Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಿಖ್, ಮುಸ್ಲಿಂ ಪ್ರಯಾಣಿಕರನ್ನು...

ಸಿಖ್, ಮುಸ್ಲಿಂ ಪ್ರಯಾಣಿಕರನ್ನು ಕೆಳಗಿಳಿಸಿದ ಅಮೆರಿಕ ವಿಮಾನ: 60 ಕೋಟಿ ರೂ. ಪರಿಹಾರ ಕೋರಿ ದಾವೆ

ವಾರ್ತಾಭಾರತಿವಾರ್ತಾಭಾರತಿ19 Jan 2016 8:05 PM IST
share
ಸಿಖ್, ಮುಸ್ಲಿಂ ಪ್ರಯಾಣಿಕರನ್ನು ಕೆಳಗಿಳಿಸಿದ ಅಮೆರಿಕ ವಿಮಾನ: 60 ಕೋಟಿ ರೂ. ಪರಿಹಾರ ಕೋರಿ ದಾವೆ

ನ್ಯೂಯಾರ್ಕ್, ಜ. 19: ಅಮೆರಿಕನ್ ಏರ್‌ಲೈನ್ಸ್ ವಿಮಾನವೊಂದರಿಂದ ಹೊರದಬ್ಬಲ್ಪಟ್ಟ ಸಿಖ್ ಮತ್ತು ಮುಸ್ಲಿಂ ಪ್ರಯಾಣಿಕರು ವಿಮಾನ ಕಂಪೆನಿ ವಿರುದ್ಧ 90 ಲಕ್ಷ ಡಾಲರ್ (ಸುಮಾರು 60 ಕೋಟಿ ರೂಪಾಯಿ) ಪರಿಹಾರ ಕೋರಿ ದಾವೆ ಹೂಡಿದ್ದಾರೆ.

ಈ ಪ್ರಯಾಣಿಕರ ಚಹರೆಯಿಂದ ವಿಮಾನ ಕ್ಯಾಪ್ಟನ್ ಕಸಿವಿಸಿಗೊಂಡು ಈ ನಿರ್ಧಾರ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ.

ಕಳೆದ ತಿಂಗಳು ಟೊರಾಂಟೊ-ನ್ಯೂಯಾರ್ಕ್ ವಿಮಾನದಿಂದ ಕೆಳಗಿಳಿಯುವಂತೆ ಸಿಖ್ ಶಾನ್ ಆನಂದ್‌ಮತ್ತು ಅವರ ಮೂವರು ಸ್ನೇಹಿತರಿಗೆ ಆದೇಶ ನೀಡಲಾಗಿತ್ತು. ಅವರ ಜನಾಂಗ, ಬಣ್ಣ ಮತ್ತು ಧರ್ಮವನ್ನು ಗಣನೆಗೆ ತೆಗೆದುಕೊಂಡು ಕ್ಯಾಪ್ಟನ್ ಈ ನಿರ್ಧಾರ ತೆಗೆದುಕೊಂಡಿದ್ದರು ಎಂದು ಸಿಎನ್‌ಎನ್ ವರದಿಯೊಂದು ಹೇಳಿದೆ.

ಆನಂದ್‌ರ ಸ್ನೇಹಿತರಾದ ಓರ್ವ ಬಾಂಗ್ಲಾದೇಶಿ ಮುಸ್ಲಿಂ ಮತ್ತು ಓರ್ವ ಅರಬ್ ಮುಸ್ಲಿಂನ್ನು ಡಬ್ಲುಎಚ್ ಮತ್ತು ಎಂಕೆ ಎಂಬುದಾಗಿ ಮಾತ್ರ ಗುರುತಿಸಲಾಗಿದೆ.

ಆನಂದ್ ಮತ್ತು ಅವರ ಸ್ನೇಹಿತ ಫೈಮುಲ್ ಅಲಂ ವಿಮಾನ ಏರಿದ ಬಳಿಕ ಡಬ್ಲುಎಚ್ ಮತ್ತು ಎಂಕೆ ಅವರ ಜೊತೆ ಕುಳಿತುಕೊಳ್ಳುವುದಕ್ಕಾಗಿ ಅಪರಿಚಿತರೊಂದಿಗೆ ಸ್ಥಳ ವಿನಿಮಯ ಮಾಡಿಕೊಂಡರು.

ಕೆಲವು ನಿಮಿಷಗಳ ಬಳಿಕ, ಓರ್ವ ಬಿಳಿಯ ವಿಮಾನ ಪರಿಚಾರಕಿಯು ಡಬ್ಲುಎಚ್‌ರಿಗೆ ವಿಮಾನದಿಂದ ಕೆಳಗಿಳಿಯುವಂತೆ ಸೂಚಿಸಿದರು ಎಂದು ದಾವೆಯಲ್ಲಿ ದೂರಲಾಗಿದೆ. ದಾವೆಯನ್ನು ನಿನ್ನೆ ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯದಲ್ಲಿ ಹೂಡಲಾಗಿದೆ.

ತಮ್ಮನ್ನು ಯಾಕೆ ವಿಮಾನದಿಂದ ಹೊರಹಾಕಲಾಗುತ್ತಿದೆ ಎಂಬುದಾಗಿ ಅವರು ವಿಮಾನ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ‘‘ಶಾಂತಿಯುತವಾಗಿ’’ ಹೋಗಿ ಎಂದು ಪರಿಚಾರಕಿ ಅವರಿಗೆ ಸೂಚಿಸಿದರು. ಅದೂ ಅಲ್ಲದೆ, ಬಳಿಕ, ಬಾಗಿಲಿಗೆ ಹಿಂದಿರುಗಿ ಮುಂದಿನ ಸೂಚನೆಗಳಿಗಾಗಿ ಕಾಯಿರಿ ಎಂದೂ ಹೇಳಿದರು ಎಂದು ದಾವೆಯಲ್ಲಿ ಆರೋಪಿಸಲಾಗಿದೆ.

‘‘ಅವರ ವರ್ತನೆ ನಾನೋರ್ವ ಕ್ರಿಮಿನಲ್ ಎಂಬ ಭಾವನೆಯನ್ನು ನನ್ನಲ್ಲಿ ಮೂಡಿಸಿತು’’ ಎಂದು ಡಬ್ಲುಎಚ್ ನುಡಿದರು. ‘‘ಅದು ನನ್ನನ್ನು ಒಂದು ವೇದಿಕೆಯಲ್ಲಿ ನಿಲ್ಲಿಸಿ ಎಲ್ಲರೂ ನನ್ನತ್ತ ಕೈತೋರಿಸುತ್ತಿದ್ದಂತಿತ್ತು. ಅವರ ಹೆದರಿದ್ದಾರೆ ಎಂದು ನನಗೆ ಹೆದರಿಕೆಯಾಯಿತು’’ ಎಂದರು.

‘‘ನೀವು ವಿಮಾನ ಹತ್ತುವಂತಿಲ್ಲ. ಯಾಕೆಂದರೆ ವಿಮಾನ ಸಿಬ್ಬಂದಿ, ಅದರಲ್ಲೂ ವಿಶೇಷವಾಗಿ ಕ್ಯಾಪ್ಟನ್ ವಿಮಾನದಲ್ಲಿ ನಿಮ್ಮ ಉಪಸ್ಥಿತಿಯಿಂದ ಅಸಂತುಷ್ಟರಾಗಿದ್ದಾರೆ ಹಾಗೂ ನಿಮ್ಮನ್ನು ವಿಮಾನದಿಂದ ಕೆಳಗಿಳಿಸದ ಹೊರತು ವಿಮಾನ ಹಾರಿಸಲು ನಿರಾಕರಿಸಿದ್ದಾರೆ’’ ಎಂಬುದಾಗಿ ವಿಮಾನದ ಪ್ರತಿನಿಧಿಯೊಬ್ಬ ಅವರಿಗೆ ಹೇಳಿದ ಬಳಿಕವಷ್ಟೇ ವಿಮಾನ ಹಾರಾಟ ನಡೆಸಿತು’’ ಎಂದು ವರದಿ ಹೇಳಿದೆ.

ಈ ನಾಲ್ವರು ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಾಟ ನಡೆಸಿತು. ‘‘ಇದು ಶಿಷ್ಟಾಚಾರ ಎಂದು ಅವರು ಹೇಳಿದರು’’ ಎಂದು ಆನಂದ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X