ಕಾಸರಗೋಡು : ಒಂದೂವರೆ ಕಿಲೋ ಚಿನ್ನಾಭರಣ ಲಪಟಾಯಿಸಿದ ತಂಡ
ಕಾಸರಗೋಡು : ಚಿನ್ನ ವ್ಯಾಪಾರಿಯ ಬಳಿಯಿಂದ ಒಂದೂವರೆ ಕಿಲೋ ಚಿನ್ನಾಭರಣ ಲಪಟಾಯಿಸಿದ ಘಟನೆ ಕಾಸರಗೋಡು ಹಳೆ ಬಸ್ಸು ನಿಲ್ದಾಣ ಸಮೀಪ ಮಂಗಳವಾರ ರಾತ್ರಿ ನಡೆದಿದೆ.
ತ್ರಿಶ್ಯೂರಿನ ಟೋನಿ (೫೦) ದರೋಡೆಗೊಳಗಾದವರು. ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದಾಗ ಮೆಹಬೂಬ್ ಥಿಯೇಟರ್ ಬಳಿ ಕಾರಿನಲ್ಲಿ ಬಂದ ತಂಡವೊಂದು ಒಂದೂವರೆ ಕಿಲೋ ಚಿನ್ನ ಇದ್ದ ಬ್ಯಾಗ್ ನ್ನು ಕಾರಿನಲ್ಲಿ ಬಂದ ತಂಡ ದರೋಡೆ ಗೈದು ಪರಾರಿ ಯಾಗಿದೆ . ಜುವಲ್ಲರಿಗಳಿಗೆ ಚಿನ್ನಾಭರಣ ಪೂರೈಕೆ ಮಾಡುತ್ತಿದ್ದ ಇವರು ನಗರದಿಂದ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸುಳ್ಯ ಮತ್ತು ಪುತ್ತೂರಿನ ಜುವಲ್ಲರಿಗೆ ಚಿನ್ನಾಭರಣ ತಲುಪಿಸಿ ಅಲ್ಲಿಂದ ಕಾಸರಗೋಡಿಗೆ ಬಂದು ತ್ರಿಶ್ಯೂರಿಗೆ ಮರಳಲು ಬಸ್ದ್ಸು ನಿಲ್ದಾಣಕ್ಕೆ ಬರುತ್ತಿದ್ದರು ಎನ್ನಲಾಗಿದೆ .
ಸ್ವಿಫ್ಟ್ ಕಾರಿನಲ್ಲಿ ದರೋಡೆ ಕೋರರು ಬಂದಿದ್ದರು ಎನ್ನಲಾಗಿದೆ.
ಘಟನೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ತಲುಪಿದ ಕಾಸರಗೋಡು ಪೊಲೀಸರು ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.





