Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಪ್ರೊ. ಬಿ. ಕೃಷ್ಣಪ್ಪ ಬರಹಗಳು,...

ಪ್ರೊ. ಬಿ. ಕೃಷ್ಣಪ್ಪ ಬರಹಗಳು, ಭಾಷಣಗಳು....

ಕಾರುಣ್ಯಕಾರುಣ್ಯ9 Jan 2016 12:02 AM IST
share
ಪ್ರೊ. ಬಿ. ಕೃಷ್ಣಪ್ಪ ಬರಹಗಳು, ಭಾಷಣಗಳು....

ಕರ್ನಾಟಕದ ದಲಿತ ಚಳವಳಿ, ಸಾಮಾಜಿಕ ಹೋರಾಟಗಳಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರ ಹೆಸರು ಅಜರಾಮರ. ದಲಿತ ಚಳವಳಿಯ ಕೇಂದ್ರ ಶಕ್ತಿಯಾಗಿ ಕೆಲಸ ಮಾಡಿದವರು ಕೃಷ್ಣಪ್ಪ. ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ಕ್ರೋಡೀಕರಿಸುವ ಕೆಲಸವನ್ನು ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಮೂಲಕ, ಇಂದಿರಾ ಕೃಷ್ಣಪ್ಪ ಅವರು ಮಾಡುತ್ತಾ ಬಂದಿದ್ದಾರೆ. ಅದರ ಮುಂದುವರಿದ ಭಾಗವೇ ‘ಪ್ರೊ. ಬಿ. ಕೃಷ್ಣಪ್ಪನವರ ಬರಹಗಳು ಮತ್ತು ಭಾಷಣಗಳು’ ಕೃತಿ. ಇದು ಟ್ರಸ್ಟ್‌ನಿಂದ ಪ್ರಕಟವಾದ ಕೃಷ್ಣಪ್ಪ ಅವರ ಬದುಕನ್ನು ಕಟ್ಟಿಕೊಡುವ ಮೂರನೆ ಕೃತಿ. ಈ ಕೃತಿಯಲ್ಲಿ ಬಯಲು ಬೆತ್ತಲೆ ಚಂದ್ರಗುತ್ತಿ ಎಂಬ ಸುದೀರ್ಘ ಲೇಖನವೊಂದಿದೆ. ಅದರ ಜೊತೆಗೇ ಕೃಷ್ಣಪ್ಪ ಅವರು ವಿವಿಧ ಸಮಾವೇಶಗಳಲ್ಲಿ, ವೇದಿಕೆಗಳಲ್ಲಿ ಮಾಡಿದ ಭಾಷಣಗಳು ಮತ್ತು ಪತ್ರಿಕೆಗಳಿಗೆ ನೀಡಿದ ಸಂದರ್ಶನವನ್ನು ಒಂದೆಡೆ ಸಂಗ್ರಹಿಸಿ ನೀಡಲಾಗಿದೆ. ಸತ್ಯ ಘಟನೆಗಳನ್ನು ಆಧರಿಸಿದ ವರದಿ ‘ಕೋಮು ದಳ್ಳುರಿಯ ಆಂತರ್ಯ’ ಇನ್ನೊಂದು ಪ್ರಮುಖ ಅಧ್ಯಾಯವಾಗಿದೆ. ಕೊನೆಯಲ್ಲಿ ವಿಶ್ಲೇಷಣೆ ಹಾಗೂ ರೂಪಕಗಳ ಮೂಲಕ ಭಾರತದ ಯುದ್ಧಧರ್ಮದ ಬಗ್ಗೆ ಚರ್ಚಿಸುತ್ತಾರೆ. ಹಾಗೆಯೇ ಕಿರು ಪ್ರಹಸನಗಳೂ ಇಲ್ಲಿವೆ.
ಮೊದಲ ಸುದೀರ್ಘ ಲೇಖನ ‘ಬಯಲು ಬೆತ್ತಲೆ ಚಂದ್ರಗುತ್ತಿ’ ಇಲ್ಲಿರುವ ಪ್ರಮುಖ ಬರಹಗಳಲ್ಲಿ ಒಂದು. 80ರ ದಶಕದಲ್ಲಿ ಭಾರೀ ಸುದ್ದಿ ಮಾಡಿದ್ದ ಚಂದ್ರಗುತ್ತಿ ಮತ್ತು ಅದನ್ನು ಸುತ್ತು ವರಿದ ರಾಜಕೀಯವನ್ನು ಇಲ್ಲಿ ವಿಶ್ಲೇಷಿಸುತ್ತಾರೆ. ಚಂದ್ರಗುತ್ತಿ ವಿರೋಧಿ ಚಳವಳಿಯಲ್ಲಿ ಕೃಷ್ಣಪ್ಪ ನೇರವಾಗಿ ಭಾಗವಹಿಸಿದ್ದು, ಈ ಸಂದರ್ಭದಲ್ಲಿ ತಾನು ಕಂಡುಂಡ ಸತ್ಯಗಳನ್ನು ತೆರೆದಿಡುತ್ತಾ, ಈ ಸಾಮಾಜಿಕ ಅನಿಷ್ಠವನ್ನು ವಿಶ್ಲೇಷಿಸುತ್ತಾರೆ. ಇದರ ವಿರುದ್ಧದ ಅವರ ನೀಳ ಹೋರಾಟದ ಸಂದರ್ಭದಲ್ಲಿ, ಹೇಗೆ ನಾಗರಿಕರೆನಿಸಿಕೊಂಡವರು, ವಿದ್ಯಾವಂತರೆನಿಸಿಕೊಂಡವರು, ರಾಜಕಾರಣಿಗಳು ಈ ಅನಿಷ್ಠದ ಪರವಾಗಿ ನಿಂತು, ಹೋರಾಟವನ್ನು ದಮನಿಸಲು ನೋಡಿದರು ಎನ್ನುವ ಕಟು ಸತ್ಯವನ್ನು ತೆರೆದಿಡುತ್ತಾರೆ. ಜನರ ವೌಢ್ಯವನ್ನು ಉಳಿಸಿ, ಬೆಳೆಸಿ ಅದರಿಂದ ಯಾರ್ಯಾರು, ಹೇಗೆ ಲಾಭಪಡೆಯುತ್ತಾರೆ ಎನ್ನುವ ಅಂಶವನ್ನು ಇಲ್ಲಿ ಎಳೆ ಎಳೆಯಾಗಿ ಮಂಡಿಸುತ್ತಾರೆ. ‘ಔಷಧಿ ನುಂಗಲು ಹಠ ಮಾಡುವ ಮಗುವಿಗೆ ತಾಯಿ ಮೂಗು ಹಿಡಿದು ಸ್ವಲ್ಪ ಹಿಂಸೆಯಾದರೂ ಔಷಧಿ ಕುಡಿಸುವಂತೆ, ಕಠಿಣವಾದರೂ ಕಾನೂನಿನ ಕ್ರಮವನ್ನು ಜರಗಿಸಿ ಈ ಅನಿಷ್ಠ ಪದ್ಧತಿಯನ್ನು ನಿಲ್ಲಿಸಬೇಕು’’ ಎಂದು ಕೃಷ್ಣಪ್ಪ ಒತ್ತಾಯಿಸುತ್ತಾರೆ. 21 ನೆ ಶತಮಾನದಲ್ಲಿ ಮಡೆಸ್ನಾನ, ಪಂಕ್ತಿ ಭೇದದಂತಹ ಅನಿಷ್ಠಗಳಿಗೆ ರಾಜಕಾರಣಿಗಳು, ಸ್ವಾಮೀಜಿಗಳು ಬಹಿರಂಗ ಬೆಂಬಲ ಸೂಚಿಸುತ್ತಿರುವಾಗ 80 ರ ದಶಕದಲ್ಲಿ ಕೃಷ್ಣಪ್ಪ ಅವರು ಅಷ್ಟೆಲ್ಲ ವಿರೋಧಿಗಳನ್ನು ಎದುರು ಹಾಕಿಕೊಳ್ಳುವುದು ಅಚ್ಚರಿಯಾಗಿಯೇನೂ ಕಾಣುವುದಿಲ್ಲ.

share
ಕಾರುಣ್ಯ
ಕಾರುಣ್ಯ
Next Story
X