು ಹೊಂದುವಂತಿಲ್ಲ ಹಾಗೂ 70 ವರ್ಷಕ್ಕಿಂತ ಹೆಚ್ಚಿನವರು ಆಗುವಂತಿಲ್ಲ
ಟೆಸ್ಟ್ ಕ್ರಿಕೆಟ್ ಆಡಿದವರು ಮಾತ್ರ ಆಯ್ಕೆ ಸಮಿತಿಯ ಸದಸ್ಯರು ಆಗಬಹುದು
ತಂಡಗಳ ಆಯ್ಕೆ ಮತ್ತು ಕೋಚಿಂಗ್ ಸೇರಿದಂತೆ ಕ್ರಿಕೆಟ್ ಸಂಬಂಧಿ ವಿಷಯಗಳನ್ನು ಕ್ರಿಕೆಟರುಗಳೇ ನಿಭಾಯಿಸಬೇಕು
ಒಂದು ರಾಜ್ಯದಲ್ಲಿ ಒಂದೇ ಅಸೋಸಿಯೇಶನ್ ಇರುತ್ತದೆ ಹಾಗೂ ಅದು ಬಿಸಿಸಿಐಯ ಪೂರ್ಣ ಸದಸ್ಯತ್ವ ಹೊಂದಿರುತ್ತದೆ ಹಾಗೂ ಮತದಾನದ ಹಕ್ಕಿರುತ್ತದೆ
ಬಿಸಿಸಿಐಗೆ ಮೂರು ಇತರ ಪ್ರಾಧಿಕಾರಗಳನ್ನು ಸೇರ್ಪಡೆಗೊಳಿಸುವುದು ಅವುಗಳೆಂದರೆ- ಓಂಬುಡ್ಸ್‌ಮನ್, ನೀತಿ ವಿಷಯಗಳ ಅಧಿಕಾರಿ ಮತ್ತು ಚುನಾವಣಾಧಿಕಾರಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X