ಕಾಸರಗೋಡು : ಹೋಟೆಲ್ ಗೆ ನುಗ್ಗಿ ಕಳವು ನಡೆಸಿದ ಆರೋಪಿಯ ಬಂಧನ.

ಕಾಸರಗೋಡು : ಹೋಟೆಲ್ ಗೆ ನುಗ್ಗಿ ಕಳವು ನಡೆಸಿದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಟ್ಟನ್ನೂರಿನ ಅಬ್ದುಲ್ ಜಲೀಲ್ (೩೫) ಎಂದು ಗುರುತಿಸಲಾಗಿದೆ. ಮಂಜೇಶ್ವರದಲ್ಲಿ ಹೋಟೆಲ್ ನ ಶಟರ್ ಮುರಿದು ಕಳವು ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದ್ದು ,ಈತ ಕುಂಬಳೆ , ಮಂಜೇಶ್ವರ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರ ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ . ಇದಲ್ಲದೆ ಕಣ್ಣೂರು ಜಿಲ್ಲೆಯ ಹಲವು ಟಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲೂ ಶಾಮಿಲಾಗಿದ್ದಾನೆ.
ಮಂಜೇಶ್ವರ ದ ಹೋಟೆಲ್ ನಿಂದ ಒಂದು ಸಾವಿರ ರೂ . ನಗದನ್ನು ಕಳವು ಮಾಡಿದ್ದನು . ಜನವರಿ ಹತ್ತರಂದು ಘಟನೆ ನಡೆದಿತ್ತು. ಈ ಬಗ್ಗೆ ಮಂಜೇಶ್ವರ ಟಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು
Next Story





