Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ರಾಷ್ಟ್ರೀಯ ಸಮಾವೇಶಕ್ಕೆ ಹರಿದು ಬರಲಿದೆ ...

ರಾಷ್ಟ್ರೀಯ ಸಮಾವೇಶಕ್ಕೆ ಹರಿದು ಬರಲಿದೆ ನದಿ –ಜನ ಜಾಥಾ

ದಿನಕರ ಎಸ್. ಬೆಂಗ್ರೆದಿನಕರ ಎಸ್. ಬೆಂಗ್ರೆ15 Jan 2016 6:20 PM IST
share
ರಾಷ್ಟ್ರೀಯ ಸಮಾವೇಶಕ್ಕೆ ಹರಿದು ಬರಲಿದೆ  ನದಿ –ಜನ ಜಾಥಾ


ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಜನವರಿ,30-2016 ರಂದು ಮಂಗಳೂರಲ್ಲಿ ಹಮ್ಮಿಕೊಂಡಿರುವ ‘ ಸಹಬಾಳ್ವೆಯ ಸಾಗರ’ ರಾಷ್ಟ್ರೀಯ ಸಮ್ಮೇಳನಕ್ಕೆ ನಾಡಿನ ವಿವಿಧ ಭಾಗಗಳಿಂದ ಸಹಬಾಳ್ವೆಯ ಜನರು ನದಿ ಹೆಸರಿನ ಜಾಥಾದ ಮೂಲಕ ಬರಲಿದ್ದು, ಅದರ ತಯಾರಿಗಳು ಈಗಾಗಲೇ ಆರಂಭಗೊಂಡಿವೆ. 
ನೇತ್ರಾವತಿ – ಮಲಪ್ರಭಾ ನದಿಗಳ ಹೆಸರಲ್ಲಿ ಬಸವಣ್ಣನ ಕೂಡಲ ಸಂಗಮದಿಂದ ಬಿಜಾಪುರ , ಬಾಗಲಕೋಟೆ , ಬಾದಾಮಿ ಭಾಗದ   ಜನ ಜಾಥಾ ಹೊರಡಲಿದ್ದು, ಇದರ ನೇತೃತ್ವವನ್ನು ಹೋರಾಟಗಾರ ಲಕ್ಷ್ಮಣ್ ಮರಡಿತೋಟ ಮತ್ತು ಆ ಭಾಗದ ಸಂಗಾತಿಗಳು ವಹಿಸಿಕೊಳ್ಳಲಿದ್ದು, ಈ ಬಗ್ಗೆ ಸಭೆಗಳನ್ನು ನಡೆಸಲಾಗುತ್ತಿದೆ. 
ಶರಾವತಿ ನದಿ ಹೆಸರಿನ  ಜನ ಜಾಥಾವು ಶಿಶುನಾಳ ಶರೀಫರ ಕ್ಷೇತ್ರ  ಶಿಶುನಾಳದಿಂದ ಹೊರಡಲಿದ್ದು ಅದರಲ್ಲಿ ದಾವಣಗೆರೆ – ಚಿತ್ರದುರ್ಗಾಜಿಲ್ಲೆಗಳ ಭಾಗದ ಜನರು ಸೇರಿಕೊಳ್ಳಲಿದ್ದು, ಅದರ ನೇತೃತ್ವವನ್ನು  ನ್ಯಾಯವಾದಿ ಅನೀಸ್ ಪಾಶಾ – ಮೋಹನ್ ರಾಮಕೃಷ್ಣ ಮತ್ತಿತರ ಸಂಗಾತಿಗಳು ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಆ ಭಾಗದಲ್ಲಿ ಕರಪತ್ರ ಬಿಡುಗಡೆ – ಪ್ರಚಾರ ಸಭೆಗಳನ್ನು ನಡೆಸಲಾಗುತ್ತಿದೆ. 


ಸೀತಾ – ಭದ್ರಾ ನದಿ ಹೆಸರಿನ ಜನ ಜಾಥಾವು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಆರಂಭಗೊಂಡ ಭಾವೈಕ್ಯ ಮತ್ತು ಸಹಬಾಳ್ವೆಯ ಸಂಸ್ಕೃತಿಯ ಪ್ರತೀಕವಾದ ಚಿಕ್ಕಮಗಳೂರಿನ ಬಾಬಾ ಬುಡಾನ್ ಗಿರಿಯಿಂದ ಹೊರಡಲಿದ್ದು, ಅದರ ನೇತೃತ್ವವನ್ನು ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ಮತ್ತು ಶ್ರೀನಿವಾಸ್ ಹಾಗೂ ಆ ಭಾಗದ ಸಂಗಾತಿಗಳು  ವಹಿಸಲಿದ್ದಾರೆ.


ಶಾಂಭವಿ – ಕಾವೇರಿ ನದಿಗಳ ಹೆಸರಿನ ಜನಜಾಥಾವು ಮೈಸೂರು ಹುಲಿ ಟಿಪ್ಪು ಸುಲ್ತಾನನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಿಂದ ಹೊರಡಲಿದೆ. ಮಂಡ್ಯ – ಮೈಸೂರು- ರಾಮನಗರ ಜಿಲ್ಲೆಗಳ ಜನರನ್ನು ಇದು ಒಳಗೊಳ್ಳಲಿದ್ದು,  ಇದರ ನೇತೃತ್ವವನ್ನು ಹಿರಿಯರಾದ ಬರಹಗಾರ ಎಚ್.ಎಲ್.ಕೇಶವ ಮೂರ್ತಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಬಂಧಿಗೌಡರ ಪುತ್ರ ಡಾ.ಸುಜಯ ಕುಮಾರ್ ಮತ್ತು ಇತರ ಸಂಗಾತಿಗಳು ವಹಿಸಲಿದ್ದಾರೆ.


ಸೌಪರ್ಣಿಕಾ – ಶಾಲ್ಮಲಾ ನದಿ ಹೆಸರಿನ ಜನ ಜಾಥಾವು ಉತ್ತರಕನ್ನಡ ಜಿಲ್ಲೆಯ ಜನರನ್ನು ಒಳಗೊಂಡು ಅಂಕೋಲಾದಿಂದ ಹೊರಡಲಿದ್ದು, ಇದರ ನೇತೃತ್ವವನ್ನು ಕೆ.ರಮೇಶ್ ಅಂಕೋಲಾ ಮತ್ತಿತರ ಸಂಗಾತಿಗಳು ವಹಿಸಿಕೊಳ್ಳುವರು. ಇದರ ಬಗ್ಗೆ ಜನವರಿ,20-2016 ರಂದು ಅಂಕೋಲಾದಲ್ಲಿ ಚಿಂತನಾ ಸಭೆ ನಡೆಯಲಿದೆ.
ಕುಮಾರಧಾರಾ – ಫಲ್ಗುಣಿ ನದಿ ಹೆಸರಿನ ಜನ ಜಾಥಾವು ಚಿಕ್ಕಬಳ್ಳಾಪುರ – ಕೋಲಾರ ಭಾಗದ ಜನರನ್ನು ಒಳಗೊಂಡು ಚಿಕ್ಕಬಳ್ಳಾಪುರದ ಕೈವಾರ ತಾತಯ್ಯನ ಕ್ಷೇತ್ರದಿಂದ ಹೊರಡಲಿದ್ದು, ಇದರ ನೇತೃತ್ವವನ್ನು ವೇದಿಕೆಯ ರಾಜ್ಯ ಕಾರ್ಯದರ್ಶಿ – ಹಿರಿಯ ಹೋರಾಟಗಾರ ಎನ್.ವೆಂಕಟೇಶ್ – ಸಿ.ಜಿ.ಗಂಗಪ್ಪ ಮತ್ತಿತರ ಸಂಗಾತಿಗಳು ವಹಿಸಿಕೊಳ್ಳಲಿದ್ದಾರೆ.


ಕಾಳಿ – ಕೃಷ್ಣಾ ನದಿ ಜನ ಜಾಥಾವೂ ಹೈದರಬಾದ್ ಕರ್ನಾಟಕದ ಭಾಗದ ಜನರನ್ನು ಒಳಗೊಂಡು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಭಾವೈಕ್ಯದ ಕೇಂದ್ರವಾದ ತಿಂಥಿಣಿಯ ಮೌನೇಶ್ವರ ಕ್ಷೇತ್ರದಿಂದ ಹೊರಡಲಿದ್ದು, ಇದರ ನೇತೃತ್ವವನ್ನು ಹೋರಾಟಗಾರ ಮಲ್ಲಯ್ಯ ಕಮತಗಿ ಮತ್ತಿತರರು ವಹಿಸಿಕೊಳ್ಳಲಿದ್ದಾರೆ. 


ಈ ಎಲ್ಲಾ ಜಾಥಾಗಳು ಜನವರಿ,29 ರ ರಾತ್ರಿಯ ಒಳಗೆ ಮಂಗಳೂರು ಸೇರಿಕೊಳ್ಳಲಿದ್ದು, ಕರಾವಳಿಯ ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಕುಂದಾಪುರದ ಗಡಿಭಾಗಗಳಲ್ಲಿ ಈ ಜಾಥಾಗಳನ್ನು ಸಮಾವೇಶದ ಸ್ವಾಗತ ಸಮಿತಿಯ ತಾಲೂಕು ಸಮಿತಿಯವರು ಸ್ವಾಗತಿಸಿ ಮುಂದಕ್ಕೆ ಬೀಳ್ಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ರೀತಿಯಲ್ಲಿ ಜನವರಿ,30 ರ ಸಹಬಾಳ್ವೆಯ ಸಾಗರವೂ ನದಿ – ಜನ ಜಾಥಾದ ಮೂಲಕ ಸೇರಿಕೊಂಡು  ಮಂಗಳೂರಿನ ಅರಬ್ಬೀ ಕಡಲಿಗೆ ಸೇರುವ ಸಾಂಕೇತಿಕ ನಡೆಯನ್ನು ತೋರ್ಪಡಿಸಿಕೊಳ್ಳುವ ಮೂಲಕ ಕರಾವಳಿಯಲ್ಲಿರುವ ಸಹಬಾಳ್ವೆಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರ್ಥಗರ್ಭಿತವಾಗಿ ನಡೆಯಲಿದೆ ಎಂದು ಹೇಳಲಾಗಿದೆ.
 

share
ದಿನಕರ ಎಸ್. ಬೆಂಗ್ರೆ
ದಿನಕರ ಎಸ್. ಬೆಂಗ್ರೆ
Next Story
X