Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾರ್ಕಾಳ: ಕವೇರಿದ ತಾ.ಪಂ/ಜಿ.ಪಂ ಚುನಾವಣೆ

ಕಾರ್ಕಾಳ: ಕವೇರಿದ ತಾ.ಪಂ/ಜಿ.ಪಂ ಚುನಾವಣೆ

ಮೊಹಮ್ಮದ್ ಶರೀಫ್, ಕಾರ್ಕಳಮೊಹಮ್ಮದ್ ಶರೀಫ್, ಕಾರ್ಕಳ23 Jan 2016 2:39 PM IST
share

ಕಾಂಗ್ರೆಸ್, ಬಿಜೆಪಿಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದ 

ಕಾರ್ಕಳ : ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ತಾ.ಪಂ ಮತ್ತು ಜಿ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳ ಕಣಕ್ಕಿಳಿಸುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ದತೆ ನಡೆಸುತ್ತಿವೆ. 

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ದಗೊಂಡಿದ್ದು, ಗ್ರಾಮ-ಗ್ರಾಮಗಳಲ್ಲಿರುವ ತಮ್ಮ ಪಕ್ಷದ ಸಮಿತಿಗಳಿಂದ ಸೂಕ್ತ ಅಭ್ಯರ್ಥಿಗಳ ಹೆಸರುಗಳನ್ನು ತರಿಸಿಕೊಳ್ಳಲಾಗಿದೆ. ಅವರಲ್ಲಿ ಯಾರೂ ಅರ್ಹರು ಎನ್ನುವ ಲೆಕ್ಕಚಾರಗಳು ಆರಂಭಗೊಂಡಿದೆ.

ಬಿಜೆಪಿಯ ಭದ್ರಕೋಟೆಯಾಗಿರುವ ಕಾರ್ಕಳದಲ್ಲಿ 2005 ಮತ್ತು 2010ರ ತಾ.ಪಂ. ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಲ್ಲದೆ ಜಿ.ಪಂ.ಸದಸ್ಯರನ್ನು ಕಾರ್ಕಳದಿಂದ ಉಡುಪಿಗೆ ಕಳುಹಿಸಿಕೊಡುವಲ್ಲಿಯೂ ಕಳೆದ ಎರಡು ಅವಧಿಯಲ್ಲೂ ಬಿಜೆಪಿಯು ಕಾಂಗ್ರೆಸನ್ನು ಹಿಂದಿಕ್ಕಿದೆ. 2004ರಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ವಿಧಾನ ಸಭೆ ಚುನಾವಣೆಯನ್ನು ಗೆದ್ದುಕೊಂಡಿದ್ದರೆ, 2008ರಲ್ಲಿ ಕಾಂಗ್ರೆಸ್ ಮಗದೊಮ್ಮೆ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪ್ರಾಬಲ್ಯವನ್ನು ಮೆರೆದಿತ್ತಾದರೂ, ಬಳಿಕ ನಡೆದ ಎಲ್ಲಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮುಗ್ಗರಿಸುತ್ತಲೇ ಸಾಗಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರ ಮತ್ತೆ ಬಿಜೆಪಿ ಪಾಲಾಗಿದ್ದು, ಬಳಿಕದ ಚುನಾವಣೆಗಳಲ್ಲಿ ಬಿಜೆಪಿ ತನ್ನ ಬಲವನ್ನು ವೃದ್ದಿಸಿಕೊಳ್ಳುತ್ತಲೇ ಸಾಗಿದೆ. 2015ರಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಒಟ್ಟು 34 ಗ್ರಾ.ಪಂ.ಗಳ ಪೈಕಿ ಬಿಜೆಪಿ ಬೆಂಬಲಿತ-26, ಕಾಂಗ್ರೆಸ್ ಬೆಂಬಲಿತ-8 ಅಧಿಕಾರ ನಡೆಸುತ್ತಿದ್ದಾರೆ.

ಈ ಹಿಂದಿನ ಅವಧಿಯಲ್ಲಿ ತಾ.ಪಂ.ಸದಸ್ಯರ ಪೈಕಿ ಬಿಜೆಪಿ-14 ಮತ್ತು ಕಾಂಗ್ರೆಸ್-5, ಜಿ.ಪಂ.ಸದಸ್ಯರ ಪೈಕಿ ಬಿಜೆಪಿ-3, ಕಾಂಗ್ರೆಸ್-2 ಬಲಾಬಲ ಹೊಂದಿದೆ. ಅಲ್ಲದೆ ಎಪಿಎಂಸಿ ಕೂಡಾ ಬಿಜೆಪಿ ಕೈಯಲ್ಲಿದೆ. ಪರಿಣಾಮ ಬಿಜೆಪಿಯಲ್ಲಿ ಸ್ಪರ್ಧೆಗಿಳಿಯುವ ಆಕಾಂಕ್ಷಿಗಳ ಪಟ್ಟಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಉಮೇದ್ವಾರ ಸಂಖ್ಯೆ ಕೂಡಾ ಹೆಚ್ಚಿದ್ದು, ಅವಕಾಶಕ್ಕಾಗಿ ಲಾಭಿಯೂ ಆರಂಭಗೊಂಡಿದೆ.

ಜಿ.ಪಂ. ಕ್ಷೇತ್ರ:

ಹೆಬ್ರಿ, ಬಜಗೋಳಿ, ಬೈಲೂರು, ಮಿಯಾರು ಮತ್ತು ಬೆಳ್ಮಣ್ಣು ಐದು ಜಿ.ಪಂ. ಕ್ಷೇತ್ರಗಳು ಕಾರ್ಕಳದಲ್ಲಿದೆ. ಈ ಹಿಂದೆ ಜಿ.ಪಂ.ಸದಸ್ಯರಾದವರು ಹಾಗೂ ಹೈಕಮಾಂಡ್ ಎನಿಸಿಕೊಂಡವರು ತಮ್ಮ ಸ್ವ-ಕ್ಷೇತ್ರ ಬಿಟ್ಟು ಅನ್ಯ ಕ್ಷೇತ್ರಗಳಿಗೆ ವಲಸೆ ಹೋಗುತ್ತಿರುವುದು, ಅನೇಕ ವರ್ಷಗಳಿಂದ ಪಕ್ಷದಲ್ಲಿ ದುಡಿದ ಹಿರಿಯ ಕಾರ್ಯಕರ್ತರು ಹಾಗೂ ಸಕ್ರೀಯ ಕಾರ್ಯಕರ್ತರಿಗೆ ನೋವು ತಂದಿದೆ.

ತಮ್ಮ ಕ್ಷೇತ್ರಕ್ಕೆ ದೊರೆತ ಮೀಸಲಾತಿಯನ್ವಯ ತಮಗೆ ಅವಕಾಶವಿರಬಹುವುದು ಎಂದು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದವರೂ ಕೂಡಾ, ಅವಕಾಶ ವಂಚಿತರಾಗಿ ಮತ್ತೆ ಕಾರ್ಯಕರ್ತರಾಗಿ ದುಡಿಯಬೇಕಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಜಾತಿ ಲೆಕ್ಕಚಾರ :

ಜಿ.ಪಂ.ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡು ಬಂಟ ಮತ್ತು ಬಿಲ್ಲವ ಸಮುದಾಯಗಳಿಗೆ ಪ್ರಾಧಾನ್ಯತೆ ನೀಡುತ್ತಿದೆ. ಜಾತಿ ಮತಗಳು ವಿಭಜನೆಯಗಬಾರದು ಎನ್ನುವ ಲೆಕ್ಕಚಾರವು ಅನ್ಯ ಸಮುದಾಯದ ಜನತೆಯನ್ನು ಕೆರಳಿಸಿದೆ.

ತಾಲೂಕಿನಲ್ಲಿ ಶೇ. 44ರಷ್ಟು ಮಾತ್ರ ಬಂಟ ಮತ್ತು ಬಿಲ್ಲವ ಮತಗಳಿದ್ದು, ಬಾಕಿ ಉಳಿದ ಶೇ.56ರಷ್ಟು ಇತರ ಸಮುದಾಯಗಳ ಮತಗಳಿದೆ. ತಮ್ಮಮ್ಮ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಬೇಕೆನ್ನುವ ಬೇಡಿಕೆಗಳು ಕೂಡಾ ಹೆಚ್ಚಿದೆ. ಇದು ಅಭ್ಯರ್ಥಿಗಳ ಆಯ್ಕೆಯ ವೇಳೆ ಪಕ್ಷದ ನಾಯಕರಿಗೆ ತಲೆ ನೋವು ತಂದಿಕ್ಕಿದೆ.

ಜಿ.ಪಂ. ಸಂಭಾವ್ಯ ಅಭ್ಯರ್ಥಿಗಳು:

ಹೆಬ್ರಿ ಕ್ಷೇತ್ರ : (ಸಾಮಾನ್ಯ ಮಹಿಳೆ) ಕಾಂಗ್ರೆಸ್ - ಸುಜಾತ ಲಕ್ಷ್ಮಣ್, ಶಶಿಕಲಾ ಪೂಜಾರಿ, ಸುಮ ಅಡ್ಯಂತಾಯ ಬಿಜೆಪಿ - ಜ್ಯೋತಿ ಹರೀಶ್, ಪ್ರಮೀಳ ಹರೀಶ್

ಬಜಗೋಳಿ ಕ್ಷೇತ್ರ : (ಹಿಂದುಳಿದ ಎ)
ಕಾಂಗ್ರೆಸ್- ಮಂಜುನಾಥ ಪೂಜಾರಿ, ರವಿಶಂಕರ್ ಶೇರಿಗಾರ್.
ಬಿಜೆಪಿ - ನವೀನ್ ನಾಯಕ್, ಹರೀಶ್ಚಂದ್ರ ತೆಂಡುಲ್ಕರ್, ಉದಯ ಎಸ್.ಕೋಟ್ಯಾನ್.
      
ಬೈಲೂರು ಕ್ಷೇತ್ರ : (ಸಾಮಾನ್ಯ)
ಕಾಂಗ್ರೆಸ್ - ನೀರೆ ಕೃಷ್ಣ ಶೆಟ್ಟಿ, ಡಾ.ಸಂತೋಷ್ ಕುಮಾರ್ ಶೆಟ್ಟಿ.
ಬಿಜೆಪಿ : ವಿಕ್ರಂ ಹೆಗ್ಡೆ, ಸುಮಿತ್ ಶೆಟ್ಟಿ, ಅಂತೋನಿ ಡಿಸೋಜಾ.

 ಮಿಯಾರು ಕ್ಷೇತ್ರ :(ಹಿಂದುಳಿದ ಎ. ಮಹಿಳೆ)

ಕಾಂಗ್ರೆಸ್ : ವಿಜಯ ಉದಯ ಸಾಲಿಯಾನ್. ಬಿಜೆಪಿ : ದಿವ್ಯಾಶ್ರೀ ಜಿ.ಅಮೀನ್.

ಬೆಳ್ಮಣು ್ಣ ಕ್ಷೇತ್ರ : (ಹಿಂದುಳಿದ ಬಿ.ಮಹಿಳೆ)
ಕಾಂಗ್ರೆಸ್ : ಚಿತ್ರಾ ಶೆಟ್ಟಿ, ರೇಷ್ಮ ಎಸ್.ಶೆಟ್ಟಿ, ಜಾಯ್ಸಿ ಟೆಲ್ಲೀಸ್.
 

ಬಿಜೆಪಿ : ರೇಷ್ಮಾ ಶೆಟ್ಟಿ, ನಿರ್ಮಲ ಎಸ್. ಶೆಟ್ಟಿ, ಸೌಮ್ಯ ಶೆಟ್ಟಿ.

ಅಭಿಪ್ರಾಯ :

 ಚುನಾವಣೆಯ ಪೂರ್ವ ತಯಾರಿಯಲ್ಲಿ ನಾವು ತೊಡಗಿಸಿಕೊಂಡಿದ್ದು, ಐದು ಜಿ.ಪಂ ಹಾಗೂ 16 ತಾ.ಪಂ. ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ. ಸ್ಪರ್ಧೆಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲು ತಯಾರಿ ನಡೆಸಿದ್ದೇವೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದ್ದು, ಅಂತಿಮ ಕ್ಷಣದಲ್ಲಿ ಕೆಲವು ಬದಲಾವಣೆಗಳಿಗೂ ಸಾಧ್ಯತೆಗಳಿವೆ ಎನ್ನುತ್ತಾರೆ ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ.

* ಕಾರ್ಕಳ ತಾಲೂಕು ಪಂಚಾಯಿತಿಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಳೆದ ಹತ್ತು ವರ್ಷಗಳಲ್ಲಿ ತಾ.ಪಂ.ನಲ್ಲಿ ಬಿಜೆಪಿ ಆಡಳಿತವಿತ್ತು. ಜನ ಬದಲಾವಣೆಯನ್ನು ಬಯಸಿದ್ದಾರೆ. ಆದ್ದರಿಂದ ತಾ.ಪಂ/ಜಿ.ಪಂ.ನ ಪ್ರತಿ ಕ್ಷೇತ್ರದಲ್ಲೂ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ರಾಜ್ಯ ಸರಕಾರದ ಸಾಧನೆ ಹಾಗೂ ಸವಲತ್ತುಗಳು ಫಲಾನುಭವಿಗಳಿಗೆ ತಲುಪಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆಯಿದೆ ಎನ್ನುತ್ತಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್. 

share
ಮೊಹಮ್ಮದ್ ಶರೀಫ್, ಕಾರ್ಕಳ
ಮೊಹಮ್ಮದ್ ಶರೀಫ್, ಕಾರ್ಕಳ
Next Story
X