ಚಿತ್ರನಟಿ ಕಾವ್ಯಾ ಮಾಧವನ್ ರಿಂದ ಎಂಡೋಸಲ್ಫಾನ್ ಸಂತ್ರಸ್ಥರಿಗೆ ನೆರವು

ಕಾಸರಗೋಡು : ಎಂಡೋಸಲ್ಫಾನ್ ಸಂತ್ರಸ್ಥರಿಗೆ ಒಂದು ಲಕ್ಷ ರೂ . ನೆರವು ನೀಡುವ ಮೂಲಕ ಚಿತ್ರನಟಿ ಕಾವ್ಯಾ ಮಾಧವನ್ ಮಾನವೀಯತೆ ಮರೆದಿದ್ದು , ಶನಿವಾರ ಕಾಸರಗೋಡಿಗೆ ಆಗನಿಸಿದ ಕಾವ್ಯಾ ಮಾಧವನ್ ಜಿಲ್ಲಾಡಳಿತಕ್ಕೆ ಒಂದು ಲಕ್ಷ ರೂ . ಹಸ್ತಾಂತರಿಸಿದರು .
ಪತ್ರಿಕಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಪಿ, ಎಸ್ ಮುಹಮ್ಮದ್ ಸಗೀರ್ ರವರಿಗೆ ಒಂದು ಲಕ್ಷ ರೂ . ನ ಚೆಕ್ಕನ್ನು ಹಸ್ತಾಂತರಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು , ಎಂಡೋಸಲ್ಫಾನ್ ಸಂತ್ರಸ್ಥರಿಗೆ ನೆರವಾಗಬೇಕಾದ ಜವಾಬ್ದಾರಿ ನಮ್ಮದಾಗಿದೆ. ಇಂತಹ ಘಟನೆಗಳು ಎಲ್ಲಿಯೂ ತಲೆ ಎತ್ತದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ನೀಲೇಶ್ವರ ನಗರಸಭಾ ಅಧ್ಯಕ್ಷ ಕೆ. ಪಿ ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು .
ಹೆಚ್ಚುವರಿ ದಂಡಾಧಿಕಾರಿ ಎಚ್ . ದಿನೇಶನ್, ಉಪ ಜಿಲಾಧಿಕಾರಿ ಡಾ . ಪಿ. ಜಯಶ್ರೀ , ಕೆ. ಕುನ್ಚ೦ಬು ನಾಯರ್ , ಸಣ್ಣಿ ಜೋಸೆಫ್ , ಕಾವ್ಯಾ ಮಾಧವನ್ ರವರ ತಂದೆ ಮಾಧವ , ತಾಯಿ ಶ್ಯಾಮಲಾ ಉಪಸ್ಥಿತರಿದ್ದರು





