Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ತಾರುಣ್ಯದ ವಿಲಾಸ ವೈಚಿತ್ರಗಳ...

ತಾರುಣ್ಯದ ವಿಲಾಸ ವೈಚಿತ್ರಗಳ ಕವಿತೆಗಳು...

ಕಾರುಣ್ಯಕಾರುಣ್ಯ9 Jan 2016 10:52 PM IST
share

ಮತ್ತೆ ಬಂತು ಶ್ರಾವಣ’ ದ. ರಾ. ಬೇಂದ್ರ ಸ್ಮತಿ ಅಂತರ ಕಾಲೇಜು ಕವನ ಸ್ಪರ್ಧೆಯ ಆಯ್ದ ಕವಿತೆಗಳ ಸಂಕಲನ. ಯುವ ಕವಿ ವಿಕ್ರಮ ವಿಸಾಜಿ ಕೃತಿಯನ್ನು ಸಂಪಾದಿಸಿದ್ದಾರೆ. ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘವು 1982ರಿಂದ ಕನ್ನಡದ ವರಕವಿ ಡಾ. ದ.ರಾ. ಬೇಂದ್ರೆಯವರ ನೆನಪಿನಲ್ಲಿ ಅಂತರಕಾಲೇಜು ಕವನ ಸ್ಪರ್ಧೆಯನ್ನು ಹಮ್ಮಿಕೊಂಡು ಬರುತ್ತಿದೆ. ಈ ಅವಧಿಯಲ್ಲಿ ನಾಡಿನಾದ್ಯಂತ ಅನೇಕ ಕಾಲೇಜು ವಿದ್ಯಾರ್ಥಿಗಳು ಈ ಕವಿತಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಹಾಗೆ ಪಡೆದುಕೊಂಡ ಯುವ ಕವಿಗಳೆಲ್ಲ ಇಂದು ಹಿರಿ ಕವಿಗಳಾಗಿ ಗಮನ ಸೆಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ, ಕಾವ್ಯ ಸಾಲಿನ ಹಿಂದು, ಇಂದು ಮತ್ತು ಮುಂದುಗಳನ್ನು ಸಂಧಿಸುವ ಕೃತಿಯಾಗಿ ‘ಮತ್ತೆ ಬಂತು ಶ್ರಾವಣ’ ಗಮನ ಸೆಳೆಯುತ್ತದೆ.

 
ಮುನ್ನುಡಿಯಲ್ಲಿ ವಿಸಾಜಿಯವರು ಹೇಳುವಂತೆ, ಮೂವತ್ತೆರಡು ವರ್ಷಗಳ ಇಲ್ಲಿನ ಕಾವ್ಯಲೋಕ ತಾರುಣ್ಯದ ವಿಲಾಸ ವೈಚಿತ್ರಗಳಿಂದ ಕೂಡಿದೆ ಮಾತ್ರವಲ್ಲ, ಅಪರೂಪದ ಭಾವಕೋಶಗಳನ್ನು ಹಿಡಿಯಲೆತ್ನಿಸಿದೆ. ಸೀಮಿತ ಅವಧಿಯ ಮೂರು ತಲೆಮಾರುಗಳ ಕಾವ್ಯದ ಕ್ರಿಯಾಶೀಲ ಸ್ಪಂದನವನ್ನು ನಾವಿಲ್ಲಿ ಕಾಣಬಹುದು. ಅಬ್ದುಲ್ ರಶೀದ್, ಕೋಡ್ಲೆಕೆರೆ, ಎಲ್ಸಿ ನಾಗರಾಜು, ಹುಳಿಯಾರ್, ಮೊಗಳ್ಳಿ, ಜಿ. ಎನ್. ಮೋಹನ್ ಇವರಿಂದ ಹಿಡಿದು ಇತ್ತೀಚಿನ ಕವಿಗಳಾಗಿರುವ ಅಕ್ಷತಾ ಕೆ., ಅಂಕುರ್ ಬೆಟಗೇರಿ, ಕಾವ್ಯಾ ಪಿ. ಕೆ. , ಸ್ಮಿತಾ ಮಾಕಳ್ಳಿ ಮೊದಲಾದವರ ತಾರುಣ್ಯ ಸಹಜ ಅನುಭೂತಿಗಳಿವೆ. ‘ಒಳ್ಳೆಯ ಕವಿತೆಯನ್ನು ಒಳ್ಳೆಯ ಕವಿತೆಯೆಂದು ಪ್ರಾಮಾಣಿಕವಾಗಿ ಗುರುತಿಸುವುದೇ ಮಾನದಂಡ’ ಎಂಬ ಬಿ. ಶ್ರೀನಿವಾಸರಾಜು ಅವರ ಮಾತಿನಂತೆಯೇ ಇಲ್ಲಿರುವ ಕವಿತೆಗಳನ್ನು ಆರಿಸಲಾಗಿದೆ. ಬಹುಶಃ ಕನ್ನಡವನ್ನು ಹೊಸ ದೃಷ್ಟಿಯಿಂದ ನೋಡಿದ ಹಲವು ಕವಿಗಳು ಈ ಸಂಗ್ರಹದಲ್ಲಿದ್ದಾರೆ. ‘ಕಣ್ಣು ರೆಪ್ಪೆಗಳ ಮೇಲೆ ಸದಾ ಹೆಪ್ಪುಗಟ್ಟುವ ರಾತ್ರಿ’ ಎಂದು ಬರೆಯುವ ರಾಮಚಂದ್ರ ಕಾ.ಸು., ಹೂಮೂಡಿ ಕಣ್ಣಲ್ಲಿ ಕಣ್ಣು ಹೊಡೆವ ಅಬ್ದುಲ್ ರಶೀದ್, ವಿಷಾದ ಮುದ್ರೆ ಬಿದ್ದ ತುಟಿಗಳನ್ನು ಬಿಚ್ಚಿಡಲು ಯತ್ನಿಸುವ ನಾಗರಾಜು ಎಲ್. ಸಿ...ಹೀಗೆ ಸುಮಾರು 96 ಕವಿಗಳ ನೂರಕ್ಕೂ ಅಧಿಕ ಕವಿತೆಗಳಲ್ಲಿ ನವ್ಯೋತ್ತರದ ಕಾವ್ಯದ ಹರಿವಿನ ಸದ್ದನ್ನು ಆಲಿಸಬಹುದಾಗಿದೆ. ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘ, ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 200 ರೂ. ಆಸಕ್ತರು 080-26757159 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

share
ಕಾರುಣ್ಯ
ಕಾರುಣ್ಯ
Next Story
X