ಕಾಸರಗೋಡು : ಚೆರ್ಕಳ - ಕಲ್ಲಡ್ಕ ರಾಜ್ಯ ಹೆದ್ದಾರಿಯ ಅವ್ಯವಸ್ಥೆಯನ್ನು ಖಂಡಿಸಿ ರಸ್ತೆ ತಡೆ

ಕಾಸರಗೋಡು : ಚೆರ್ಕಳ - ಕಲ್ಲಡ್ಕ ರಾಜ್ಯ ಹೆದ್ದಾರಿಯ ಅವ್ಯವಸ್ಥೆಯನ್ನು ಖಂಡಿಸಿ ಕ್ರಿಯಾ ಸಮಿತಿ ವತಿಯಿಂದ ಮಂಗಳವಾರ ಮೂರು ಕಡೆಗಳಲ್ಲಿ ರಸ್ತೆ ತಡೆ ನಡೆಸಿದರು. ಬದಿಯಡ್ಕ , ನೆಲ್ಲಿಕಟ್ಟೆ, ಪೆರ್ಲ ಪೇಟೆಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಬದಿಯಡ್ಕ ದಲ್ಲಿ ನಡೆದ ಪ್ರತಿಭಟನೆಯನ್ನು ವರ್ತಕರ ಸಂಘದ ಬದಿಯಡ್ಕ ಘಟಕ ಅಧ್ಯಕ್ಷ ಎಸ್ . ಎನ್ ಮಯ್ಯ ಉದ್ಘಾಟಿಸಿದರು.
ಮುಖಂಡರಾದ ಕುಂಜಾರು ಮುಹಮ್ಮದ್ , ಜ್ಞಾನದೇವ ಶೆಣೈ ಉಪಸ್ಥಿತರಿದ್ದರು. ಪೆರ್ಲದಲ್ಲಿ ನಡೆದ ಪ್ರತಿಭಟನೆಯನ್ನು ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಪ್ರಸಾದ್ ಟಿ ., ಬಾಲಕೃಷ್ಣ ಭಟ್ , ನೆಲ್ಲಿಕಟ್ಟೆ ಯಲ್ಲಿ ನಡೆದ ರಸ್ತೆ ತಡೆಯನ್ನು ಅಬ್ದುಲ್ ಕುನ್ಚಿ ಉದ್ಘಾಟಿಸಿದರು. ಕೆ. ಇಬ್ರಾಹಿಮ್ , ಅಬೂಬಕ್ಕರ್ ಉಪಸ್ಥಿತರಿದ್ದರು.
ಚೆರ್ಕಳದಿಂದ ನೆಲ್ಲಿಕಟ್ಟೆ - ಬದಿಯಡ್ಕ - ಪೆರ್ಲ ಮೂಲಕ ಅಡ್ಕಸ್ಥಳ ತನಕದ ಸುಮಾರು ೩೦ ಕಿ. ಮೀ ರಾಜ್ಯಹೆದ್ದಾರಿಯ ಬಹುತೇಕ ರಸ್ತೆಯು ಹೆದೆಗೆಟ್ಟಿದ್ದು , ವಾಹನ ಸಂಚಾರ ಕ್ಕೆ ತೊಡಕಾಗಿ ಪರಿಣಮಿಸಿದೆ. ಹತ್ತು ವರ್ಷಗಳಿಂದ ರಸ್ತೆ ದುರಸ್ತಿ ಹಾಗೂ ಡಾಮರಿಕರಣಗೊಳಿಸಿಲ್ಲ. ಇದರಿಂದ ರಸ್ತೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ
ಕಾಸರಗೋಡು : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬೆಂಬಲಿತ ಸರಕಾರಿ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಇದರಿಂದ ಸರಕಾರಿ ಕಚೇರಿ ಮತ್ತು ಶಾಲೆಗಳಲ್ಲಿ ಹಾಜರಾತಿ ವಿಳಂಬವಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಹೊಂದಿರುವ ಕಾಸರಗೋಡು ಸಿವಿಲ್ ಸ್ಟೇಶನ್ , ತಾಲೂಕು ಕಚೇರಿ ಮೊದಲಾದೆಡೆಗಳಲ್ಲಿ ಹಾಜರಾತಿ ಕಡಿಮೆ ಇತ್ತು. ನೌಕರರ ಮುಸ್ಖರದಿಂದ ಸರಕಾರಿ ಕಛೇರಿಗಳ ದೈನಂದಿನ ಚಟುವಟಿಕೆ ಅಸ್ತವ್ಯಸ್ಥಗೊಂಡಿತು.
ಹುದ್ದೆಗಳನ್ನು ಕಡಿತಗೊಳಿಸುವ ಹುನ್ನಾರವನ್ನು ಕೈಬಿಡಬೇಕು, ವೇತನ ಪರಿಷ್ಕಾರ ಶೀಘ್ರ ಜಾರಿಗೆ ತರಬೇಕು, ಬೆಲೆಯೇರಿಕೆಯನ್ನು ತಡೆಗಟ್ಟಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಿದರು.





