Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಊರಿನ ಭಾಗ್ಯ ದೇವಾಲಯವಲ್ಲ -ಶಾಲೆ

ಊರಿನ ಭಾಗ್ಯ ದೇವಾಲಯವಲ್ಲ -ಶಾಲೆ

ವಾರ್ತಾಭಾರತಿವಾರ್ತಾಭಾರತಿ11 Jan 2016 11:14 PM IST
share


ಮಾನ್ಯರೆ,
ಹೆಬ್ರಿಯ ಮದರ್ ಆಫ್ ಗಾಡ್ ಚರ್ಚನ್ನು ಲೋಕಾರ್ಪಣೆ ಮಾಡುತ್ತಾ ಬೆಳ್ತಂಗಡಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷರು‘‘ ಊರಿಗೆ ದೇವಾಲಯ ಬರುವುದೇ ಭಾಗ್ಯ’’ ಎಂಬ ಸಂದೇಶ ನೀಡಿದರೆಂದು ವರದಿಯಾಗಿತ್ತು. ನಿಜಾರ್ಥದಲ್ಲಿ ಗ್ರಹಿಸಿದರೆ ಊರಲ್ಲಿ ವಿವಿಧ ಜಾತಿ, ಮತ, ಧರ್ಮಗಳ ಜನರ ಮಧ್ಯೆ ಗೋಡೆ ನಿರ್ಮಿಸುವ ದೇವರ ಆರಾಧನಾ ಮಂದಿರಗಳನ್ನು ಕಟ್ಟುವುದಕ್ಕಿಂತ ಕನ್ನಡ ಶಾಲೆಗಳನ್ನು ತೆರೆದು ಅಕ್ಷರ ವಂಚಿತ ಮಕ್ಕಳಿಗೆ ಅಕ್ಷರಭಾಗ್ಯ ಕೊಡುವುದು ಹೆಚ್ಚು ಪುಣ್ಯದ ಕೆಲಸ.
ನಮ್ಮ ಮಠ, ಮಂದಿರಗಳಲ್ಲಿ ಪೀಠಸ್ಥರಾಗಿರುವ ಮಾತನಾಡುವ, ನಡೆದಾಡುವ ದೇವರುಗಳದ್ದೇ ನಮಗೆ ದೊಡ್ಡ ಸಮಸ್ಯೆ. ಹಾಗೆ ನೋಡಿದರೆ ಮಾತನಾಡದ, ಓಡಾಡದ ಕಲ್ಲು ದೇವರುಗಳಿಂದ ಸಮಾಜಕ್ಕೆ ಅಂತಹ ದೊಡ್ಡ ಅಪಾಯಗಳಿಲ್ಲ. ಜನ ಅವರವರ ಭಾವಕ್ಕೆ ಭಕ್ತಿಗೆ ಸರಿಯಾಗಿ ನಡೆದುಕೊಳ್ಳುತ್ತಾರೆ ಬಿಡಿ. ಕನಿಷ್ಠ ಅಂತಹ ದೇವರಿಗೆ ಹೆಣ್ಣು, ಮಣ್ಣು , ಹೊನ್ನು, ರಾಜಕೀಯ ಇತ್ಯಾದಿ ಚಪಲಗಳಿಲ್ಲ ತಾನೇ!
 ಕೆಸರು ಮೆತ್ತಿಕೊಂಡ ದೇವಾಲಯಕ್ಕಿಂತ ಊರಿಗೊಂದು ಶಾಲೆಯೇ ಮುಖ್ಯವಾಗುತ್ತದೆ. ಏಕೆಂದರೆ ಶಿಕ್ಷಿತ ಪ್ರಜಾವರ್ಗವೇ ಪ್ರಜಾಪ್ರಭುತ್ವ ರಾಷ್ಟ್ರ ಒಂದರ ನಿಜವಾದ ಶಕ್ತಿ ಮತ್ತು ಸಂಪತ್ತು. ಸ್ವಾತಂತ್ರ ದೊರೆತು 6-7 ದಶಕಗಳೇ ಕಳೆದರೂ ನಮ್ಮದಿನ್ನೂ ಪೂರ್ಣ ಅಕ್ಷರವಂತ ನಾಡಾಗಿಲ್ಲ. ಕಾರಣ ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಎಲ್ಲ ಹಂತಗಳಲ್ಲೂ ಹದಗೆಟ್ಟು ಹೋಗಿದೆ. ಹಾಗಾಗಿ ನಿಜವಾದ ಅರ್ಥದಲ್ಲಿ ನಾವಿನ್ನೂ ವಿದ್ಯಾವಂತರಾಗಿಲ್ಲ. ಪುರಾಣದ ಪೊಳ್ಳುಕಂತೆಗಳು ಜನಸಾಮಾನ್ಯರಿಗೂ ಗೊತ್ತಿದ್ದರೆ, ರಾಷ್ಟ್ರಗ್ರಂಥವಾದ ಸಂವಿಧಾನದ ಆಶಯಗಳ ಬಗ್ಗೆ ಹೆಚ್ಚಿನ ವಿದ್ಯಾವಂತರಿಗೇ ಪ್ರಾಥಮಿಕ ತಿಳುವಳಿಕೆಯ ಕೊರತೆ ಇದೆ. ಆದ್ದರಿಂದಲೇ ಸಮಾಜದಲ್ಲಿನ್ನೂ ವೈಚಾರಿಕತೆಯ ಬದಲಾಗಿ ವೌಢ್ಯಾಚರಣೆ, ಜಾತ್ಯತೀತತೆಯ ಬದಲಾಗಿ ವರ್ಣಾಶ್ರಮ ವ್ಯವಸ್ಥೆ ಇತ್ಯಾದಿಗಳೇ ನಮ್ಮಲ್ಲಿ ಮೇಲುಗೈ ಪಡೆಯುತ್ತದೆ. ಕಡೆಗಣಿಸಲ್ಪಟ್ಟ ವರ್ಗದವರು ಇನ್ನೂ ನೆಟ್ಟಗೆ ನಿಂತು ಉಸಿರಾಡುವುದಕ್ಕೂ ಹಿಂಜರಿಯುವಂತಾಗಿದೆ. ಹಾಗಾಗಿ ಹಳ್ಳಿಯ ಪ್ರತಿಯೊಂದು ಮೂಲೆಯಲ್ಲೂ ಸುಸಜ್ಜಿತ ಶಾಲೆಗಳನ್ನು ತೆರೆದು ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲು ಎಲ್ಲ ಧರ್ಮಗುರುಗಳೂ, ಮಠ ಪೀಠಸ್ಥರೂ ಮುಂದಾದರೆ ಅಂತಹವರನ್ನು ಈ ನಾಡು ಗೌರವಿಸುತ್ತದೆ. ಇಲ್ಲವಾದರೆ ದೇವರ ಹೆಸರಲ್ಲಿ ಹರಿದುಬರುತ್ತಿರುವ ಹಣದ ಹೊಳೆಯಲ್ಲಿ ಮಿಂದು, ನಾರಿಯರ ಸೆರಗು ಹಿಡಿವ, ಭೂಮಿಕಬಳಿಸುವ, ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳುವ, ವಿಲಾಸಿ ಭೋಗ ಜೀವನವನ್ನು ನಡೆಸುವ ಧರ್ಮಗುರುಗಳೆಂಬ ಮುಖವಾಡ ಧರಿಸುವವರನ್ನು ನಾವು ಯಾಕಾಗಿ ಗೌರವಿಸಬೇಕು? ಆದ್ದರಿಂದ ಎಲ್ಲೆಂದರಲ್ಲಿ ಮಂದಿರ ಕಟ್ಟುವುದಕ್ಕೆ ಮುಂದಾಗುವ ಮಂದಿ, ಸರ್ವ ಜಾತಿ, ಮತ, ಧರ್ಮಗಳ ಮಕ್ಕಳಿಗೆ ಮುಕ್ತಪ್ರವೇಶವಿರುವ ವಿದ್ಯಾದೇಗುಲಗಳನ್ನು ನಿರ್ಮಿಸಲು ಮುಂದೆ ಬರಲಿ. ಅಲ್ಲಿ ಬ್ರಹ್ಮಕಲಶದ ಬದಲು ಜ್ಞಾನ ಕಲಶದ ಸತ್ರ ನಡೆಯಲಿ. ಇದುವೇ ನಾಡಿನ ನೆಮ್ಮದಿಗೆ ನಾಂದಿ. ಇಲ್ಲಿ ಸ್ಪಷ್ಟವಾಗಿ ಹೇಳಬಹುದಾದ ಅಂಶವೇನೆಂದರೆ, ಊರಿಗೊಂದು ದೇವಾಲಯ ಬಂದಾಗ ಅಲ್ಲಿನ ಜನತೆಗೆ ಒಳಿತಾಗುತ್ತದೆ ಎಂಬುವುದಕ್ಕೆ ಯಾವುದೇ ಸಮೀಕ್ಷಾ ವರದಿಗಳ ಪುರಾವೆಯಿಲ್ಲ ಆದರೆ ಶಾಲೆಯೊಂದು ಬಂದಾಗ ಜನರಲ್ಲಿ ಪ್ರಜ್ಞಾವಂತಿಕೆ ಬೆಳೆಯುತ್ತದೆ ಎಂಬುದು ನಿರ್ವಿವಾದ ಸತ್ಯ.

-ಸಿ. ಎಚ್. ಕ್ರಷ್ಣಶಾಸ್ತ್ರಿ ಬಾಳಿಲ,

share
ವಾರ್ತಾಭಾರತಿ
ವಾರ್ತಾಭಾರತಿ
Next Story
X