Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುಳ್ಯ : ಹೊಸ ತಿರುವು ಪಡೆದುಕೊಂಡ ಮಗು...

ಸುಳ್ಯ : ಹೊಸ ತಿರುವು ಪಡೆದುಕೊಂಡ ಮಗು ನಾಪತ್ತೆ ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ22 Jan 2016 5:17 PM IST
share
ಸುಳ್ಯ : ಹೊಸ ತಿರುವು ಪಡೆದುಕೊಂಡ ಮಗು ನಾಪತ್ತೆ ಪ್ರಕರಣ

- ದಫನ ಮಾಡಿದ ಮಗುವಿನ ಕಳೇಬರ ಹೊರತೆಗೆದು ಮಹಜರು

- ಅಸಹಜ ಸಾವಿನ ಕುರಿತು ತನಿಖೆ

ಸುಳ್ಯ: ಸುಳ್ಯದ ಕುರುಂಜಿಭಾಗ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬದ ನವಜಾತ ಶಿಶುವಿನ ಅಸಹಜ ಸಾವಿನ ಕುರಿತು ತನಿಖೆ ಆರಂಭವಾಗಿದ್ದು, ದಫನ ಮಾಡಿದ ಕಳೇಬರವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಕಾಸರಗೋಡು ಮೂಲಕ ಹರೀಶ ಎಂಬವರ ಪತ್ನಿ ಕುರುಂಜಿಭಾಗ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಯಮುನಾ ಡಿಸೆಂಬರ್ 30ರಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಜನವರಿ 16ರಂದು ಪೋಲಿಯೋ ಹನಿ ಹಾಕಿಸುವಂತೆ ತಿಳಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ತೆರಳಿದಾಗ ಅಲ್ಲಿ ಮಗು ಇಲ್ಲದಿರುವ ವಿಚಾರದ ಕುರಿತು ಪ್ರಶ್ನಿಸಿದ್ದು, ಮನೆಯವರು ಸಂಶಯಾತ್ಮಕವಾಗಿ ಉತ್ತರ ನೀಡಿದ್ದರು. ಮಗು ಮಾರಾಟ ಜಾಲ ಹೆಚ್ಚಿರುವುದರಿಂದ ಈ ಕುರಿತು ಅಂಗನವಾಡಿ ಸಿಬ್ಬಂದಿ ಸಿಡಿಪಿಒ ಅವರಿಗೆ ತಿಳಿಸಿದ್ದು, ಮಗು ನಾಪತ್ತೆ ಪ್ರಕರಣದ ಕುರಿತು ಶಂಕೆ ವ್ಯಕ್ತಪಡಿಸಿದ್ದರು. ಸಿಡಿಪಿಒ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರೀಶಿಲಿಸಿದಾಗ ಮಗು ಮೃತಪಟ್ಟಿದ್ದು, ಅದನ್ನು ದಫನ ಮಾಡಲಾಗಿದೆ ಎಂದು ಮನೆಯವರು ಧಪನ ಮಾಡಿದ ಸ್ಥಳವನ್ನು ತೋರಿಸಿದ್ದರು. ಧಪನ ಮಾಡಿದ ಶವವನ್ನು ಮತ್ತೆ ಹೊರತೆಗೆಯಲು ಸಹಾಯಕ ಕಮೀಷನರ್ ಅವರ ಅನುಮತಿ ಅಗತ್ಯವಿದ್ದು, ಪೊಲೀಸರು ಪುತ್ತೂರು ಸಹಾಯಕ ಕಮೀಶನರ್ ಅವರ ಅನುಮತಿ ಕೇಳಿದ್ದರು. ಅದರಂತೆ ಶುಕ್ರವಾರ ಎಸಿ ಡಾ.ರಾಜೇಂದ್ರ ಅವರ ಸಮಕ್ಷಮ ದಫನ ಮಾಡಿದ ಮಗುವಿನ ಕಳೇಬರವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವಿಧಿ ವಿಜ್ಞಾನ ತಜ್ಞರಾದ ಡಾ.ಶಾಹ್ ನವಾರ್ ಮಣಿಪ್ಪಾಡಿ, ಡಾ.ಸೂರಜ್ ಶೆಟ್ಟಿ, ಡಾ,ಮಹಾಬಲೇಶ್ ಶೆಟ್ಟಿ ಮತ್ತು ತಂಡದವರು ಮರಣೋತ್ತರ ಪರೀಕ್ಷೆ ನಡೆಸಿದರು. ತಹಶೀಲ್ದಾರ್ ಅನಂತ ಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಸಿಡಿಪಿಒ ಸುಕನ್ಯ, ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯರ ತಂಡ, ಕೆವಿಜಿ ಆಯುವೇದಿಕ್ ಕಾಲೇಜಿನ ಆಡಳಿತಾಧಿಕಾರಿ ಡಾ.ಲೀಲಾಧರ್, . ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷೆ ಡಿ.ಮೀನಾಕ್ಷಿ, ಸದಸ್ಯರಾದ ಶ್ರೀಲತಾ ಪ್ರಸನ್ನ, ಮೋಹಿನಿ ನಾಗರಾಜ್, ಕಿರಣ ಕುರುಂಜಿ ಮೊದಲಾದವರಿದ್ದರು.

ಸಾವಿನ ಸುತ್ತ ಅನುಮಾನದ ಹುತ್ತ

ಕುರುಂಜಿಭಾಗ್‌ನ ನವಜಾತ ಶಿಶು ನಾಪತ್ತೆ ಪ್ರಕರಣ ಇದೀಗ ಹೊಸದೊಂದು ತಿರುವು ಪಡೆದಿದ್ದು, ಆರೋಗ್ಯವಾಗಿದ್ದ ಮಗು ಅಸಜವಾಗಿ ಮೃತಪಟ್ಟಿರುವ ಬಗ್ಗೆ ವ್ಯಾಪಕ ಶಂಕೆಗಳು ವ್ಯಕ್ತವಾಗಿವೆ. ಯಮುನಾ ಮೂಕಿಯಾಗಿದ್ದು, ಆಕೆಯ ಗಂಡ ಹರೀಶ ಕಾಸರಗೋಡಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಮನೆಗೆ ಬಾರದೇ ವರ್ಷವಾಗಿದೆ ಎಂದು ಅವರ ಮಗ 4ನೇ ತರಗತಿಯ ರಾಜೇಶ ಹೇಳಿದ್ದಾನೆ. ಇನ್ನು ಯಮುನಾ ಗರ್ಭಿಣಿಯಾಗಿದ್ದು 8 ತಿಂಗಳಾದರೂ ಆಕೆ ವೈದ್ಯರನ್ನು ಭೇಟಿ ಮಾಡಿರಲಿಲ್ಲ. ತಾನು ಗರ್ಭಿಣಿ ಎಂದು ಆಕೆಗೂ ಗೊತ್ತಿರಲಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಆಕೆಯನ್ನು ಪರೀಕ್ಷಿಸಿ ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಡಿಸೆಂಬರ್ 30ರಂದು ಹೆರಿಗೆ ಆಗಿದೆ. ಈ ಕುರಿತು ಆಸ್ಪತ್ರೆಯಲ್ಲಿ ದಾಖಲೆಗಳಿವೆ. ಮೊದಲಿಗೆ ಮಗು ತನ್ನದಲ್ಲ, ತನ್ನ ಸಹೋದರಿಯದು ಎಂದು ಹೇಳುತ್ತಿದ್ದ ಯಮುನಾ ಬಳಿಕ ಮಗು ತನ್ನದೇ ಎಂದು ಹೇಳಿದ್ದು, ನೆರೆಕರೆಯವರಲ್ಲೂ ಸಂಶಯಕ್ಕೆ ಕಾರಣವಾಗಿತ್ತು. ಯಮುನಾ ಅವರು ಮೂಕಿಯಾಗಿದ್ದರಿಂದ ಅವರು ಕೈಸನ್ನೆ ಮೂಲಕ ನೀಡುವ ಹೇಳಿಕೆ ಮತ್ತು ಆಕೆಯ ಹಿರಿಯ ಮಗ ರಾಜೇಶ್ ನೀಡಿದ ಹೇಳಿಕೆಗಳೂ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಅವರ ಮಗು ಅಸೌಖ್ಯದಿಂದ ಮೃತಪಟ್ಟಿದ್ದು, ತಾವು ಅದನ್ನ ದಫನ ಮಾಡಿರುವ ಸ್ಥಳವನ್ನು ತೋರಿಸಿದ್ದು, ಮಗು ಮಾರಾಟ ಆಗಿಲ್ಲ ಎಂಬದಕ್ಕೆ ಸಾಕ್ಷಿಯಾಗಿತ್ತು. ಆದರೆ ಈಗ ಮಗುವಿನ ಸಾವು ಸಹಜವೋ ಅಥವ ಅಸಜವೋ ಎಂಬ ಪ್ರಶ್ನೆ ಎದುರಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ರಿಪೋರ್ಟ್ ಬಂದ ಬಳಿಕ ಸ್ಪಷ್ಟಗೊಳ್ಳಲಿದೆ. ಪೊಲೀಸರು ಮನೆಯವರ, ನೆರೆ ಮನೆಯವರ ಹೇಳಿಕೆಗಳನ್ನು ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸ್ಥಳ ಮಹಜರಿನ ಮತ್ತು ಮುಂದಿನ ತನಿಖೆ ಬಗ್ಗೆ ಎಸಿ ಡಾ.ರಾಜೇಂದ್ರ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X