ಕಾಸರಗೋಡು: ಸ್ತ್ರೀ ಸ್ವಾಭಿಮಾನ್ ಯಾತ್ರೆ ಗೆ ಚಾಲನೆ

ಕಾಸರಗೋಡು : ಮೆಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಯಿಂದ ಸಮಾಜ ಮುಕ್ತಗೊಳ್ಳಬೇಕು, ಯುವ ತಲೆಮಾರು ತಪ್ಪುದಾರಿಗೆ ತೆರಳುತ್ತಿದ್ದು , ಮಹಿಳೆ ಗೆ ಲಭಿಸಬೇಕಾದ ಗೌರವ ಇಂದು ಲಭಿಸುತ್ತಿಲ್ಲ ಎಂದು ಗೋವಾ ರಾಜ್ಯಪಾಲೆ ಮ್ರದುಲ ಸಿನ್ಹಾ ಅಭಿಪ್ರಾಯಪಟ್ಟರು.
ಅವರು ಆದಿತ್ಯವಾರ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರ ದಲ್ಲಿ ಸ್ತ್ರೀ ಸ್ವಾಭಿಮಾನ್ ಯಾತ್ರೆ ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು . ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಸುವರ್ಣ ಜಯಂತಿಯಂಗವಾಗಿ
ಮಾತ್ರ ಸಮಿತಿ ರಾಜಾಧ್ಯಕ್ಷೆ ಪ್ರೊ. ವಿ . ಟಿ ರಮಾ ನೇತ್ರತ್ವದ ಈ ಯಾತ್ರೆ ಕುಂಬಳೆ ಯ ಅನಂತಪುರದಿಂದ ಹೊರಟು ತಿರುವನಂತಪುರದ ಅನಂತಪುರಿಯಲ್ಲಿ ಕೊನೆಗೊಳ್ಳಲಿದೆ.
ಹೆಣ್ಮಕ್ಕಳಲ್ಲಿ ಕೌಟು೦ಬಿಕ ಜ್ಞಾನ ತುಂಬಿಸಬೇಕು. ಗೌರವ , ಪ್ರೀತಿ ಬದಲು ಅನೈತಿಕತೆ ಸಮಾಜದಲ್ಲಿ ತುಂಬಿದೆ. ಮೆಹಿಲೆ ಭೋಗದ ವಸ್ತುವಾಗಿ ಕೆಲವರು ಕಾಣುತ್ತಿದ್ದಾರೆ. ಮಹಿಳೆಯನ್ನು ಮೊದಲು ಗೌರವಿಸಬೆಕು ಎಂದು ಹೇಳಿದರು.
ಸಮಾರಂಭದಲ್ಲಿ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು.
ಕಜಂಪಾಡಿ ಸುಬ್ರಹ್ಮಣ್ಯ ಭಟ್ , ಪಿ. ಗೋಪಾಲನ್ ಕುಟ್ಟಿ ಮಾಸ್ಟರ್, ನ್ಯಾಯವಾದಿ ಕೆ. ಬಲರಾಂ, ಎ .ಕೆ . ಬಿ ನಾಯರ್ , ಸ್ವಾಮಿ ಅಯ್ಯಪ್ಪದಾಸ್ , ಕೆ. ಎಸ್ ನಾರಾಯಣನ್ , ಸಂಧ್ಯಾ ವಿ. ಶೆಟ್ಟಿ , ಶಾಂತಾ ಎಸ್. ಪಿಳ್ಳೆ , ಪ್ರಮೀಳಾ ಸಿ. ನಾಯಕ್ , ನಿಶಾ ಸುಮನ್ , ರಾಜನ್ ಮುಳಿಯಾರು ಮೊದಲಾದವರು ಉಪಸ್ಥಿತರಿದ್ದರು.
ಯಾತ್ರೆ ಫೆಬ್ರವರಿ ಏಳರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ .






