ಮಾನವೀಯತೆ ಕಳೆದುಕೊಂಡಾಗ ಮಾನವ ಹಕ್ಕು ಉಲ್ಲಂಘನೆ: ನ್ಯಾ.ಹೆಗ್ಡೆ
ಮಂಗಳೂರು, ಜ.16: ಮನುಷ್ಯನಿಗೆ ತೃಪ್ತಿ ಇಲ್ಲದಿರುವುದರಿಂದ ದುರಾಸೆ ಹೆಚ್ಚಾಗಿ ಅದರಿಂದ ಪ್ರಲೋಭನೆಗೆ ಒಳಗಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುತ್ತಾನೆ. ಅಧಿಕ ಆದಾಯ ಗಳಿಸುವ ಉದ್ದೇಶ ದಿಂದ ಮಾನವೀಯತೆಯನ್ನು ಕಳೆದುಕೊಂಡು ಮಾನವ ಹಕ್ಕು ಉಲ್ಲಂಘನೆ ಕೃತ್ಯ ನಡೆಸುತ್ತಾನೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ವಿಶ್ಲೇಷಿಸಿದ್ದಾರೆ. ‘ಬಾಂಧವ್ಯ ಒಕ್ಕೂಟ ಮಂಗಳೂರು’ ಇದರ ದಶ ಮಾನೋತ್ಸವ ಪ್ರಯುಕ್ತ ಶನಿವಾರ ನಡೆದ ಮಾನವ ಹಕ್ಕುಗಳ ಶಾಂತಿ ಜಾಥಾ ಮತ್ತು ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾ ಡಿದರು. ದುರಾಸೆ ಮತ್ತು ಅಮಾನವೀಯದಿಂದ ಆಗುವ ಮಾನವ ಹಕ್ಕು ಉಲ್ಲಂಘನೆ ಇತರೆಲ್ಲಾ ಉಲ್ಲಂಘನೆ ಗಳಿಂತ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಮನುಷ್ಯನಿಗೆ ತೃಪ್ತಿ ಮತ್ತು ಮಾನವೀಯತೆ ಅತೀ ಅಗತ್ಯ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ಶಾಸಕ ಜೆ. ಆರ್.ಲೋಬೊ ದಿಕ್ಸೂಚಿ ಭಾಷಣ ಮಾಡಿದರು. ಮಂಗಳೂರು ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿ ಸಿದ್ದರು. ಉಪನ್ಯಾಸಕಿ ಶೈಲಜಾ ಸಂತೋಷ್ ಸಂಪ ನ್ಮೂಲ ವ್ಯಕ್ತಿಯಾಗಿದ್ದರು. ಬಾಂಧ್ಯವ್ಯ ಒಕ್ಕೂಟದ ಸಹ ಸಂಚಾಲಕಿ ಸಿಸ್ಟರ್ ಫಿಲೋಮಿನಾ ಸೆರಾವೊ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಫಾ.ಓಸ್ವಲ್ಡ್ ಮೊಂತೆರೊ ಪ್ರಾಸ್ತಾವಿಸಿದರು. ಸಂಚಾಲಕ ಾ. ವಿನೋದ್ ಮಸ್ಕರೇನ್ಹಸ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಿಲಾಗ್ರಿಸ್ ಚರ್ಚ್ ಮೈದಾನದಿಂದ ಬೆಂದೂರ್ ಸೈಂಟ್ ಆ್ಯಗ್ನೆಸ್ ಸ್ಪೆಷಲ್ ಸ್ಕೂಲ್ವರೆಗೆ ಜಾಥಾ ನಡೆಯಿತು. ಜಾಥಾವನ್ನು ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಉದ್ಘಾಟಿಸಿದರು.





