ಇಂದು ನವಕೇರಳ ಜಾಥಾ ಉದ್ಘಾಟನೆ
ಕಾಸರಗೋಡು : ಜಾತ್ಯಾತೀತ, ಭ್ರಷ್ಟಾಚಾರ ಮುಕ್ತ ,ಅಭಿವ್ರದ್ದಿ ಕೇರಳ ಎಂಬ ಘೋಷಣೆಯೊಂದಿಗೆ ಸಿಪಿಐ ಎಂ ರಾಜ್ಯ ಸಮಿತಿ ನೇತ್ರತ್ವದಲ್ಲಿ ಪಾಲಿಟ್ ಬ್ಯುರೋ ಸದಸ್ಯ ಪಿಣರಾಯಿ ವಿಜಯನ್ ನೇತ್ರತ್ವದ ನವಕೇರಳ ಜಾಥಾ ಇಂದು ಸಂಜೆ ಉಪ್ಪಳದಿಂದ ಪ್ರಯಾಣ ಬೆಳೆಸಲಿದೆ . ಜಾಥಾ ಉದ್ಘಾಟನೆಗೆ ಉಪ್ಪಳ ಸಜ್ಜಾಗಿದೆ.
ಸಂಜೆ ಮೂರು ಗಂಟೆಗೆ ಉಪ್ಪಳ ಪೇಟೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್ ಜಾಥಾ ಕ್ಕೆ ಚಾಲನೆ ನೀಡುವರು .
ಪ್ರತಿಪಕ್ಷ ನಾಯಕ ವಿ .ಎಸ್ ಅಚ್ಯುತಾನಂದನ್, ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಉಪಸ್ಥಿತರಿರುವರು.
ಜಾಥಾಕ್ಕೆ ಇಂದು ಸಂಜೆ ಐದು ಗಂಟೆಗೆ ಕಾಸರಗೋಡಿನಲ್ಲಿ ಸ್ವಾಗತ ನೀಡಲಾಗುವುದು. ನಾಳೆ ಬೆಳಿಗ್ಗೆ 10 ಗಂಟೆಗೆ ಚಟ್ಟ೦ಚಾಲ್, ಕಾನ್ಚಾನ್ಗಾಡ್, ತ್ರಿಕ್ಕರಿಪುರ , ಕಾಲಿಕ್ಕಡವು ನಲ್ಲಿ ಸ್ವಾಗತ ನೀಡಲಾಗುವುದು .
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮೂಲಕ ಹಾದು ಹೋಗುವ ಯಾತ್ರೆ ಫೆಬ್ರವರಿ 14 ರಂದು ತಿರುವನಂತಪುರ ದಲ್ಲಿ ಜಾಥಾ ಕೊನೆಗೊಳ್ಳಲಿದೆ.





