Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಸೌದಿ ಅರೇಬಿಯಾ ವಿದ್ಯುತ್, ನೀರು ಶುಲ್ಕ...

ಸೌದಿ ಅರೇಬಿಯಾ ವಿದ್ಯುತ್, ನೀರು ಶುಲ್ಕ ಏರಿಕೆ ಕಡಿಮೆ ಆದಾಯದವರಿಗೆ ಬಾಧೆಯಿಲ್ಲ

ವಾರ್ತಾಭಾರತಿವಾರ್ತಾಭಾರತಿ9 Jan 2016 5:14 PM IST
share
ಸೌದಿ ಅರೇಬಿಯಾ ವಿದ್ಯುತ್, ನೀರು ಶುಲ್ಕ ಏರಿಕೆ ಕಡಿಮೆ ಆದಾಯದವರಿಗೆ ಬಾಧೆಯಿಲ್ಲ

   ರಿಯಾದ್: ವಿದ್ಯುತ್ ಹಾಗೂ ನೀರಿನ ಶುಲ್ಕದಲ್ಲಿ ಏರಿಕೆ ಮಾಡುವ ಕುರಿತಾದ ತಿದ್ದುಪಡಿ ನಿಯಮಗಳ ಜಾರಿಯಿಂದಾಗಿ, ಸೀಮಿತ ಆದಾಯವಿರುವವರು ಬಾಧಿತರಾಗ ಲಾರರೆಂದು ಸೌದಿ ಅರೇಬಿಯದ ಜಲ ಹಾಗೂ ವಿದ್ಯುತ್ ಸಚಿವ ಅಬ್ದುಲ್ಲಾ ಅಲ್ ಹುಸೈನ್ ಸ್ಪಷ್ಟೀಕರಣ ನೀಡಿದ್ದಾರೆ. ನೀರು ಹಾಗೂ ವಿದ್ಯುತ್ ವ್ಯಾಪಕವಾಗಿ ಬಳಸುವ ವರ್ಗಗಳ ಮೇಲೆ ಮಾತ್ರ ನೂತನ ದರ ನಿಯಮಗಳು ಪರಿಣಾಮ ಬೀರಲಿದೆಯೆಂದು, ಸಚಿವರು ಹೇಳಿರುವುದಾಗಿ ಸ್ಥಳೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಈ ತಿದ್ದುಪಡಿ ನಿಯಮಗಳಿಗೆ ಸೌದಿ ಅರೇಬಿಯ ಸಂಪುಟವು ಇತ್ತೀಚೆಗೆ ತನ್ನ ಅನುಮೋದನೆ ನೀಡಿತ್ತು. ‘‘ ಉದಾಹರಣೆಗೆ, ನೂತನ ದರ ನಿಯಮದಿಂದಾಗಿ, ಪ್ರತಿ ದಿನ 250 ಲೀಟರ್ ನೀರಿನ ಬಳಕೆಯಿಂದ, ಪ್ರತಿ ತಿಂಗಳಿಗೆ 92 ಸೌದಿ ರಿಯಾಲ್ ವೆಚ್ಚ ತಗಲಲಿದೆ ಹಾಗೂ ಇಷ್ಟು ಶುಲ್ಕವನ್ನು ವಿಧಿಸುವುದು ಸಕಾರಣವಾಗಿದೆ. ದರ ಪರಿಷ್ಕರಣೆಯಿಂದಾಗಿ ಜನರು ನೀರಿನ ಮಿತಬಳಕೆ ಮಾಡಲು ಆರಂಭಿಸುವರೆಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ’’ ಎಂದು ಅವರು ಹೇಳುತ್ತಾರೆ.

 ನೀರಿನ ಸೋರಿಕೆ ಸಮಸ್ಯೆಗಳಿದ್ದಲ್ಲಿ ಅದನ್ನು ಸರಿಪಡಿಸುವುದನ್ನು ಹಾಗೂ ನೀರನ್ನು ಮಿತವಾಗಿ ಬಳಸುವಂತಹ ಹೊಣೆಗಾರಿಕೆಯನ್ನು ಪೌರರು ಪ್ರದರ್ಶಿಸಬೇಕೆಂದು ಸಚಿವರು ಕರೆ ನೀಡಿದ್ದಾರೆ. ಮುಂದಿನ ತಿಂಗಳು ನೂತನ ದರಯೇರಿಕೆ ಜಾರಿಗೆ ಬರುವ ಮೊದಲು, ನೀರಿನ ಮಿತ ಬಳಕೆಯ ಉಪಕರಣದ ಅಳವಡಿಕೆ ಹಾಗೂ ವಿದ್ಯುತ್ ಉಳಿತಾಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದರು.

 ‘‘ ಈ ವರ್ಷ ನೀಡಲಾಗಿರುವ ಶೇ.87ರಷ್ಟು ವಿದ್ಯುತ್ ಹಾಗೂ ನೀರಿನ ಬಿಲ್‌ಗಳು ನೂತನ ದರದಿಂದ ಬಾಧಿತವಾಗಲಾರದು. ಶೇ.13ರಷ್ಟು ಬಿಲ್‌ಗಳಿಗೆ ಮಾತ್ರವೇ ದರ ಏರಿಕೆಯ ಅನುಭವವಾಗಲಿದೆ’’ ಎಂದರು. ಶೇ. 52ರಷ್ಟು ಕುಟುಂಬಗಳಿಗೆ ವಿದ್ಯುತ್, ನೀರು ದರಪರಿಷ್ಕರಣೆಯು ಯಾವುದೇ ಪರಿಣಾಮವನ್ನುಂಟು ಮಾಡಲಾರದು. ಶೇ. 52ರಷ್ಟು ಕುಟುಂಬಗಳು, ನೀರಿನ ಬಳಕೆಗಾಗಿ ಪ್ರತಿ ದಿನ 1 ರಿಯಾಲ್ ಅಥವಾ ತಿಂಗಳಿಗೆ 30 ರಿಯಾಲ್‌ಗಿಂತ ಹೆಚ್ಚು ಹಣವನ್ನು ಪಾವತಿಸುವುದಿಲ್ಲವಾದ್ದರಿಂದ, ಕಡಿಮೆ ಹಾಗೂ ಮಧ್ಯಮ ದರ್ಜೆಯ ಆದಾಯವಿರುವ ಕುಟುಂಬಗಳ ಮೇಲೆ ದರ ಏರಿಕೆಯು ಯಾವುದೇ ಪರಿಣಾಮವನ್ನು ಂಟು ಮಾಡಲಾರದು ಎಂದು ಅಬ್ದುಲ್ಲಾ ಅಲ್ ಹುಸೈನ್ ತಿಳಿಸಿದ್ದಾರೆ.

ನೀರು, ವಿದ್ಯುತ್ ಶುಲ್ಕ ಹೆಚ್ಚಳದಿಂದಾಗಿ ಶೇ.90ರಷ್ಟು ಕುಟುಂಬಗಳಿಗೆ ತಿಂಗಳಿಗೆ 5 ಸೌದಿ ರಿಯಾಲ್‌ಗಿಂತ ಹೆಚ್ಚುವರಿ ಹೊರೆ ಬೀಳಲಾರದು ಎಂದವರು ಅಭಿಪ್ರಾಯಿಸುತ್ತಾರೆ.. ‘‘ ನೀರಿನ ಖರೀದಿಯಲ್ಲಿ ಸೌದಿ ಅರೇಬಿಯವು ವಿಶ್ವದಲ್ಲೇ ಮೂರನೆ ಸ್ಥಾನದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯವೆಂದು ಅವರು ಹೇಳುತ್ತಾರೆ.

 ‘‘ಮುಸ್ಲಿಮರಾದ ನಾವು ಧರ್ಮವನ್ನು ಅನುಸರಿಸಿ ನಡೆಯುವವರು. ನಮ್ಮ ಪವಿತ್ರ ಕುರ್‌ಆನ್ ಹಾಗೂ ಹದೀಸ್‌ಗಳು, ದುಂದು ವೆಚ್ಚ ಮಾಡಬಾರದೆಂದು ಬೋಧಿಸುತ್ತವೆ. ಹೀಗಿರುವಾಗ, ಆತ ನಮಗೆ ಅನುಗ್ರಹಿಸಿದುದನ್ನು ಯಾಕೆ ನಿಷ್ಪ್ರಯೋಜಕವಾಗಿ ಪೋಲು ಮಾಡಬೇಕು ಎಂದವರು ಪ್ರಶ್ನಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X