ಇನ್ಕ್ರೆಡಿಬಲ್ ಇಂಡಿಯಾ" ರಾಯಭಾರಿ ವಿವಾದ: "ದಯಮಾಡಿ ನನ್ನನ್ನು ದೂರವಿಡಿ" : ಶಾರೂಖ್ ಖಾನ್

ಕೋಲ್ಕತಾ, ಜ.12: ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರು ಬಾಲಿವುಡ್ ನಟ ಆಮೀರ್ ಖಾನ್- ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಇನ್ಕ್ರೆಡಿಬಲ್ ಇಂಡಿಯಾ ರಾಯಭಾರಿ ಚರ್ಚಾ ವಿವಾದದಿಂದ ದೂರ ಉಳಿಯಲು ಬಯಸಿದ್ದಾರೆ
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ಇಲ್ಲಿಗೆ ಆಗಮಿಸಿದ್ದ ಶಾರೂಖ್ ಅವರನ್ನು "ಇನ್ಕ್ರೆಡಿಬಲ್ ಇಂಡಿಯಾ' ( ವಿಸ್ಮಯಕಾರಿ ಭಾರತ) ಆಂದೋಲನದ ರಾಯಭಾರಿ ಹುದ್ದೆಯಿಂದ ಸೂಪರ್ ಸ್ಟಾರ್ ಆಮಿರ್ ಖಾನ್ರನ್ನು ಕೆಳಗಿಸಿ ತೆರವಾಗಿರುವ ಸ್ಥಾನಕ್ಕೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರನ್ನು ನೇಮಕಗೊಳಿಸಿದ ವಿಚಾರದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ " ನನಗೆ ಅದು ಸಂಬಂಧಿಸಿದ್ದಲ್ಲ. ನಾನು ರಾಯಭಾರಿಯಾಗಿ ನೇಮಕಗೊಳ್ಳದಿದ್ದರೂ ಕಳೆದುಕೊಳ್ಳುವುದು ಏನು ಇಲ್ಲ . ದಯಮಾಡಿ ನನ್ನನ್ನು ಈ ವಿವಾದದಿಂದ ದೂರವಿಡಿ " ಎಂದು ಹೇಳಿದರು.
Next Story





